ಸಂದೀಪ್ ವಾಗ್ಲೆಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲೇ ನಿಷೇಧಿತ ಪಟಾಕಿ ತಯಾರಿ:ಕದೊನಿ, ಗರ್ನಲ್ ಇತ್ಯಾದಿ ಸುಡುಮದ್ದುಗಳಲ್ಲಿ ನಿಷೇಧಿತ ನೈಟ್ರೋಕ್ಲೋರೈಡ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ. ದೊಡ್ಡ ಮಟ್ಟದ ಶಬ್ದ ಉಂಟಾಗಲು ಇದೇ ಕಾರಣ. ಕಾಸರಗೋಡಿನ ನೀಲೇಶ್ವರದಲ್ಲಿ ನಡೆದ ಅವಘಡದಲ್ಲಿ ಒಂದು ವೇಳೆ ಹಸಿರು ಪಟಾಕಿ ಇದ್ದಿದ್ದರೆ ಇಷ್ಟು ದೊಡ್ಡ ಅನಾಹುತ ಸಂಭವಿಸುತ್ತಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ನಿಷೇಧಿತ ಸುಡುಮದ್ದು ತಯಾರಿಸುವ ಕೆಲಸ ನಡೆಯುತ್ತಿದೆ. ಅವುಗಳನ್ನು ಮಟ್ಟ ಹಾಕುವ ಕೆಲಸ ಮಾಡದಿದ್ದರೆ ಇಲ್ಲೂ ಅಂತಹ ಅವಘಡ ಸಂಭವಿಸುವ ದಿನ ದೂರವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುತ್ತಾರೆ.ಹಸಿರು ಪಟಾಕಿಗಳನ್ನೇ ಖರೀದಿಸಿ: ‘‘ಅಪಾಯಕಾರಿ ರಾಸಾಯನಿಕಗಳಿಂದ ತಯಾರಿಸಿದ ಪಟಾಕಿಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಹಸಿರು ಪಟಾಕಿಗಳಲ್ಲಿ ಶಬ್ದ ಹಾಗೂ ಅನಾಹುತದ ತೀವ್ರತೆಯನ್ನು ಕಡಿಮೆ ಮಾಡಲಾಗಿದೆ. ಕರಾವಳಿಗೆ ಬರುವ ಬಹುತೇಕ ಹಸಿರು ಪಟಾಕಿಗಳು ಸರಬರಾಜು ಆಗುವುದು ತಮಿಳುನಾಡಿನ ಶಿವಕಾಶಿಯಿಂದ. ಅಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಕಾನೂನು ಪ್ರಕಾರ ತಯಾರಾಗಿ ಬರುತ್ತವೆ. ಗ್ರಾಹಕರು ನಿಷೇಧಿತ ಪಟಾಕಿಗಳನ್ನು ಖರೀದಿ ಮಾಡಬಾರದು” ಎನ್ನುತ್ತಾರೆ ಹೋಲ್ಸೇಲ್ ಮತ್ತು ರಿಟೇಲ್ ಪಟಾಕಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆಲ್ವಿನ್ ಪಿಂಟೋ.
ಜನನಿಬಿಡ ಸ್ಥಳಗಳಲ್ಲೇ ಪಟಾಕಿ ಅಂಗಡಿ!:ಪಟಾಕಿ ಅಂಗಡಿಗಳು ಜನವಸತಿ ಪ್ರದೇಶವಲ್ಲದ ಬಯಲು ಪ್ರದೇಶದಲ್ಲಿರಬೇಕು, ಮುನ್ನೆಚ್ಚರಿಕಾ ವ್ಯವಸ್ಥೆಗಳಿರಬೇಕು ಎಂಬಿತ್ಯಾದಿ ಹಲವು ನಿಬಂಧನೆಗಳಿವೆ. ಆದರೆ ಮಂಗಳೂರು ನಗರದಲ್ಲಿ ಹೆಚ್ಚಿನ ಪಟಾಕಿ ಅಂಗಡಿಗಳು ಇರೋದು ಜನವಸತಿ ಪ್ರದೇಶದಲ್ಲಿ. ಆಡಳಿತದ ಒಪ್ಪಿಗೆಯಿಂದಲೇ ಇವು ನಡೆಯುತ್ತಿವೆ ಎಂಬ ಆರೋಪವಿದೆ.-----------ರಾಜಕೀಯ ಪಕ್ಷಗಳ ಪಟಾಕಿಗಳು ನಿಷೇಧಿತ!
----------ಹಸಿರು ಪಟಾಕಿ ವಿಚಾರದ ಕುರಿತು ಸರ್ಕಾರದ ನಿರ್ದಿಷ್ಟ ನಿರ್ದೇಶನಗಳಿದ್ದು, ಅದರ ಪ್ರಕಾರವೇ ಪರವಾನಗಿ ನೀಡುವುದು, ನಿರ್ಬಂಧ ವಿಧಿಸುವ ಕ್ರಮಗಳು ನಡೆಯುತ್ತಿವೆ. ತಾತ್ಕಾಲಿಕ ಸುಡುಮದ್ದು ಮಾರಾಟದ ಸಂದರ್ಭದಲ್ಲೂ ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡಿ, ಅಗ್ನಿ ಶಾಮಕದಳ ಎನ್ಒಸಿ ನೀಡಿದ ಬಳಿಕವೇ ಅವಕಾಶ ನೀಡಲಾಗುತ್ತಿದೆ. ಮೊನ್ನೆ ನೀಲೇಶ್ವರದಲ್ಲಿ ನಡೆದಂಥ ಅನಾಹುತದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅಂತಹ ಕಾರ್ಯಕ್ರಮಗಳಲ್ಲಿ ಯಾವ ಕ್ರಮ ವಹಿಸಬೇಕು ಅಂತ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಮುಲ್ಲೈ ಮುಗಿಲನ್ ಎಂ.ಪಿ., ದ.ಕ. ಜಿಲ್ಲಾಧಿಕಾರಿ.