ಭಾವೈಕ್ಯದ ಮೊಹರಂಗೆ ಭಕ್ತಿಯ ತೆರೆ

KannadaprabhaNewsNetwork |  
Published : Jul 18, 2024, 01:42 AM IST
ಮುಂಡಗೋಡದಲ್ಲಿ ಅಲಾಯಿ ದೇವರ ಹೋಗುವ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಹಬ್ಬದ ಪ್ರಾಮುಖ್ಯತೆ ಹೆಚ್ಚು. ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮೆರುಗುಗಳೊಂದಿಗೆ ಗ್ರಾಮ ಮಟ್ಟಗಳಲ್ಲಿ ಯಾವುದೇ ಜಾತಿ ಕಟ್ಟಳೆಗಳಿಲ್ಲದೇ ಆಚರಿಸಲಾಯಿತು.

ಮುಂಡಗೋಡ: ಹಿಂದು- ಮುಸ್ಲಿಂ ಭಾವೈಕ್ಯ ಬೆಸೆಯುವ ಹಬ್ಬವೆಂದೇ ಕರೆಯಲಾಗುವ ಮೊಹರಂ ಹಬ್ಬಕ್ಕೆ ಕಡೆಯ ದಿನವಾದ ಬುಧವಾರ ಬಹುತೇಕ ಕಡೆಗೆ ದೇವರು ಮೆರವಣಿಗೆಯೊಂದಿಗೆ ಹೊಳೆಗೆ ಹೋಗುವ ಸಂಪ್ರದಾಯದೊಂದಿಗೆ ತೆರೆ ಬಿದ್ದಿದೆ. ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಹಬ್ಬದ ಪ್ರಾಮುಖ್ಯತೆ ಹೆಚ್ಚು. ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮೆರುಗುಗಳೊಂದಿಗೆ ಗ್ರಾಮ ಮಟ್ಟಗಳಲ್ಲಿ ಯಾವುದೇ ಜಾತಿ ಕಟ್ಟಳೆಗಳಿಲ್ಲದೇ ಆಚರಿಸಲಾಯಿತು.ಕಳೆದ ಐದು ದಿನಗಳ ಹಿಂದೆ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಪಂಜಾಗಳನ್ನು ಪ್ರತಿಷ್ಠಾಪಿಸಿಲಾಗಿತ್ತು. ತಾಲೂಕಿನ ಪಾಳಾ, ಮಳಗಿ, ಕಾತೂರ, ಚವಡಳ್ಳಿ, ಅಂದಲಗಿ, ಚಿಗಳ್ಳಿ, ಹುನಗುಂದ ಹಾಗೂ ಇಂದೂರ ಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಬಾರಿಯು ಹೆಜ್ಜೆ ಮಜಲು ಸೇರಿದಂತೆ ವಿವಿಧ ಸಾಂಸ್ಕೃತಿಕ ವೇಷಗಳ ಮೆರವಣಿಗೆ ಹಾಗೂ ಹುಲಿ ವೇಷಧಾರಿಗಳ ಘರ್ಜನೆಯೊಂದಿಗೆ ಪಂಜಾಗಳ ಸವಾರಿ ಹೊರಡಿಸಲಾಗಿತ್ತು. ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಹೊರಟ ಮೆರವಣಿಗೆಗೆ ಗ್ರಾಮಸ್ಥರೆಲ್ಲರೂ ಸಕ್ಕರೆ, ಬೆಲ್ಲ, ಊದು ಕೊಟ್ಟು ಪೂಜೆ ಸಲ್ಲಿಸಿದರು. ಹುಲಿ ವೇಷಧಾರಿಗಳ ಆಕರ್ಷಕ ಕುಣಿತ ಹಾಗೂ ಘರ್ಜನೆ ನೋಡುಗರ ಗಮನ ಸೆಳೆಯಿತು. ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಮೊಹರಂ ಆಚರಣೆ: ಮುಸ್ಲಿಮರ ಒಂದೇ ಒಂದು ಮನೆ ಕೂಡ ಇಲ್ಲದ ತಾಲೂಕಿನ ಬಸವನಕೊಪ್ಪ ಹಾಗೂ ಅಜ್ಜಳ್ಳಿ ಗ್ರಾಮದಲ್ಲಿ ಹಿಂದೂಗಳೇ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಹಲವಾರು ವರ್ಷಗಳಿಂದ ಹಿಂದುಗಳೇ ೫ ದಿನಗಳ ಕಾಲ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿ ಸಂಪ್ರದಾಯಬದ್ಧವಾಗಿ ಹಬ್ಬವನ್ನು ಆಚರಣೆ ಮಾಡುವುದು ವಿಶೇಷ. ಹಿಂದು- ಮುಸ್ಲಿಂ ಎಂಬ ದ್ವೇಷದ ಜ್ವಾಲೆ ಬೆಳೆಸಿಕೊಳ್ಳುವವರಿಗೆ ಈ ಗ್ರಾಮಸ್ಥರು ಮಾದರಿಯಾಗಿದ್ದಾರೆ. ದಾಂಡೇಲಿಯಲ್ಲಿ ಮೊಹರಂ ಆಚರಣೆ

ದಾಂಡೇಲಿ: ನಗರದಲ್ಲಿ ಎಲ್ಲೆಡೆ ಹಿಂದೂ- ಮುಸ್ಲಿಮರು ಭಾವೈಕ್ಯದಿಂದ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.ಮೊಹರಂ ಅಂಗವಾಗಿ ನಗರದ ಗಾಂಧಿನಗರ ಸುಭಾಶನಗರ ಮಾರುತಿನಗರ ಪಟೇಲನಗರ ಹಳೆ ದಾಂಡೇಲಿ ಹಳಿಯಾಳ ರಸ್ತೆ ಅಂಬೇವಾಡಿಯ ಪ್ರಮುಖ ರಸ್ತೆಗಳಲ್ಲಿ ಪೀರ್ ದೇವರುಗಳ ಮೆರವಣಿಗೆ ನಡೆಯಿತು. ವಿವಿಧೆಡೆ ಸಂಚರಿಸಿದ ಪೀರ್ ದೇವರುಗಳಿಗೆ ನಮಿಸಿದ ಜನತೆ ಕಾಯಿ, ಊದು, ಸಕ್ಕರೆ ಲೋಬಾನ ಕೊಟ್ಟು ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿದರು.ಬೆಳಗಿನ ಜಾವ ಬೆಂಕಿಯ ಕೆಂಡದಲ್ಲಿ ಹಾಯ್ದು ಕೆಲವರು ಭಕ್ತಿ ಸಮರ್ಪಿಸಿದರು. ಹಿಂದು- ಮುಸ್ಲಿಮರು ಜತೆಯಾಗಿ ಅಲಾವಿ ಕುಣಿತಕ್ಕೆ ಹೆಜ್ಜೆ ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ