)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆ ಮಾಲೀಕ ಮುನಿಶ್ಯಾಮಪ್ಪ(67), ಪ್ಲಂಬರ್ ರುದ್ರಕುಮಾರ್(40), ಡೆಲಿವರಿ ಬಾಯ್ ವಿಶ್ವನಾಥ್ ಆಚಾರ್(24) ಮೃತಪಟ್ಟವರು. ಮನೆ ಮಾಲೀಕರಾದ ಮುನಿ ಶ್ಯಾಮಪ್ಪ ಅವರ ಮನೆಯಲ್ಲಿ ಶನಿವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಮನೆ ಮಾಲೀಕರಾದ ಮುನಿ ಶ್ಯಾಮಪ್ಪ ಅವರು, ಪ್ಲಂಬರ್ ರುದ್ರಕುಮಾರ್ ಸಹಾಯದೊಂದಿಗೆ ಸಂಪು ಸ್ವಚ್ಛತೆಗೆ ಇಳಿದಿದ್ದರು. ಆದರೆ ಇವರಿಬ್ಬರೂ ಎಷ್ಟೊತ್ತಾದರೂ ಮೇಲೆ ಬರದೇ ಇದ್ದಾಗ ಪಕ್ಕದ ಮನೆಯ ವಿಶ್ವನಾಥ್ ನೆರವಿಗೆ ಧಾವಿಸಿದ್ದಾರೆ. ಆದರೆ ವಿಶ್ವನಾಥ್ ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾರೆ.ಘಟನೆ ವಿವರ: ಸಂಪು ಸ್ವಚ್ಛಗೊಳಿಸುವ ಸಲುವಾಗಿ ಸಂಪಿನ ಒಳಗಡೆ ಇಳಿದು ರಾಸಾಯನಿಕಗಳನ್ನು ಮುನಿಶ್ಯಾಮಪ್ಪ ಸಿಂಪಡಿಸಿದ್ದರು. ರಾಸಾಯನಿಕದ ಗಾಳಿಯನ್ನು ಸೇವಿಸಿ ಮುನಿಶ್ಯಾಮಪ್ಪ, ಪ್ಲಂಬರ್ ರುದ್ರಕುಮಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇವರನ್ನು ರಕ್ಷಿಸಲು ಡೆಲಿವರಿ ಬಾಯ್ ವಿಶ್ವನಾಥ್ ಆಚಾರ್ ಕೂಡ ಸಂಪಿಗೆ ಇಳಿದಾಗ ಆತನೂ ಪಜ್ಞೆ ತಪ್ಪಿಬಿದ್ದಿದ್ದಾನೆ. ಇದನ್ನು ಕಂಡ ಮುನಿಶ್ಯಾಮಪ್ಪ ಅವರ ಪತ್ನಿ ಜೋರಾಗಿ ಕೂಗಿ ಕೊಂಡಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.