ಬಿಸಿಲ ಬೇಗೆಯಿಂದ ಪಾರಾಗಲು ಎಳನೀರಿಗೆ ಮೊರೆ

KannadaprabhaNewsNetwork |  
Published : May 11, 2026, 02:30 AM IST
ಪೊಟೋ-ಪಟ್ಟಣದಲ್ಲಿ ಬಿಸಿಲಿನ ಬೇಗೆಗೆ ತತ್ತರಿಸಿದ ಜನರು ಎಳೆನೀರು ಕುಡಿದು ದಾಹ ತೀಸಿರಿಕೊಳ್ಳುತ್ತಿರುವುದು.  | Kannada Prabha

ಸಾರಾಂಶ

ಬಿಸಿಲ ಬೇಗೆಗೆ ಎಷ್ಟು ನೀರು ಕುಡಿದರೂ ದಾಹ ನೀಗುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಎಳನೀರು ಉತ್ತಮ ಖನಿಜಾಂಶ ಹೊಂದಿದ ಆರೋಗ್ಯಯುಕ್ತ ಪೇಯವಾಗಿದೆ. ಬೇಸಿಗೆಯ ಪೂರ್ವದಲ್ಲಿ ಎಳನೀರಿನ ಬೆಲೆ ₹30- 40 ರಷ್ಟಿತ್ತು. ಯಾವಾಗ ಬೇಸಿಗೆ ಆರಂಭವಾಯಿತೋ ಎಳನೀರಿನ ಬೆಲೆ ₹50ಕ್ಕೆ ಏರಿಕೆಯಾಗಿದೆ.

ಅಶೋಕ ಸೊರಟೂರ

ಲಕ್ಷ್ಮೇಶ್ವರ: ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಿದ್ದು, ಬಿಸಿಲ ಬೇಗೆ ತಾಳಲಾರದೆ ಜನ ಎಳನೀರು, ಮಜ್ಜಿಗೆ, ತಂಪಾದ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಕೆಂಡದಂತ ಬಿಸಿಲ ಹೊಡೆತಕ್ಕೆ ತತ್ತರಿಸಿದ ಜನಸಾಮಾನ್ಯರು ದಾಹ ತೀರಿಸಿಕೊಳ್ಳಲು ಆರೋಗ್ಯಯುಕ್ತ ಎಳನೀರು ಕುಡಿಯುತ್ತಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿರುವ ತಾಪಮಾನ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಹೈರಾಣು ಮಾಡಿದೆ. ತಾಲೂಕಿನಾದ್ಯಂತ 38- 39 ಡಿಗ್ರಿ ಆಸುಪಾಸು ಉಷ್ಣಾಂಶ ದಾಖಲಾಗುತ್ತಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಮಾಡಿದೆ. ಮುಂಗಾರು ಹಂಗಾಮಿನ ಮಳೆಯ ಕೊರತೆ ಬಿಸಿಲ ಝಳಕ್ಕೆ ತುಪ್ಪ ಸುರಿಯುವ ಕಾರ್ಯ ಮಾಡಿದೆ.

ಬಿಸಿಲ ಬೇಗೆಗೆ ಎಷ್ಟು ನೀರು ಕುಡಿದರೂ ದಾಹ ನೀಗುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಎಳನೀರು ಉತ್ತಮ ಖನಿಜಾಂಶ ಹೊಂದಿದ ಆರೋಗ್ಯಯುಕ್ತ ಪೇಯವಾಗಿದೆ. ಬೇಸಿಗೆಯ ಪೂರ್ವದಲ್ಲಿ ಎಳನೀರಿನ ಬೆಲೆ ₹30- 40 ರಷ್ಟಿತ್ತು. ಯಾವಾಗ ಬೇಸಿಗೆ ಆರಂಭವಾಯಿತೋ ಎಳನೀರಿನ ಬೆಲೆ ₹50ಕ್ಕೆ ಏರಿಕೆಯಾಗಿದೆ.

ಹಣ್ಣು, ಮಜ್ಜಿಗೆಗೂ ಬೇಡಿಕೆ: ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಸೇರಿದಂತೆ ನಾನಾ ಬಗೆಯ ಹಣ್ಣುಗಳಿಗೂ ವಿಪರೀತ ಬೇಡಿಕೆ ಉಂಟಾಗಿದೆ. ಅದೇ ರೀತಿ ದೇಹ ತಂಪಾಗಿಸಲು ಜನ ಮಜ್ಜಿಗೆಯ ಮೊರೆ ಹೋಗುತ್ತಿದ್ದಾರೆ. ಸೆಕೆ ತಾಳದೇ ಈ ಬೇಸಿಗೆ ಕಾಲ ಯಾವಾಗ ಮುಗಿಯುತ್ತಪ್ಪಾ ಎಂದು ಜನರು ಅಲವತ್ತುಕೊಳ್ಳುತ್ತಿದ್ದಾರೆ.

ಆರೋಗ್ಯಕರ ಎಳನೀರು: ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಅನಾರೋಗ್ಯಯುಕ್ತ ಕೋಲ್ಡ್‌ ಡ್ರಿಂಕ್ಸ್‌ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಆರೋಗ್ಯಕರ ಎಳನೀರು, ನಿಂಬೆಹಣ್ಣಿನ ಜ್ಯೂಸ್, ಕಬ್ಬಿನ ಹಾಲು ಹಾಗೂ ಹಣ್ಣಿನ ರಸ ಕುಡಿಯುವುದು ಸೂಕ್ತ ಎಂದು ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಶ್ರೀಕಾಂತ ಖಾಟೆವಾಲೆ ತಿಳಿಸಿದರು.

ಬೇಡಿಕೆ ಹೆಚ್ಚಳ: ಈ ವರ್ಷ ಬಿಸಿಲು ಹೆಚ್ಚಾಗಿರುವುದರಿಂದ ಎಳನೀರಿನ ಬೇಡಿಕೆ ಹೆಚ್ಚಾಗಿದೆ. ಜನರು ಎಳನೀರು ಮೊರೆ ಹೋಗುತ್ತಿರುವುದು ಉತ್ತಮ. ಆದರೆ ಉತ್ತಮ ಎಳನೀರು ಕಾಯಿಗಳು ಸಿಗುತ್ತಿಲ್ಲ. ಸಿಕ್ಕರೂ ಬೆಲೆ ಹೆಚ್ಚಾಗಿರುವುದರಿಂದ ಲಾಭಾಂಶ ಕಡಿಮೆಯಾಗಿದೆ ಎಂದು ಎಳನೀರು ವ್ಯಾಪಾರಿ ರಾಮಣ್ಣ ಶೆಟ್ಟಿಕೇರಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಸ್ನೇಹಿ ಯೋಜನೆಗಳು ಅಗತ್ಯ: ಸತೀಶ್
ಸಮಾಜವನ್ನು ಸನ್ಮಾರ್ಗದೆಡೆಗೆ ಸಾಗಿಸಿದ ಮಲ್ಲಮ್ಮ