ಭಾರಿ ಮಳೆಗೆ ಸಾವಿರಾರು ಅಡಕೆ ಮರ ಧರೆಗೆ. ವ್ಯಕ್ತಿ ಸಾವು

KannadaprabhaNewsNetwork |  
Published : Apr 29, 2026, 02:00 AM IST
ಪೋಟೋ ಎಚ್ ಎಚ್ ಆರ್ ಪಿ 2 ಮಳೆಗಾಳಿಗೆ ಮುರಿದು ನಿದ್ದಿರುವ ಅಡಕೆ ಮರಗಳು. | Kannada Prabha

ಸಾರಾಂಶ

ಹೊಳೆಹೊನ್ನೂರು, ಆನವೇರಿ ಭಾಗದಲ್ಲಿ ಭಾನುವಾರ ಸಂಜೆ ಸುರಿದು ಭಾರಿ ಗಾಳಿಮಳೆಗೆ ಸಾವಿರಾರು ಅಡಕೆ ಮರಗಳು ನೆಲಸಮವಾಗಿವೆ. ಅಲ್ಲದೆ ಭಾರಿ ಗಾಳಿಗೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಅಸುನೀಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಹೊಳೆಹೊನ್ನೂರು, ಆನವೇರಿ ಭಾಗದಲ್ಲಿ ಭಾನುವಾರ ಸಂಜೆ ಸುರಿದು ಭಾರಿ ಗಾಳಿಮಳೆಗೆ ಸಾವಿರಾರು ಅಡಕೆ ಮರಗಳು ನೆಲಸಮವಾಗಿವೆ. ಅಲ್ಲದೆ ಭಾರಿ ಗಾಳಿಗೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಅಸುನೀಗಿದ್ದಾರೆ.

ಭಾನುವಾರ ಸಂಜೆ ಆರು ಘಂಟೆ ಸುಮಾರಿಗೆ ಇದ್ದಕ್ಕಿದ್ದ ಹಾಗೆ ರಭಸವಾದ ಗಾಳಿಯೊಂದಿಗೆ ಮಳೆ ಆರಂಭವಾಯಿತು. ನೋಡನೋಡುತ್ತಿದ್ದಂತೆ ಗಾಳಿಯ ವೇಗ ಹೆಚ್ಚಾಗತೊಡಗಿತು. ಇದರಿಂದ ಫಸಲಿಗೆ ಬಂದಿದ್ದ ಅಡಕೆ ಮತ್ತು ತೆಂಗಿನ ಮರಗಳು ಕ್ಷಣಾರ್ಧದಲ್ಲಿ ಮುರಿದು ನೆಲಕ್ಕುರುದವು. ಮಳೆ ಅಷ್ಟೇನು ಬರದಿದ್ದರೂ ಗಾಳಿ ವೇಗಕ್ಕೆ ಲಕ್ಷಾಂತರ ರೂಪಾಯಿ ಆದಾಯ ನೀಡುತ್ತಿದ್ದ ಅಡಕೆ ಮತ್ತು ತೆಂಗಿನ ಮರಗಳು ಮುರಿದು ಬಿದ್ದಿವೆ.

300ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿ:

ರಾತ್ರಿ ಬೀಸಿದ ಗಾಳಿಯಿಂದ ರಸ್ತೆಯ ಅಕ್ಕಪಕ್ಕದ ತೋಟಗಳ ಮರಗಳು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ರಸ್ತೆಯ ಮೇಲೆ ಬಿದ್ದಿವೆ. ಜೊತೆಗೆ 10ಕ್ಕೂ ಹೆಚ್ಚು ಟಿಸಿ ಕಂಬಗಳು ಟಿಸಿ ಸಮೇತ ನೆಲಕ್ಕುರುಳಿವೆ. ಇದರಿಂದ ಹೊಳೆಹೊನ್ನೂರು ಮತ್ತು ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಾತ್ರಿಯೆಲ್ಲಾ ಕತ್ತಲೆಯಲ್ಲಿ ಕಳೆಯುವಂತಾಗಿದೆ.

ವ್ಯಕ್ತಿ ಸಾವು:

ಅರಹತೊಳಲು ಗ್ರಾಮದ ಆರ್.ಲೋಕೇಶ (52) ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗ್ರಾಮದ ರಸ್ತೆ ಪಕ್ಕದಲ್ಲಿ ತರಕಾರಿ ಬೆಳೆಯುತ್ತಿದ್ದ ಲೋಕೇಶ್ ಭಾನುವಾರ ಸಂಜೆ ತರಕಾರಿ ಬಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಗಾಳಿಮಳೆ ಆರಂಭವಾಗುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ಅಡಕೆ ಮನೆಯ ಒಳಗಡೆ ಹೋಗಿ ಆಶ್ರಯ ಪಡೆದಿದ್ದಾರೆ. ಗಾಳಿ ಹೆಚ್ಚಾದ ಕಾರಣ ಅಡಿಕೆ ಮನೆಗೆ ಹಾಕಿದ್ದ ಹೆಂಚುಗಳೆಲ್ಲಾ ಹಾರಿ ಹೋಗುವುದನ್ನು ಕಂಡು ಗಾಬರಿಯಿಂದ ಹೃದಯಾಘಾತ ಸಂಬವಿಸಿದೆ. ತಕ್ಷಣ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವಷ್ಟರಲ್ಲಿ ಪ್ರಾಣ ಬಿಟ್ಟಿದ್ದಾನೆ. ಮೃತರು ಒಬ್ಬಳು ಮಗಳು ಮತ್ತು ಪತ್ನಿಯನ್ನು ಅಗಲಿದ್ದಾರೆ.

ಭಾರಿ ಗಾಳಿಯಿಂದ ಸುಮಾರು 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು10ಕ್ಕೂ ಹೆಚ್ಚು ಟಿಸಿ ಕಂಬಗಳು ಮುರಿದು ಬಿದ್ದಿರುವುದರಿಂದ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ತಡವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸಹನೆಯಿಂದ ಸಹಕರಿಸಬೇಕು ಎಂದು ಇಲ್ಲಿನ ಜೆಇಇ ಚಂದ್ರಪ್ಪ ಹೇಳಿದ್ದಾರೆ.

ಹಾರಿಹೋದ ಮನೆ ಮೇಲ್ಛಾವಣಿ:

ರಭಸವಾಗಿ ಬೀಸಿದ ಗಾಳಿಯಿಂದ ಹಲವಾರು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಹನುಮಂತಾಪುರ, ಅರಹತೊಳಲು ಹಾಗೂ ವಡ್ಡರಹಟ್ಟಿಯಲ್ಲಿ ಹೆಚ್ಚಿನ ಹಾನಿಯಾಗಿದೆ. ಅರಹತೊಳಲು ಕೈಮರದಲ್ಲಿರುವ ಗಿರಿಜಮ್ಮ ದೇವೇಂದ್ರಪ್ಪ ಮನೆಯ ಶೀಟ್‌ನ ಮೇಲ್ಛಾವಣಿ ಕಬ್ಬಿಣದ ಕಂಬಿ ಸಹಿತ 50 ಮೀಟರ್ ವರೆಗೆ ಹಾರಿ ಹೋಗಿ ಪಕ್ಕದ ಅಡಕೆ ತೋಟದಲ್ಲಿ ಬಿದ್ದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಂಇ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್
ಮೋದಿ ಭಯೋತ್ಪಾದ ಹೇಳಿಕೆ: ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ