ಕನ್ನಡಪ್ರಭ ವಾರ್ತೆ ಮಾಲೂರು
ನಾನು ರಾಜಿಯಾದರೆ ಮತ್ತೆ ಈ ಹಿಂದಿನ ಆಡಳಿತದಂತೆ ಪಟ್ಟಣದ ಅಭಿವೃದ್ಧಿ ಹಾದಿ ತಪ್ಪಿ, ಬಲಾಢ್ಯರಿಗೆ ಮಣೆ ಹಾಸಿಕೊಟ್ಟಂತಾಗುತ್ತದೆ. ಈಗಾಗಲೇ ಬಸ್ ನಿಲ್ದಾಣ ನೂತನವಾಗಿ ನಿರ್ಮಾಣವಾಗುತ್ತಿದೆ. ಬಹುಶ ಎಪ್ರಿಲ್-ಮೇ ತಿಂಗಳೂಳಗೆ ನೆಲ ಅಂತಸ್ತು ಪೂರ್ಣಗೊಂಡು ಹರಾಜಿನಲ್ಲಿ ಕೊಂಡುಕೊಡವರಿಗೆ ಮಳಿಗೆ ಬಿಟ್ಟುಕೊಡಲಿದ್ದೇವಿ ಎಂದರು.
ಐಡಿ ಸಮಿತಿ ಸಂರ್ಕೀಣ ಸೇರಿದಂತೆ ಪಟ್ಟಣದಲ್ಲಿ ಉಳಿದಿರುವ ನಗರಸಭೆ ಮಳಿಗೆಗಳ ಮರು ಹರಾಜು ಯಾವುದೇ ಬದಲಾವಣೆ ಇಲ್ಲದೇ ಮಾರ್ಚ್ ಅಥವಾ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. ಇದಲ್ಲದೇ ಹುಣಸೇಮರಗಳ ಕಳಗೆ ಇರುವ ಶಿಥಿಲ ಅವಸ್ಥೆಯಲ್ಲಿರುವ ಮಳಿಗೆಗಳನ್ನು ಕೆಡವಲು ಜಿಲ್ಲಾಧಿಕಾರಿಗಳ ಒಪ್ಪಿಗೆ ಸಿಕ್ಕಿದ್ದು, ಈ ವಾರದೂಳಗೆ ಅಂಗಡಿಗಳನ್ನು ಖಾಲಿ ಮಾಡಿಸಿ ಮಳಿಗೆಗಳನ್ನು ಕೆಡವಲಾಗುತ್ತದೆ ಎಂದ ಶಾಸಕರು ಈ ಎಲ್ಲ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಈಗಾಗಲೇ ಕೆವಿಯೇಟ್ ಹಾಕಲಾಗಿದೆ ಎಂದರು.ಆಶ್ರಯ ಯೋಜನೆಯಲ್ಲಿ ನೀಡಬೇಕಾಗಿರುವ 1,500 ನಿವೇಶನಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಯಾವುದೇ ಹಣ ಬಾರದಿರುವುದರಿಂದ ಆಶ್ರಯ ಬಡಾವಣೆಯ ಕಾರ್ನರ್ ಸೈಟ್ ಗಳನ್ನು ಹರಾಜು ಮಾಡಿ ಬರುವ ಹಣದಿಂದ ಬಡಾವಣೆ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ.ಮಾಲೂರು ಹೊಸಕೋಟೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಪಥದ ರಸ್ತೆ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಹಾಗೆಯೇ ಸಂಪೂರ್ಣ ಹಾಳಾಗಿರುವ ಹೊಸೂರು ರಸ್ತೆ ದುರಸ್ಥಿ ಬಗ್ಗೆ ಟೆಂಡರ್ ಪಡೆದಿರುವ ಗುತ್ತಿಗೆದಾರ ಮುಂದಾಗಬೇಕು. ಹೊಸೂರು ರಸ್ತೆಯ ಸೀತಾನಾಯನಹಳ್ಳಿವರೆಗೆ ನಡೆಯಲಿರುವ ನಾಲ್ಕು ಪಥದ ರಸ್ತೆ ಕಾಮಗಾರಿಯ ಗುತ್ತಿಗೆದಾರರು ಈ ಬಗ್ಗೆ ಗಮನ ಹರಿಸಿ ಎಂದರು.
ಇದೇ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ತಮ್ಮಗಿದ್ದ ಕೆಲವು ಸಮಸ್ಯೆ ದೂರುಗಳ ಪ್ರಶ್ನೆಗೆ ಶಾಸಕರು, ತಹಸೀಲ್ದಾರ್ ಹಾಗೂ ಆಯುಕ್ತರು ಉತ್ತರ ಮೂಲಕ ಪರಿಹಾರ ನೀಡಿದರು. ತಹಸೀಲ್ದಾರ್ ರೂಪ, ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಆಯುಕ್ತ ಮಹದೇವ, ಸಿಪಿಐ ರಾಮಯ್ಯ, ಬೆಸ್ಕಾಂ ಎಇಇ ಅನ್ಸರ್ ಪಾಷ, ಎ.ಡಿ.ಎಲ್.ಆರ್.ಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಲವು ಯೋಜನೆಗಳ ಅಧಿಕಾರಿಗಳಿದ್ದರು.