ಗೃಹಬಳಕೆ ಗ್ಯಾಸ್‌ ಸಿಲಿಂಡರ್‌ ಕೊರತೆ ಇಲ್ಲ!

KannadaprabhaNewsNetwork |  
Published : Mar 25, 2026, 02:00 AM IST
ಜಿಲ್ಲಾಧಿಕಾರಿ ಸ್ನೇಹಲ್‌ ಆರ್. ಮಂಗಳವಾರ ಧಾರವಾಡದ ಶ್ರೀರಾಮ ಎಚ್‌ಪಿ ಗ್ಯಾಸ್ ಏಜನ್ಸಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಮೊದಲು ಸಾಮಾನ್ಯವಾಗಿ ಪ್ರತಿ ಗ್ಯಾಸ್ ಸಿಲಿಂಡರ್ ಏಜನ್ಸಿ ವಿತರಕರಿಂದ ನಿತ್ಯ ಸರಾಸರಿ 400ರಿಂದ 450 ಸಿಲಿಂಡರ್‌ ವಿತರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣವು 350ರಿಂದ 360 ವಿತರಿಸಲಾಗುತ್ತಿದೆ.

ಧಾರವಾಡ:

ಜಿಲ್ಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಇಲ್ಲ. ಬುಕ್ಕಿಂಗ್ ಮಾಡಿದವರಿಗೆ ಎರಡ್ಮೂರು ದಿನ ವಿಳಂಬವಾದರೂ ನಿಯಮಾನುಸಾರ ಬುಕ್ಕಿಂಗ್ ಮಾಡಿದ ಎಲ್ಲರಿಗೂ ಸಿಲಿಂಡರ್ ಪೂರೈಸಲಾಗುತ್ತಿದೆ. ಗ್ರಾಹಕರಲ್ಲಿ ಯಾವುದೇ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದ್ದಾರೆ.

ಇಲ್ಲಿಯ ಶ್ರೀರಾಮ ಎಚ್‌ಪಿ ಗ್ಯಾಸ್ ಏಜನ್ಸಿಗೆ ಮಂಗಳವಾರ ಭೇಟಿ ನೀಡಿದ ಅವರು, ಗ್ಯಾಸ್ ಏಜೆನ್ಸಿಯ ಮಾಲೀಕರನ್ನು ಉದ್ದೇಶಿಸಿ ಗ್ಯಾಸ್ ಸಿಲಿಂಡರ್‌ ವಿತರಣೆ ಮತ್ತು ಹಂಚಿಕೆ ಕುರಿತು ವಿಚಾರಿಸಿದರು. ತುಂಬಿದ ಸಿಲಿಂಡರ್‌ ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳು ಇಲ್ಲ. ವಿತರಣೆಯಲ್ಲೂ ತೊಂದರೆ ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 16,822 ಗೃಹಬಳಕೆ ಸಿಲಿಂಡರ್‌ ದಾಸ್ತಾನಿದ್ದು ನಿತ್ಯ 10 ಸಾವಿರ ವಿತರಿಸಲಾಗುತ್ತಿದೆ ಎಂದರು.

ಗೃಹಬಳಕೆ ಸಿಲಿಂಡರ್‌ ವಾಣಿಜ್ಯ ಬಳಕೆಗೆ, ಅನಧಿಕೃತ ಸಂಗ್ರಹಣೆ ಮಾಡಿದರೆ ಅಂತಹವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿ, ಮೊದಲು ಸಾಮಾನ್ಯವಾಗಿ ಪ್ರತಿ ಗ್ಯಾಸ್ ಸಿಲಿಂಡರ್ ಏಜನ್ಸಿ ವಿತರಕರಿಂದ ನಿತ್ಯ ಸರಾಸರಿ 400ರಿಂದ 450 ಸಿಲಿಂಡರ್‌ ವಿತರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣವು 350ರಿಂದ 360 ವಿತರಿಸಲಾಗುತ್ತಿದೆ. ಈ ಹಿನ್ನೆಲೆ, ಗ್ಯಾಸ್ ಬುಕ್ ಮಾಡಿದ ನಂತರ ವಿತರಣೆಗೆ ಐದಾರು ದಿನ ವಿಳಂಬವಾಗಿದೆ ಎಂದು ತಿಳಿಸಿದರು.

ಈ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಶ್ರೀರಾಮ ಏಜನ್ಸಿಯ ಮಾಲೀಕ ಆನಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಹನ ಶೀಲರು ಹಾಗೂ ಕೆಚ್ಚೆದೆಯ ಹೋರಾಟಗಾರರು- ಡಾ. ಮೀನಾಕ್ಷಿ ಜಂಗಮನಿ
ಅನ್ಯ ಜಿಲ್ಲೆಗೆ ಭದ್ರಾ ನೀರು ಕೊಟ್ಟರೆ ಸಂಕಷ್ಟ: ಆತಂಕ