ಧಾರವಾಡದ ರೀಗಲ್ ವೃತ್ತದಲ್ಲಿ ರಾಷ್ಟ್ರಧ್ವಜಕ್ಕಿಂತಲೂ ಎತ್ತರವಾಗಿ ಟಿಪ್ಪು ಧ್ವಜ ಹಾರಿಸಿ ಅಪಮಾನ

KannadaprabhaNewsNetwork |  
Published : Oct 03, 2024, 01:27 AM ISTUpdated : Oct 03, 2024, 10:43 AM IST
546 | Kannada Prabha

ಸಾರಾಂಶ

ಕಿಡಿಗೇಡಿಗಳು ರಾಷ್ಟ್ರಧ್ವಜಕ್ಕಿಂತಲೂ ಎತ್ತರವಾಗಿ ಟಿಪ್ಪುಸುಲ್ತಾನ್ ಭಾವಚಿತ್ರದ ಧ್ವಜ ಹಾರಿಸಿದ ಘಟನೆ ಬುಧವಾರ ಧಾರವಾಡದ ರೀಗಲ್ ವೃತ್ತದಲ್ಲಿ ನಡೆದಿದೆ.

ಧಾರವಾಡ: ಕಿಡಿಗೇಡಿಗಳು ರಾಷ್ಟ್ರಧ್ವಜಕ್ಕಿಂತಲೂ ಎತ್ತರವಾಗಿ ಟಿಪ್ಪುಸುಲ್ತಾನ್ ಭಾವಚಿತ್ರದ ಧ್ವಜ ಹಾರಿಸಿದ ಘಟನೆ ಬುಧವಾರ ಧಾರವಾಡದ ರೀಗಲ್ ವೃತ್ತದಲ್ಲಿ ನಡೆದಿದೆ.

ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ದಿನವೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಕಿಡಗೇಡಿಗಳ ಕೃತ್ಯವನ್ನು ಹಿಂದೂ ಸಂಘಟನೆಗಳು ಖಂಡಿಸಿವೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು. ಟಿಪ್ಪು ಸುಲ್ತಾನ್ ಧ್ವಜ ಹಾರಿಸಿದ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಅಲ್ಲಿನ ವ್ಯಾಪಾರಸ್ಥರ ನೆರವಿನೊಂದಿಗೆ ಟಿಪ್ಪು ಧ್ವಜ ತೆರವು ಮಾಡಿದರು.

ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹುದ್ದೂರ್‌ ಶಾಸ್ತ್ರೀ ಜಯಂತಿ ಅಂಗವಾಗಿ ಬುಧವಾರ ಬೆಳಗ್ಗೆ ಅಬ್ದುಲ್‌ ಕಲಾಂ ಸಾಂಸ್ಕೃತಿಕ ವೇದಿಕೆಯಿಂದ ಗಾಂಧೀಜಿ ಭಾವಚಿತ್ರವಿಟ್ಟು ಪೂಜೆಗೈದು ಅದರ ಸುತ್ತಲು ರಾಷ್ಟ್ರಧ್ವಜ ಅಳವಡಿಸಿದ್ದರು. ಇದಾದ ಬಳಿಕ ಯಾರೋ ಟಿಪ್ಪುಸುಲ್ತಾನ್‌ ಭಾವಚಿತ್ರದ ಧ್ವಜ ಹಾರಿಸಿ ಹೋಗಿದ್ದಾರೆ.

ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಭಜರಂಗ ದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ