ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರ ನಿಧನದ ಸುದ್ದಿ ತಿಳಿಯುತ್ತಲೇ, ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ ಸಮೀಪದ ಅವರ ನಿವಾಸಕ್ಕೆ ಅಭಿಮಾನಿಗಳ-ಹಿತೈಷಿಗಳ ದಂಡು ಕಣ್ಣೀರಿಡುತ್ತಲೇ ದೌಡಾಯಿಸಿದರು. ಸಾರ್ವಜನಿಕರ ಕುಂದುಕೊರತೆಗಳ ಸ್ವೀಕಾರಕ್ಕೆಂದೇ ಸದಾ ಗಿಜಿಗುಡುತ್ತಿದ್ದ ಅವರ ಜನ ಸಂಪರ್ಕ ಕಚೇರಿ ನಾಯಕನ ಕಳೆದುಕೊಂಡು ಬಿಕೋ ಎನ್ನುತ್ತಿತ್ತು. ಪುತ್ರ ಮಹೇಶರೆಡ್ಡಿ ಅವರ ಕಣ್ಣೀರ ಕಟ್ಟೆಯೊಡೆದಿತ್ತು. ಮುದ್ನಾಳ್ ಸಹೋದರ ರಾಚನಗೌಡ ಸೇರಿದಂತೆ ಬಂಧು ಮಿತ್ರರನೇಕರು ಶೋಕಸಾಗರದಲ್ಲಿ ಮುಳುಗಿದ್ದರು.
-
17ವೈಡಿಆರ್15 : ಅಬ್ಬೆತುಮಕೂರಿನ ಶ್ರೀ ಡಾ. ಗಂಗಾಧರ ಶ್ರೀಗಳು ಹಾಗೂ ಹೆಡಗಿಮುದ್ರಾದ ಶ್ರೀಶಾಂತ ಶಿವಯೋಗಿ ಶ್ರೀಗಳು ಮುದ್ನಾಳ್ ನಿವಾಸಕ್ಕೆ ಆಗಮಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.-
17ವೈಡಿಆರ್16 : ತಂದೆಯ ನಿಧನದಿಂದ ಕಣ್ಣೀರಿಡುತ್ತಿರುವ ಪುತ್ರ ಮಹೇಶಗೌಡ ಮುದ್ನಾಳ್-
17ವೈಡಿಆರ್17 : ಸಾರ್ವಜನಿಕರ ಕುಂದುಕೊರತೆಗಳ ಸ್ವೀಕಾರಕ್ಕೆಂದೇ ಸದಾ ಗಿಜಿಗುಡುತ್ತಿದ್ದ ಅವರ ಜನ ಸಂಪರ್ಕ ಕಚೇರಿ ನಾಯಕನ ಕಳೆದುಕೊಂಡು ಬಿಕೋ ಎನ್ನುತ್ತಿತ್ತು.---000---