ಕೊಟ್ಟೂರು: ಸದಾ ಜೀವನ್ಮುಖಿ ಕರ್ತವ್ಯಶೀಲರಿಗೆ ನಿವೃತ್ತಿ ಅನ್ವಯಿಸುವುದೇ ಇಲ್ಲ. ಜೊತೆಗೆ ಜನಪರತೆ ಮೈಗೂಡಿಸಿಕೊಂಡರೆ ಜೀವತಾವಧಿಯವರಿಗೂ ಪ್ರತಿ ನೌಕರ ಯಶಸ್ವಿ ಅಧಿಕಾರಿಯಾಗಿ ಜನಮಾನಸದಲ್ಲಿ ಸದಾ ಇರುತ್ತಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರಶೇಖರ ವಸ್ತ್ರದ ಹೇಳಿದರು.
ಲವಲವಿಕೆಯಿಂದ ಬದುಕನ್ನು ಪ್ರತಿ ಹಂತದಲ್ಲೂ ರೂಢಿಸಿಕೊಂಡರೆ ವೃತ್ತಿ ಜೀವನ ನಿರ್ವಹಣೆ ಅಧಿಕಾರಿ ಸದಾ ಚಟುವಟಿಕೆ ಜೊತೆಗೆ ಆರೋಗ್ಯ ಪೂರ್ಣ ಸಂಸ್ಥೆ ಮತ್ತು ಸಮಾಜವನ್ನು ಯಶಸ್ವಿಯಾಗಿ ಕಟ್ಟಬಲ್ಲ ಎನ್ನುವುದಕ್ಕೆ ಎಂ.ಎಸ್. ಶಿವನಗುತ್ತಿ ಕಾರ್ಯ ನಿರ್ವಹಣೆ ಸಂಕೇತವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರತಿಯೊಬ್ಬರ ಬದುಕಿಗೊಂದು ನೆಮ್ಮದಿಯ ಆಸರೆಯಾಗುವ ಜೀವವಿಮಾ ನಿಗಮದ ಪಾಲಿಸಿದಾರರನ್ನಾಗಿ ಸಾಮಾನ್ಯ ಜನರನ್ನು ತೊಡಗಿಸಿಕೊಳ್ಳುತ್ತಿದ್ದ ಶಿವನಗುತ್ತಿಯವರ ಕಾರ್ಯವೈಖರಿ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.ಬಿಇಒ ಮೈಲೇಶ್ ಬೇವೂರು, ಎಲ್ಐಸಿ ಹಿರಿಯ ಮ್ಯಾನೇಜರ್ ಧನುಂಜಯ, ಡಾ.ಬಿ.ಸಿ. ಮೂಗಪ್ಪ ಮಾತನಾಡಿ, ಶಿವನಗುತ್ತಿ ಯವರ ನಿವೃತ್ತಿಯ ನಂತರ ಸದಾ ಜನಮಾನಸದಲ್ಲಿ ಉಳಿದುಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿರುವರು ಮಾದರಿ ಎಂದರು.
ಹರಪನಹಳ್ಳಿಯ ಎಲ್ಐಸಿ ಅಧಿಕಾರಿ ರಾಜೇಶ, ಕೆ.ಫಣಿರಾಜ್, ಅಂಜಿನಪ್ಪ, ಎಂ.ಮರಿಸ್ವಾಮಿ, ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಡಿ.ಶಿವಚರಣ ಇದ್ದರು.