ತಾಯ್ನಾಡಿಗೆ ಆಗಮಿಸಿದ ಯೋಧನಿಗೆ ಅದ್ದೂರಿ ಸ್ವಾಗತ

KannadaprabhaNewsNetwork |  
Published : Sep 09, 2024, 01:43 AM IST
8ಬಿಎಸ್ವಿ02- 21 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರನ್ನು ಶ್ರೀಗಳು, ವಿವಿಧ ಗಣ್ಯರು ಸನ್ಮಾನಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ 21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರನ್ನು ಸ್ವಾಗಿತಿಸಿ ಪಟ್ಟಣದ ಯಾತ್ರಿ ನಿವಾಸದಲ್ಲಿ ಸನ್ಮಾನಿಸಲಾಯಿತು. ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸೈನಿಕ, ಶಿಕ್ಷಕ,ಕೃಷಿಕ ಈ ಮೂವರು ದೇಶಕ್ಕೆ ಅತಿ ಅಗತ್ಯವಾಗಿ ಬೇಕು. ಇವರೆಲ್ಲರ ಸೇವೆ ಅತ್ಯಮೂಲ್ಯ. ಇವರ ಸೇವೆ ಅನನ್ಯ. ಈ ಮೂರು ರತ್ನಗಳಿಗೆ ಎಲ್ಲರೂ ಸದಾ ಗೌರವಿಸಬೇಕೆಂದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರನ್ನು ಸ್ವಾಗಿತಿಸಿ ಪಟ್ಟಣದ ಯಾತ್ರಿ ನಿವಾಸದಲ್ಲಿ ಸನ್ಮಾನಿಸಲಾಯಿತು.

ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸೈನಿಕ, ಶಿಕ್ಷಕ,ಕೃಷಿಕ ಈ ಮೂವರು ದೇಶಕ್ಕೆ ಅತಿ ಅಗತ್ಯವಾಗಿ ಬೇಕು. ಇವರೆಲ್ಲರ ಸೇವೆ ಅತ್ಯಮೂಲ್ಯ. ಇವರ ಸೇವೆ ಅನನ್ಯ. ಈ ಮೂರು ರತ್ನಗಳಿಗೆ ಎಲ್ಲರೂ ಸದಾ ಗೌರವಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ತಾಯ್ನಾಡಿಗೆ ಆಗಮಿಸಿದ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರ ಸೇವೆ ಅನುಪಮವಾಗಿದೆ. ಈ ಕುಟುಂಬದ ಸಹೋದರರು ಸಹ ಸೇನೆಯಲ್ಲಿ ಸೇರ್ಪಡೆಯಾಗಿ ದೇಶ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ. ಇದು ನಮ್ಮ ಬಸವನಾಡಿಗೆ ಹೆಮ್ಮೆ ಸಂಗತಿಯಾಗಿದೆ ಎಂದರು.

ಪಿಕೆಪಿಎಸ್ ಬ್ಯಾಂಕ್‌ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ನಾವೆಲ್ಲರೂ ದೇಶಭಕ್ತರು ಆಗಬೇಕು. ತಂದೆ-ತಾಯಿ, ಮಕ್ಕಳು, ಸ್ನೇಹಿತರನ್ನು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಗಡಿ ಕಾಯುವ ಯೋಧರು ನಮ್ಮ ಹೆಮ್ಮೆಯ ಸೈನಿಕರು ಇವರ ಸೇವೆ ಅನನ್ಯ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಲ.ರು.ಗೊಳಸಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಶಶಿಧರ ಅಡಿವೆಪ್ಪ ಯರನಾಳ , ಪುರಸಭೆ ಸದಸ್ಯ ಪ್ರವೀಣ ಪೂಜಾರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಮುಖಂಡರಾದ ಬಸಣ್ಣ ದೇಸಾಯಿಕಲ್ಲೂರ, ಸಿದ್ದಣ್ಣ ಕಲ್ಲೂರ ನಿವೃತ್ತ ಯೋಧರ ಸಂಘದ ಸದಸ್ಯರಾದ ಆರ್‌. ಐ. ಬಿರಾದಾರ, ಎಸ್. ಬಿ. ಕೊಟ್ರಶೆಟ್ಟಿ , ಎಂ. ಎಸ್. ತಳವಾರ , ಬಿ. ಬಿ. ಆವಟಗೇರಾ. ಪಿ. ಎಸ್. ಮುಕಾರ್ತಿಹಾಳ, ಶಿವು ಅಡಿಗಿಮನಿ, ಹನುಮಂತ ಬಾಗೇವಾಡಿ ಇತರರು ಇದ್ದರು. ಪಿ.ಎಸ್.ಬಾಗೇವಾಡಿ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಶಿವು ಅಡಿಗಿಮನಿ ವಂದಿಸಿದರು. ಇದೇ ಸಂದರ್ಭದಲ್ಲಿ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರನ್ನು ಶ್ರೀಗಳು, ವಿವಿಧ ಗಣ್ಯರು ಸನ್ಮಾನಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ