ಕನ್ನಡಪ್ರಭ ವಾರ್ತೆ, ಶೃಂಗೇರಿ
ಪಟ್ಟಣದ ತಾಲೂಕು ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಗಳ ಸಂಘದ ಪದಾಧಿಕಾರಿಗಳು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು ಮೂರನೆಯ ದಿನವೂ ಮುಂದುವರಿದಿದೆ.ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಪ್ರಭುಗೌಡ ಮಾತನಾಡಿ, ಸಾರ್ವಜನಿಕರಿಗೆ ನೇರವಾಗಿ ಸೇವೆ ನೀಡುವ ಗ್ರಾಮ ಅಧಿಕಾರಿಗಳಿಗೆ ಸುರಕ್ಷತಾ ಸೌಲಭ್ಯಗಳೇ ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ, ನೆರೆ, ಬರ ಸೇರಿದಂತೆ ಕ್ಲಿಷ್ಟಕರ ಸಂದರ್ಭಗಳಲ್ಲಿಯೂ ಜನರ ಸೇವೆ ಮಾಡುವ ಅಧಿಕಾರಿ ಗಳಿಗೆ ಯಾವುದೇ ಭದ್ರತೆಯಿಲ್ಲ ಎಂದರು.
ಕೆಲಸದ ಒತ್ತಡ. ಕೆಲವೆಡೆಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆಗಳು ನಡೆದಿವೆ. ಎಲ್ಲವನ್ನು ಸಹಿಸಿ ಒತ್ತಡದ ನಡುವೆಯೂ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಮೂಲಭೂತ ಸೌಕರ್ಯರ್ಯಗಳ ಕೊರತೆ, ರಕ್ಷಣೆ, ಸುರಕ್ಷತೆಗಳ ಕೊರತೆ ಎದುರಿಸುತ್ತಾ ಬಂದಿದ್ದರು ನಮ್ಮ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿಗಳಿಲ್ಲ. ಟೇಬಲ್, ಕುರ್ಚಿ ಸೇರಿದಂತೆ ಗುಣಮಟ್ಟದ ಪರಿಕರಗಳಿಲ್ಲ. ಉತ್ತಮ ಗುಣಮಟ್ಟದ ಮೊಬೈಲ್ ಗಳಿಲ್ಲ. ಲ್ಯಾಪ್ ಟ್ಯಾಪ್, ಪ್ರಿಂಟರ್, ಸ್ಕ್ಯಾನರ್ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಇದರಿಂದ ಕಚೇರಿ ಕಾರ್ಯನಿರ್ವಹಿಸುವುದು ಕಷ್ಟ. ವೇತನ ತಾರತಮ್ಯ, ಆರೋಗ್ಯ ಸೌಲಭ್ಯ, ಸೇರಿದಂತೆ ಸಮಸ್ಯೆಗಳಿವೆ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಶಿಲ್ಪ ಮಾತನಾಡಿ ಮಹಿಳಾ ಗ್ರಾಮ ಅಧಿಕಾರಿಗಳಿಗೆ ಸರ್ಕಾರ ಸುರಕ್ಷತಾ ಸೌಲಭ್ಯ ನೀಡಬೇಕಿದೆ. ಗ್ರಾಮ ಆಡಳಿತ ಅಧಿಕಾರಿಗಳು ಕುಟುಂಬದೊಂದಿಗೆ ನೆಮ್ಮದಿಯಿಂದ ಜೀವನ ನಿರ್ವಹಿಸಲು ವರ್ಗಾವಣೆ ಅವಧ್ಯಕತೆಯಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವ ಗ್ರಾಮ ಆಡಳಿತ ಆಧಿಕಾರಿಗಳಿಗೆ ಕಾನೂನಿನ ರಕ್ಷಣೆ ಒದಗಿಸಿಕೊಡಬೇಕು. ಕೆಲಸದ ಒತ್ತಡ ಕಡಿಮೆ ಮಾಡಬೇಕು. ಎಲ್ಲಾ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಬೇಕು ಎಂದರು.ಶಾಮಪ್ಪ,ಲಕ್ಷಣ,ಅನುಷ ಮತ್ತಿತರರು ಇದ್ದರು.12 ಶ್ರೀ ಚಿತ್ರ 2-ಶೃಂಗೇರಿ ತಾಲೂಕು ಕಚೇ್ರಿ ಎದರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿ ಸಂಘದ ಪದಾದಿಕಾರಿಗಳ ಅನಿರ್ದಿಷ್ಟಾವದಿ ಮುಷ್ಕರ ಮೂರನೇಯ ದಿನವೂ ಮುಂದುವರಿಯಿತು.