ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ

KannadaprabhaNewsNetwork |  
Published : Jan 14, 2026, 04:30 AM IST
ಜಮಖಂಡಿ ನಗರದ ಮುಖಂಡ ಹಾಜಿ ಬಾಬುಸಾಬ ಸಗರ ಅವರ ನಿವಾಸದಲ್ಲಿ ಅಂಜುಮನ್ ಕಮೀಟಿಯ ನೂತನ ಅಧ್ಯಕ್ಷ ಡಾ. ತೌಫೀಕ ಪಾರ್ಥನಳ್ಳಿ, ಕಾರ್ಯಾಧ್ಯಕ್ಷ ನಜೀರ ಕಂಗನೊಳ್ಳಿ, ಉಪಾಧ್ಯಕ್ಷರಾದ ರಿಯಾಜ ಅವಟಿ ಹಾಗೂ ಅಲ್ತಾಪ ಭಾಗವಾನ ಅವರನ್ನು ಸಗರ ಕುಟುಂಬದ ಸದಸ್ಯರು ಸನ್ಮಾನಿಸಿದರು. | Kannada Prabha

ಸಾರಾಂಶ

ಜಮಖಂಡಿ ತಾಲೂಕಿನಲ್ಲಿ ಹಿಂದೂ-ಮುಸ್ಲಿಮರು ಮೊದಲಿನಿಂದಲೂ ಸೋದರತ್ವದಿಂದ ಬದುಕುತ್ತಿದ್ದಾರೆ. ಇಲ್ಲಿ ಜಾತಿ ವೈಷಮ್ಯಕ್ಕೆ ಯಾರೂ ಅವಕಾಶ ನೀಡುವುದಿಲ್ಲ ಎಂದು ಅಂಜುಮನ್ ಕಮೀಟಿಯ ನೂತನ ಅಧ್ಯಕ್ಷ ಡಾ. ತೌಫೀಕ್‌ ಪಾರ್ಥನಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನಲ್ಲಿ ಹಿಂದೂ-ಮುಸ್ಲಿಮರು ಮೊದಲಿನಿಂದಲೂ ಸೋದರತ್ವದಿಂದ ಬದುಕುತ್ತಿದ್ದಾರೆ. ಇಲ್ಲಿ ಜಾತಿ ವೈಷಮ್ಯಕ್ಕೆ ಯಾರೂ ಅವಕಾಶ ನೀಡುವುದಿಲ್ಲ ಎಂದು ಅಂಜುಮನ್ ಕಮೀಟಿಯ ನೂತನ ಅಧ್ಯಕ್ಷ ಡಾ. ತೌಫೀಕ್‌ ಪಾರ್ಥನಳ್ಳಿ ಹೇಳಿದರು.

ನಗರದ ಪ್ರಮುಖ ಮುಖಂಡರಾದ ಹಾಜಿ ಬಾಬುಸಾಬ ಸಗರ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಅಂಜುಮನ್ ಕಮೀಟಿಯ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಕಾರ್ಯಾಧ್ಯಕ್ಷ ನಜೀರ್‌ ಕಂಗನೊಳ್ಳಿ, ಸಮಾಜದ ಅಭಿವೃದ್ಧಿ ಹಾಗೂ ಶಾಂತಿ ಕಾಪಾಡುವಲ್ಲಿ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

ಇದೇ ವೇಳೆ ಉಪಾಧ್ಯಕ್ಷರಾದ ರಿಯಾಜ ಅವಟಿ, ಅಲ್ತಾಪ ಭಾಗವಾನ ಅವರನ್ನು ಸನ್ಮಾನಿಸಲಾಯಿತು. ಸಗರ ಕುಟುಂಬದ ಸದಸ್ಯರು ನೂತನ ಪದಾಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಹಾಜಿ ಬಾಬು ಸಗರ, ಅಲ್ತಾಫ್ ಸಗರ, ಇಂತಿಯಾಜ್ ಸಗರ, ಬಾರ್ಪೆಟ್ ಮಕಾ ಮಸೀದಿ ಅಧ್ಯಕ್ಷ ಸರ್ಫ್ರಾಜ್ ಪಠಾಣ, ಉಸ್ಮಾನ್ ಮಕಾಂದಾರ್, ಅಯಾಜ್ ಶೇಖ್, ಮುಸ್ಸೇಬ್ ಸಗರ, ರಶೀದ್‌ ಆಲಗೂರ, ಕಮರೋದಿನ್ ಮುರ್ಸಲ, ವಸೀಮ್ ಕೋಕಟನೂರ, ಫಾರೂಕ್ ಜಮಾದಾರ, ಮೌಲಾನಾ ಮಂಜುರ್ ಅವಟಿ, ಅಬೂಬಕರ್ ಕುಡಚಿ, ಪೈಸಲ್ ದ್ರಾಕ್ಷಿ, ಪಪ್ಪು ಮನಿಯಾರ, ಮುಬಾರಕ್ ಶಿರೋಳ, ಹುಸೇನ್ ತಾಂಬೋಳಿ, ಮಲ್ಲಿಕಾರ್ಜುನ ನ್ಯಾಮಗೌಡ, ಇಸಾಕ್ ನಿಪ್ಪಾಣಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ