ರಂಗಭೂಮಿ ಅತ್ಯುತ್ತಮ ಕಲಾ ಮಾಧ್ಯಮ

KannadaprabhaNewsNetwork |  
Published : Dec 21, 2023, 01:15 AM IST
 ಮರಿಯಮ್ಮನಹಳ್ಳಿಯ ದುರ್ಗದಾಸ್‌ ಕಲಾಮಂದಿರದಲ್ಲಿ ಭಾನುವಾರ ರಾತ್ರಿ ನಡೆದ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಮರಿಯಮ್ಮನಹಳ್ಳಿಯ ದುರ್ಗದಾಸ್‌ ಕಲಾಮಂದಿರದಲ್ಲಿ ಇತ್ತೀಚೆಗೆ ಬಿ. ಲಿಂಗಮ್ಮ, ಡಾ. ಬಿ. ಅಂಬಣ್ಣ, ಡಿ. ದುರ್ಗಾದಾಸ್ ಹಾಗೂ ಗಿರಿಜಮ್ಮ ಕರಿಬಸಪ್ಪ ಇವರ ದತ್ತಿ ನೆರವಿನೊಂದಿಗೆ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ, ಕಲಾನಿಧಿ ಪ್ರಶಸ್ತಿ ಪ್ರದಾನ ಹಾಗೂ ಬರ್ಗಲ್ಲು ನಾಟಕ ಪ್ರದರ್ಶನ ನಡೆಯಿತು. ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು.

ಮರಿಯಮ್ಮನಹಳ್ಳಿ: ಮೊಬೈಲ್‌ ಜಗತ್ತನ್ನು ಮೀರಿಸುವಂತಹ ಕಲಾ ಮಾಧ್ಯಮ ಎಂದರೆ ಅದು ರಂಗಭೂಮಿ ಮಾತ್ರ ಎಂದು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ಅಧ್ಯಾಪಕ ಡಾ. ಮಲ್ಲಯ್ಯ ಹೇಳಿದರು.

ಇಲ್ಲಿನ ದುರ್ಗದಾಸ್‌ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಬಿ. ಲಿಂಗಮ್ಮ, ಡಾ. ಬಿ. ಅಂಬಣ್ಣ, ಡಿ. ದುರ್ಗಾದಾಸ್ ಹಾಗೂ ಗಿರಿಜಮ್ಮ ಕರಿಬಸಪ್ಪ ಇವರ ದತ್ತಿ ನೆರವಿನೊಂದಿಗೆ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾನಿಧಿ ಪ್ರಶಸ್ತಿ ಪ್ರದಾನ ಹಾಗೂ ಬರ್ಗಲ್ಲು ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು. ರಂಗಭೂಮಿ ಉಳಿಸಿ ಬೆಳೆಸುವ ಮಹತ್ವರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.

ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ, ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೋರಿಸಲಾಗಿದೆ. ಕಾವೇಶು ನಾಟಕಂ ರಮ್ಯಂ ಎನ್ನುವಂತೆ ರಂಗಭೂಮಿ ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ವೈದ್ಯ ಡಾ. ಬಿ. ಅಂಬಣ್ಣ ಕಾರ್ಯಕ್ರಮ ಉದ್ಘಾಟಿಸಿದರು.ಮರಿಯಮ್ಮನಳ್ಳಿಯ ಉದ್ದಮಿ ಎಂ. ಕೀರ್ತಿರಾಜ್ ಜೈನ್, ಹೊಸಪೇಟೆಯ ನಿವೃತ್ತ ಶಿಕ್ಷಕ ಕೆ. ಕರಿಬಸಪ್ಪ ಭಾಗವಹಿಸಿದ್ದರು. ಲಲಿತಕಲಾ ರಂಗದ ಸಂಸ್ಥಾಪಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗತಜ್ಞ ಮ.ಬ. ಸೋಮಣ್ಣ ಅಧ್ಯಕ್ಷತೆವಹಿಸಿದ್ದರು.

2022-23ನೇ ಸಾಲಿನ ಪದ್ಮರಾಜ್ ಜೈನ್, ನೇಮಿರಾಜ್ ಜೈನ್ ಸ್ಮರಣಾರ್ಥ ನಗದು ಪುರಸ್ಕಾರದೊಂದಿಗೆ ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು. ರಾತ್ರಿ 9 ಗಂಟೆಗೆ ಮ.ಬ. ಸೋಮಣ್ಣ ಅವರು ರಚಿಸಿರುವ ಬರ್ಗಲ್ಲು ನಾಟಕವನ್ನು ಮ.ಬ. ಸೋಮಣ್ಣ ನಿರ್ದೇಶನ ಹಾಗೂ ಹ್ಯಾಟಿ ಮಂಜುನಾಥ ಸಹ ನಿರ್ದೇಶನದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

ನಾಟಕದಲ್ಲಿ ಜಿ.ಎಂ. ಕೊಟ್ರೇಶ್, ಜಿ. ಮಲ್ಲಪ್ಪ, ಎಚ್. ಮಂಜುನಾಥ, ಗುಂಡ್ರು ಸೋಮಶೇಖರ್, ಕೆ. ನಾಗೇಶ್, ಹ್ಯಾಟಿ ಮಂಜುನಾಥ, ಮಡಿವಾಳರ ಮಂಜುನಾಥ, ಜಿ. ಸೋಮಣ್ಣ, ಜಿ.ಕೆ. ಮೌನೇಶ್, ಕಟ್ಟೆ ಉಮೇಶ್, ಹುರುಕೊಳ್ಳಿ ಗುರುಪ್ರಕಾಶ್, ವೆಂಕಟಾಪುರ ಮಂಜುನಾಥ, ಜೆ. ದುರ್ಗದಾಸ್, ಬಿ. ಶಾರದಮ್ಮ, ಜಿ. ನಂದಿನಿ, ಗುಂಡ್ರು ನಾಗವೇಣಿ, ಗುಂಡ್ರು ಲೀಲಾವತಿ, ಬಿ. ಭುವನೇಶ್ವರಿ ಪಾತ್ರನಿರ್ವಹಿಸಿದರು. ಬಿ. ವಿಜಯಕುಮಾರ್, ಕೆ. ತಿಪ್ಪಣ್ಣ, ಜೆ. ದುರ್ಗದಾಸ್, ಜಿ.ಕೆ. ಮೌನೇಶ್, ಜಿ. ಮಲ್ಲಪ್ಪ, ಗುಂಡ್ರು ನಾಗವೇಣಿ ಸಂಗೀತ ನೀಡಿದರು.

ಎಚ್. ರಸೂಲ್ ಸಾಹೇಬ್ ಬೆಳಕು, ಕೆ. ಮಲ್ಲನಗೌಡ ಧ್ವನಿ, ಕಟ್ಟೆ ಉಮೇಶ್, ಮಾಳ್ಗಿ ಮಂಜುನಾಥ ರಂಗಸಜ್ಜಿಕೆ, ಬಿ.ಎಂ.ಎಸ್. ಮೃತ್ಯುಂಜಯ ರಂಗಪರಿಕರ, ಸಿ.ಕೆ. ನಾಗರಾಜ ಪ್ರಚಾರ ಕಾರ್ಯನಿರ್ವಹಿಸಿದರು.

ವಿ. ಶೋಭಾ ಪ್ರಾರ್ಥಿಸಿದರು. ಕೆ. ಮಲ್ಲನಗೌಡ ಸ್ವಾಗತಿಸಿದರು. ಅಕ್ಷೋಹಿಣಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ಬಿ. ಎಂ.ಎಸ್‌. ಮೃತ್ಯುಂಜಯ ನಿರೂಪಿಸಿದರು. 18ಎಂಎಂಎಚ್‌1

ಮರಿಯಮ್ಮನಹಳ್ಳಿಯ ದುರ್ಗದಾಸ್‌ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು.

(18ಎಂಎಂಎಚ್‌2,3,4)ಮರಿಯಮ್ಮನಹಳ್ಳಿಯ ದುರ್ಗದಾಸ್‌ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮ.ಬ. ಸೋಮಣ್ಣ ಅವರು ರಚಿಸಿ, ನಿರ್ದೇಶಿಸಿದ ಬರ್ಗಲ್ಲು ನಾಟಕ ಪ್ರದರ್ಶನಗೊಂಡಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ