ನಕಲಿ ಚಿನ್ನದ ಸರ ಕೊಟ್ಟು ಚಿನ್ನದ ಮಾಂಗಲ್ಯಸರ ಎಗರಿಸಿದ ಚಾಲಾಕಿ ಕಳ್ಳರು

KannadaprabhaNewsNetwork |  
Published : Mar 12, 2025, 12:49 AM IST

ಸಾರಾಂಶ

ಅಪರಿಚಿತ ಪುರುಷ- ಮಹಿಳೆ ಸೇರಿಕೊಂಡು ಮಹಿಳೆಯೊಬ್ಬರಿಗೆ ನಕಲಿ ಚಿನ್ನದ ಸರ ನೀಡಿ ಆಕೆಯ ಮಾಂಗಲ್ಯಸರ ಎಗರಿಸಿರುವ ಪ್ರಕರಣವೊಂದು ನಗರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಪರಿಚಿತ ಪುರುಷ- ಮಹಿಳೆ ಸೇರಿಕೊಂಡು ಮಹಿಳೆಯೊಬ್ಬರಿಗೆ ನಕಲಿ ಚಿನ್ನದ ಸರ ನೀಡಿ ಆಕೆಯ ಮಾಂಗಲ್ಯಸರ ಎಗರಿಸಿರುವ ಪ್ರಕರಣವೊಂದು ನಗರದಲ್ಲಿ ನಡೆದಿದೆ.

ತಾಲೂಕಿನ ಈಚಗೆರೆ ಗ್ರಾಮದ ಎನ್.ಎಸ್.ಸುಕನ್ಯಾ ಎಂಬುವರೇ ವಂಚನೆಗೊಳಗಾದವರು. ಸುಕನ್ಯಾ ಅವರು ತಮ್ಮ ಮಗ ಮಹೇಶನೊಂದಿಗೆ ಮಂಡ್ಯದ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದರು. ಈ ವೇಳೆ ಮಹೇಶ ಶೇವಿಂಗ್ ಮಾಡಿಸಿಕೊಂಡು ಬರುತ್ತೇನೆ. ಅಷ್ಟರಲ್ಲಿ ತರಕಾರಿಯನ್ನು ತೆಗೆದುಕೊಂಡಿರು ಎಂದು ತಿಳಿಸಿ ಹೋಗಿದ್ದನು.

ಮಧ್ಯಾಹ್ನ ೧೨.೩೦ರ ಸಮಯಕ್ಕೆ ಅಪರಿಚಿತ ಹೆಂಗಸು ಮತ್ತು ಪುರುಷ ಸುಕನ್ಯಾ ಅವರನ್ನು ಮಾತನಾಡಿಸಿದ್ದಾರೆ. ನನ್ನ ಹೆಸರು ಮಂಜುನಾಥ ಈ ಹೆಂಗಸಿನ ಬಳಿ ೧೫೦ ಗ್ರಾಂ ಚಿನ್ನ ಇದೆ. ಇದನ್ನು ಬೇರೆ ಯಾರಿಗಾದರೂ ಮಾರಿಬಿಡುತ್ತಾಳೆ. ಈ ಚಿನ್ನನ ನನಗೆ ಬೇಕೆಂದು ಹೇಳಿ ಹಣ ಮತ್ತು ಒಂದು ಜೊತೆ ಓಲೆ ತಂದಿದ್ದನು.

ಇದಕ್ಕೆ ಪ್ರತಿಯಾಗಿ ಆ ಹೆಂಗಸು, ನಾನು ಕಷ್ಟದಲ್ಲಿದ್ದೇನೆ. ನನ್ನ ಬಳಿ ಇರುವ ೧೫೦ ಗ್ರಾಂ ಚಿನ್ನವನ್ನು ನೀನೇ ಇಟ್ಟುಕೋ. ಅವನಿಗೆ ಕೊಡುವುದಿಲ್ಲ. ೧೦ ಸಾವಿರ ರು. ಹಾಗೂ ನಿನ್ನ ಮಾಂಗಲ್ಯಸರ ಕೊಡುವಂತೆ ಸುಕನ್ಯಾಗೆ ತಿಳಿಸಿದರು. ಇದಕ್ಕೆ ಆಸೆಪಟ್ಟ ಸುಕನ್ಯಾ ತಮ್ಮ ಬಳಿ ಇದ್ದ ೪ ಸಾವಿರ ರು. ಹಾಗೂ ೩೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿ ಅವರಿಗೆ ಕೊಟ್ಟು, ಆಕೆಯ ಬಳಿ ಇದ್ದ ೧೫೦ ಗ್ರಾಂ ಚಿನ್ನ ಎಂದು ಹೇಳಿದ್ದ ಕರಿಮಣಿ ಸರದ ಜೊತೆಯಲ್ಲಿದ್ದ ಚಿನ್ನದಂತಿದ್ದ ಕಾಸುಗಳನ್ನು ಹಾಗೂ ಮಾಂಗಲ್ಯವನ್ನು ಪಡೆದುಕೊಂಡರು. ಕೂಡಲೇ ಅಪರಿಚಿತ ಪುರುಷ- ಹೆಂಗಸು ಅಲ್ಲಿಂದ ತೆರಳಿದರು.

ನಂತರ ಅಲ್ಲಿಗೆ ಬಂದ ಮಗನಿಗೆ ವಿಚಾರ ತಿಳಿಸಿದಾಗ ಆತ ಅವುಗಳನ್ನು ನೋಡಿ ಇದು ನಕಲಿ ಚಿನ್ನ ಎಂದು ತಕ್ಷಣಕ್ಕೆ ಗುರುತಿಸಿದ. ಕೂಡಲೇ ಅವರು ಮಾರ್ಕೆಟ್‌ನಲ್ಲೆಲ್ಲಾ ಸುತ್ತಾಡಿದರೂ ಅವರು ಪತ್ತೆಯಾಗಲೇ ಇಲ್ಲ. ಅಷ್ಟೊತ್ತಿಗೆ ಅವರು ಪರಾರಿಯಾಗಿದ್ದರು. ಈ ಸಂಬಂಧ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ