ನಾಡಹಬ್ಬಗಳ ಹಿಂದೆ ಇದೆ ಒಂದೊಂದು ಇತಿಹಾಸ: ಎ.ನರಸಿಂಹಮೂರ್ತಿ

KannadaprabhaNewsNetwork |  
Published : Oct 14, 2024, 01:25 AM IST
ದುರ್ಗಮ್ಮ ಮತ್ತು ಪೂಜಮ್ಮ ದೇವತೆಗಳಿಗೆ ಶಮಿ ಪೂಜೆ  | Kannada Prabha

ಸಾರಾಂಶ

ತುಮಕೂರಿನ ಎನ್.ಆರ್ ಕಾಲೋನಿಯ ಶ್ರೀದುರ್ಗಮ್ಮ, ಶ್ರೀಪೂಜಮ್ಮ. ಶ್ರೀದಾಳಮ್ಮ ಮತ್ತು ಶ್ರೀನಾಗಪ್ಪ ದೇವರಿಗೆ 9 ದಿನದ ನವರಾತ್ರಿ ಪೂಜೆ ನೆರವೇರಿಸಿ ಮೂಲ ದೇವಸ್ಥಾನದ ಆವರಣದಲ್ಲಿ ಶಮಿ ಪೂಜೆ ಮಾಡಿ ನಂತರ ಜಿಲ್ಲಾಡಳಿತದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಯಿತು.

ಮಹಾನವಮಿ ಸಂಭ್ರಮದ ಶುಭಾಶಯ ವಿನಿಮಯ । ದುರ್ಗಮ್ಮ, ಪೂಜಮ್ಮಗೆ ಶಮಿ ಪೂಜೆಕನ್ನಡಪ್ರಭ ವಾರ್ತೆ ತುಮಕೂರು

ಎನ್.ಆರ್ ಕಾಲೋನಿಯ ಶ್ರೀದುರ್ಗಮ್ಮ, ಶ್ರೀಪೂಜಮ್ಮ. ಶ್ರೀದಾಳಮ್ಮ ಮತ್ತು ಶ್ರೀನಾಗಪ್ಪ ದೇವರಿಗೆ 9 ದಿನದ ನವರಾತ್ರಿ ಪೂಜೆ ನೆರವೇರಿಸಿ ಮೂಲ ದೇವಸ್ಥಾನದ ಆವರಣದಲ್ಲಿ ಶಮಿ ಪೂಜೆ ಮಾಡಿ ನಂತರ ಜಿಲ್ಲಾಡಳಿತದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಯಿತು.

ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಎ.ನರಸಿಂಹಮೂರ್ತಿ ಮಾತನಾಡಿ, ನಾಡಹಬ್ಬ ದಸರಾ, ಮಹಾನವಮಿ ಸಂಭ್ರಮದ ಶುಭಾಶಯಗಳು ಕೋರುವುದು. ಮೊದಲ ಬಾರಿಗೆ ಜಿಲ್ಲಾಡಳಿತ ತುಮಕೂರು ದಸರಾ ಆಚರಣೆ ಮಾಡಿ ಸರ್ವ ಜನಾಂಗದ ಕುಲದೇವರುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು ವಿಶೇಷವಾಗಿದೆ ಎಂದರು.

ಪ್ರತಿಯೊಂದು ನಾಡಹಬ್ಬಗಳ ಹಿಂದೆ ಒಂದೊಂದು ಇತಿಹಾಸವಿರುತ್ತದೆ, ಅದೇ ರೀತಿ ಮಹಾನವಮಿಗೂ ಒಂದು ಇತಿಹಾಸವಿದೆ. ಸಾಮ್ರಾಟ ಅಶೋಕನು ಕಳಿಂಗ ಯುದ್ದ ಗೆದ್ದ ಹುಮ್ಮಸ್ಸಿನಲ್ಲಿ ವಿಜಯೋತ್ಸವ ಆಚರಿಸುತ್ತ ತಿರುಗಾಡುವ ಸಂದರ್ಭದಲ್ಲಿ ಅನೇಕ ತಾಯಂದಿರು ಮಗನನ್ನು, ಮಹಿಳೆಯರು ಗಂಡನನ್ನು, ಸಹೋದರರನ್ನು ಕಳೆದುಕೊಂಡು ರೋದಿಸುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ

ರಾಜ ಸಾಮ್ರಾಟ್ ಅಶೋಕ ಒಬ್ಬ ತಾಯಿಯನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾನೆ. ಆದರೆ ದುಃಖದ ಕಡಲಲ್ಲಿ ಮುಳುಗಿದ ತಾಯಿ ಇಷ್ಟೊಂದು ಸಾವು ನೋವು ಶೋಕಕ್ಕೆ ಕಾರಣನಾದ ನೀನು ಹೇಗೆ ಸಾಮ್ರಾಟನಾಗಲು ಸಾಧ್ಯ ಎಂದು ಶೋಕ ಮತ್ತು ಅಶೋಕ ಪದದ ಅರ್ಥ ಹೇಳುತ್ತಾಳೆ. ಆಗ ಮನನೊಂದ ಸಾಮ್ರಾಟ್ ಅಶೋಕ ಪಶ್ಚಾತ್ತಾಪ ಪಡುತ್ತಾನೆ ಎಂದರು.

ತನ್ನೆಲ್ಲ ಆಯುಧಗಳನ್ನು ಬನ್ನಿ ಗಿಡದ ಕೆಳಗಿಟ್ಟು ಒಂಬತ್ತು ದಿನ ಉಪವಾಸ ವ್ರತ ಆಚರಿಸಿ 10ನೇ ದಿನ ಶಸ್ತಾಸ್ತ್ರ ತ್ಯಜಿಸಿ ಕರುಣೆ, ಶಾಂತಿ, ಪ್ರೀತಿ, ಸಹೋದರತೆ ಸ್ಪಷ್ಟತೆ, ನಿರಾತಂಕ ಸ್ನೇಹಮಯಿ ಬೌದ್ಧಧರ್ಮ ಸ್ವೀಕಾರ ಮಾಡಿ ತನ್ನುಳಿದ ಜೀವನ ಬೌದ್ಧ ಧರ್ಮ ಪ್ರಚಾರ ಮಾಡುತ್ತಾನೆ. ಹೀಗೆ ಆತನ ನಂತರ ಕೂಡ ಮೌರ್ಯ ಸಾಮ್ರಾಜ್ಯದ ರಾಜರು ಅನೇಕ ದೇಶಗಳಲ್ಲಿ ಬುದ್ಧನ ವಿಗ್ರಹ, ಬುದ್ಧವಿಹಾರ ಸ್ಥಾಪಿಸುತ್ತಾರೆ. ಈ ದಿನದಂದೆ ಡಾ.ಬಿ.ಆರ್. ಅಂಬೇಡ್ಕರ್ ನಾಗಪುರದ ದೀಕ್ಷಾ ಭೂಮಿಯಲ್ಲಿ ಬೌದ್ಧ ಧಮ್ಮ ಸ್ವೀಕರಿಸಿದರು ಎಂದರು.

ತುಮಕೂರು ದಸರಾ ಸಮಿತಿ ಸದಸ್ಯರು ಮತ್ತು ಜನಾಂಗದ ಮುಖಂಡರಾದ ವಾಲೆಚಂದ್ರಯ್ಯ, ಸಂಜೀವಯ್ಯ, ದೇವರಾಜ್, ಅನಂತಕುಮಾರ್, ಸೋಮಶೇಖರ್, ನಾಗರಾಜ್, ಕುಮಾರ್, ಮಂಜುನಾಥ್ ಕುಳವಾಡಿ ಮನೆತನದವರು 4 ದೇವಸ್ಥಾನದ ಪೂಜಾರಿಗಳು ಮುಖಂಡರು ಹಾಗೂ ಎನ್.ಆರ್ ಕಾಲೋನಿಯ ನಾಗರೀಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿಗಾಗಿ ಮಕ್ಕಳಿಂದ ಪತ್ರ: ₹490 ಕೋಟಿ ಕೊಟ್ಟ ಸಿಎಂ!
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ : ಬಿಯರ್‌, ವೈನ್‌ ಅಗ್ಗ?