ಮನುಷ್ಯನಿಗೆ ಬದುಕುವ ರೀತಿ ಮುಖ್ಯ: ಡಾ. ಕೃಪಾಶಂಕರ್‌

KannadaprabhaNewsNetwork |  
Published : Mar 14, 2026, 01:45 AM IST
ವಿಜೆಪಿ ೧೨ ವಿಜಯಪುರ ಪಟ್ಟಣದ ಶ್ರೀ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಗುರುವಾರ  ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಆಂಗ್ಲ ಶಾಲೆಯ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾರದಾ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ. ಎಸ್. ಕೃಪಾಶಂಕರ್ ಅವರು ಮಾತನಾಡುತ್ತಿದ್ದರು. | Kannada Prabha

ಸಾರಾಂಶ

ವಿಜಯಪುರ: ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಮನುಷ್ಯ ಸದಾ ಕಲಿಯುತ್ತಿರಬೇಕು. ಮನುಷ್ಯನಿಗೆ ಹುಟ್ಟು ಮುಖ್ಯವಲ್ಲ, ಅವನು ಬದುಕುವ ರೀತಿ ಮುಖ್ಯ ಎಂದು ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್. ಕೃಪಾಶಂಕರ್ ತಿಳಿಸಿದರು

ವಿಜಯಪುರ: ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಮನುಷ್ಯ ಸದಾ ಕಲಿಯುತ್ತಿರಬೇಕು. ಮನುಷ್ಯನಿಗೆ ಹುಟ್ಟು ಮುಖ್ಯವಲ್ಲ, ಅವನು ಬದುಕುವ ರೀತಿ ಮುಖ್ಯ ಎಂದು ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್. ಕೃಪಾಶಂಕರ್ ತಿಳಿಸಿದರು. ಪಟ್ಟಣದಲ್ಲಿ ಪ್ರಗತಿ ಆಂಗ್ಲ ಶಾಲೆಯ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾರದಾ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸುವಂತೆ ತಿಳಿಸಿದರು. ಪ್ರಾಂಶುಪಾಲ ಡಾ. ಎನ್. ನಾಗರಾಜ್ ಮಾತನಾಡಿ, ಜೇನುನೊಣ ಎಲ್ಲಾ ಹೂವುಗಳಿಂದ ಮಕರಂದ ಹೀರಿದಂತೆ, ವಿದ್ಯಾರ್ಥಿಗಳು ಪ್ರತಿಯೊಬ್ಬ ಶಿಕ್ಷಕರಿಂದ ಜ್ಞಾನ ಪಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯಶಿಕ್ಷಕ ಜೆ.ಎನ್. ಪ್ರಕಾಶ್ ಮಾತನಾಡಿ, ಶಾರದಾ ಪೂಜೆಯ ಮಹತ್ವ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಶಿಸ್ತಿನ ಅಗತ್ಯದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಆನಂದ್, ಎಚ್. ಶಾಂತಮೂರ್ತಿ, ಶಿಕ್ಷಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

(ಫೋಟೋ ಕ್ಯಾಪ್ಞನ್‌)

ವಿಜಯಪುರದ ಪ್ರಗತಿ ಆಂಗ್ಲ ಶಾಲೆಯ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾರದಾ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಕೃಪಾಶಂಕರ್, ಪ್ರಾಂಶುಪಾಲ ಡಾ. ಎನ್. ನಾಗರಾಜ್, ಮುಖ್ಯಶಿಕ್ಷಕ ಜೆ.ಎನ್. ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವರಹೊಸಹಳ್ಳಿ ಭದ್ರಕಾಳಮ್ಮ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ
ಜಿಲ್ಲೆಗೂ ವ್ಯಾಪಿಸಿದ ಗ್ಯಾಸ್‌ ಟ್ರಬಲ್‌: ಹೋಟೆಲ್‌ಗಳು ಅತಂತ್ರ