ಐನೋರಹೊಸಹಳ್ಳಿ ಡೇರಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ರಮೇಶ್ ರೆಡ್ಡಿ ಸ್ಪಷ್ಟನೆ

KannadaprabhaNewsNetwork |  
Published : Nov 21, 2024, 01:00 AM IST
20ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಐನೋರಹೊಸಹಳ್ಳಿ ಡೇರಿ ಅಧ್ಯಕ್ಷ ರಮೇಶ್ ರೆಡ್ಡಿ ಹಾಗೂ ನಿರ್ರುಶಕರು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪಷ್ಟನೆ ನೀಡಿದರು. | Kannada Prabha

ಸಾರಾಂಶ

ಐನೋರ ಹೊಸಹಳ್ಳಿ‌ ಆಡಳಿತ ಮಂಡಳಿಯ ಸದಸ್ಯರ ಅನುಮತಿ ಪಡೆದು ಬಟವಾಡೆ ಮಾಡಲು ಕೆಲವರಿಂದ ಹಣವನ್ನು ಪಡೆದು ಮತ್ತೆ ವಾಪಸ್ಸು ಮಾಡಿದ್ದನ್ನು ಕಂಡು ರೈತ ಸಂಘಟನೆ ಅವರು ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಐನೋರ ಹೊಸಹಳ್ಳಿ‌ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮಂಗಳವಾರ ಶಿಬಿರದ ಕಚೇರಿ ಮುಂದೆ ರೈತ ಸಂಘದವರು ಮಾಡಿದರುವ ಪ್ರತಿಭಟನೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಂಘದ ಅಧ್ಯಕ್ಷ ರಮೇಶ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಂಘಕ್ಕೆ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದಿಸುವ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದಕಾರಣ ಸಂಘದ ಸದಸ್ಯರಿಗೆ ಸಂಘದ ಎಲ್ಲಾ ಸದಸ್ಯರಿಗೆ ಹಬ್ಬಕ್ಕೆ ಉಡುಗೋರೆ ನೀಡುವುದರ ಜೊತೆಗೆ ಬೋನಸ್ ನೀಡಲಾಗುತ್ತಿದೆ ಎಂದರು.

ಸಂಘದ ಬಟವಾಡೆಗೆ ಕೋಚಿಮುಲ್ ನಿಂದ ಸರಿಯಾದ ಸಮಯಕ್ಕೆ ಹಣ ಬರೆದ ಕಾರಣ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಇತರರಿಂದ ಹಣವನ್ನು ಪಡೆದು ಸದಸ್ಯರಿಗೆ ಹಾಲು ಉತ್ಪಾದಕರಿಗೆ ಬಟವಾಡೆಯನ್ನು ಮಾಡಲಾಗುತ್ತಿದೆ. ಆಡಳಿತ ಮಂಡಳಿಯ ಸದಸ್ಯರ ಅನುಮತಿ ಪಡೆದು ಬಟವಾಡೆ ಮಾಡಲು ಕೆಲವರಿಂದ ಹಣವನ್ನು ಪಡೆದು ಮತ್ತೆ ವಾಪಸ್ಸು ಮಾಡಿದ್ದನ್ನು ಕಂಡು ರೈತ ಸಂಘಟನೆ ಅವರು ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಆದರೆ ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಬದಲಾಗಿ ತುಂಬಾ ಚೆನ್ನಾಗಿ ಸಂಘ ನಡೆದುಕೊಂಡು ಹೋಗುತ್ತಿದೆ ಎಂದರು.

ಸಂಘದ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಸಂಘದಲ್ಲಿ ಎಲ್ಲಾ ಆಡಳಿತ ಮಂಡಳಿಯ ಸದಸ್ಯರ ಅನುಮತಿಯಂತೆ ಸಂಘದ ಎಲ್ಲಾ ವ್ಯವಹಾರವನ್ನು ನಡೆಸಲಾಗುತ್ತಿದೆ. ಸಂಘದ ಸಭೆಯಲ್ಲಿ ಈ ಹಿಂದೆ ಚರ್ಚಿಸಿ ತೀರ್ಮಾನ ಕೈಗೊಂಡ ಆಧಾರದ ಮೇಲೆ ಸಂಘದ ಬಟವಾಡಕ್ಕೆ ಕೆಲವರಿಂದ ಹಣವನ್ನು ಪಡೆದು ಮರಳಿ ವಾಪಸ್ಸು ಪಡೆಯಲಾಗಿದೆ. ಆದರೆ ಇದನ್ನು ನೋಡಿ ರೈತ ಸಂಘದ ಮುಖಂಡ ರಾಮೇಗೌಡ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿ ಸುಮಾರು ₹50,000 ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.

ಈ ವೇಳೆ ಸಂಘದ ನಿರ್ದೇಶಕರಾದ ನಾಗರಾಜಯ್ಯ, ರಂಜಿತ್ ಕುಮಾರ್ ಸುರೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ