ಖಾಲಿ ಗಾಡಾ ಓಡಿಸುವ ಶರ್ಯತ್ತು ಸಂಪನ್ನ

KannadaprabhaNewsNetwork |  
Published : Dec 18, 2025, 04:00 AM IST
ಸಂಪನ್ನ | Kannada Prabha

ಸಾರಾಂಶ

ಖಾನಾಪುರ: ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅದೃಶ್ಯಾನಂದ ವಿಶ್ವಸ್ಥ ಮಂಡಳಿ ವತಿಯಿಂದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಜಂಗಿ ಶರ್ಯತ್ತು ಸೋಮವಾರ ಸಂಪನ್ನಗೊಂಡಿತು. ಗ್ರಾಮದ ಹೊರವಲಯದ ಚುಂಚವಾಡ ರಸ್ತೆ ಪಕ್ಕದ ಮೈದಾನದಲ್ಲಿ ಆರಂಭಗೊಂಡ ಶರ್ಯತ್ತನ್ನು ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಉದ್ಘಾಟಿಸಿದರು.

ಖಾನಾಪುರ: ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅದೃಶ್ಯಾನಂದ ವಿಶ್ವಸ್ಥ ಮಂಡಳಿ ವತಿಯಿಂದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಜಂಗಿ ಶರ್ಯತ್ತು ಸೋಮವಾರ ಸಂಪನ್ನಗೊಂಡಿತು. ಗ್ರಾಮದ ಹೊರವಲಯದ ಚುಂಚವಾಡ ರಸ್ತೆ ಪಕ್ಕದ ಮೈದಾನದಲ್ಲಿ ಆರಂಭಗೊಂಡ ಶರ್ಯತ್ತನ್ನು ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಉದ್ಘಾಟಿಸಿದರು.

ಈ ವೇಳೆ ಮಾತನಾಡಿ, ಶಾಸಕ ಹಲಗೇಕರ ಅವರು ಕಕ್ಕೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಿರುವ ವಿವಿಧ ಅನುದಾನಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಈ ಭಾಗದ ರೈತರು ಲೈಲಾ ಶುಗರ್ ಕಾರ್ಖಾನೆಗೆ ಹೆಚ್ಚು ಕಬ್ಬು ಸಾಗಣೆ ಮಾಡಿ ಸಹಕರಿಸುವಂತೆ ಮನವಿ ಮಾಡಿದರು.ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹ 25,000 ಮತ್ತು ಪ್ರಶಸ್ತಿ ಫಲಕವನ್ನು ಸದಾನಂದ ಪಾಟೀಲ ವಿತರಿಸಿದರು. ದ್ವಿತೀಯ ಬಹುಮಾನ ₹ 21,000 ಮತ್ತು ಫಲಕವನ್ನು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದಪ್ಪ ಪಾಟೀಲ ವಿತರಿಸಿದರು. ಉಳಿದ ಬಹುಮಾನಗಳನ್ನು ಗ್ರಾಮದ ಹಿರಿಯರು ವಿಜೇತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷ ವಿಠ್ಠಲ ಹಿಂಡಲಕರ, ಕಕ್ಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಭೀಮಪ್ಪ ಅಂಬೋಜಿ, ಬಿಜೆಪಿ ಹಿರಿಯ ಮುಖಂಡ ಡಾ.ಪ್ರಸನ್ನ ದೊಡ್ಡಬೈಲಕರ, ರವಿ ಪಾಟೀಲ, ಸದಾನಂದ ಮಾಸೇಕರ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ