ಪಾಂಡೇಶ್ವರ, ಹೊಯ್ಗೆಬಜಾರ್‌ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಟ್ರಾಫಿಕ್‌ ಬ್ಯಾರಿಕೇಡ್‌, ರೈಲ್ವೆ ಗೇಟ್‌ ವೇಳಾಪಟ್ಟಿ ಪಲಕ ಅನಾವರಣ

KannadaprabhaNewsNetwork |  
Published : Jan 27, 2026, 04:00 AM IST
ಟ್ರಾಫಿಕ್‌ ಬ್ಯಾರಿಕೇಡ್‌ ಮತ್ತು ರೈಲ್ವೆಗೇಟ್‌ ವೇಳಾಪಟ್ಟಿ ಅನಾವರಣ ಕಾರ್ಯಕ್ರಮ  | Kannada Prabha

ಸಾರಾಂಶ

ಮಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಭಾನುವಾರ ಆಯೋಜಿಸಲಾಯಿತು.

ಮಂಗಳೂರು: ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವತಿಯಿಂದ ಅವೇಕ್ ಕುಡ್ಲ ಪರಿಕಲ್ಪನೆಯಡಿ ಮಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಭಾನುವಾರ ಆಯೋಜಿಸಲಾಯಿತು. ಸಂಚಾರ ಡಿಸಿಪಿ ರವಿಶಂಕರ್ ಇವರು ಟ್ರಾಫಿಕ್ ಬ್ಯಾರಿಕೇಡ್ಸ್ ಹಾಗೂ ರೈಲ್ವೆ ಗೇಟ್ ವೇಳಾಪಟ್ಟಿ ಫಲಕಗಳನ್ನು ಅನಾವರಣ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಜಾಗೃತಿ ಕಾರ್ಯಕ್ರಮದ ಅಂಗವಾಗಿ ಟ್ರಸ್ಟ್‌ನ ಅವೇಕ್ ಕುಡ್ಲ ತಂಡ ಸ್ಥಳೀಯ ಸ್ವಯಂಸೇವಕರ ಸಹಕಾರದಲ್ಲಿ ರೈಲ್ವೆ ಗೇಟ್ ಮುಚ್ಚುವ ಸಮಯದಲ್ಲಿ ಸಾರ್ವಜನಿಕರಿಗೆ ಲೇನ್ ಡಿಸಿಪ್ಲಿನ್, ಸಂಚಾರ ಶಿಸ್ತು ಹಾಗೂ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿತು.

ಮಾಜಿ ಮೇಯರ್‌ ದಿವಾಕರ್‌, ಮಾಜಿ ಕಾರ್ಪೊರೇಟರ್ ಲತೀಫ್, ಟ್ರಸ್ಟಿನ ಅಧ್ಯಕ್ಷ ಸೀತಾರಾಮ ಎ., ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್, ತಜ್ಞರ ಸಮಿತಿ ಸದಸ್ಯರಾದ ಮಂಜುಳಾ ಜಿ, ಮನೋಹರ್ ಪ್ರಭು, ಖಜಾಂಚಿ ರಾಮ ದೇವಾಡಿಗ, ಕಾರ್ಯಕ್ರಮ ಸಂಯೋಜಕ ಪುನೀತ್ ಪೂಜಾರಿ, ವಾರ್ಡ್ ಸಂಯೋಜಕಿ ಸರಿತಾ, ಕಚೇರಿ ಸಂಯೋಜಕಿ ನೇಹಾ ಮತ್ತಿತರರಿದ್ದರು. ನಾಲ್ಕು ಪರ್ಯಾಯ ಮಾರ್ಗ

ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಅಧ್ಯಯನದ ಆಧಾರದ ಮೇಲೆ ಸಾರ್ವಜನಿಕರಿಗೆ ನಾಲ್ಕು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಯಿತು. ಅವುಗಳಲ್ಲಿ ಮೊರ್ಗನ್ಸ್ ಗೇಟ್, ಮಾರ್ನಮಿಕಟ್ಟೆ, ಕೋಟಿ ಚೆನ್ನಯ್ಯ ಜಂಕ್ಷನ್, ಕೆಎಂಸಿ ಅತ್ತಾವರ, ರೈಲ್ವೆ ಸ್ಟೇಷನ್ ರಸ್ತೆ, ಎ.ಬಿ. ಶೆಟ್ಟಿ ವೃತ್ತ. ಮೊರ್ಗನ್ಸ್ ಗೇಟ್, ಮಾರ್ನಮಿಕಟ್ಟೆ, ಕೋಟಿ ಚೆನ್ನಯ್ಯ ಜಂಕ್ಷನ್, ಕಂಕನಾಡಿ ಜಂಕ್ಷನ್, ಫಳ್ನೀರ್, ಮಿಲಾಗ್ರಿಸ್, ಹಂಪನಕಟ್ಟೆ. ಮೊರ್ಗನ್ಸ್ ಗೇಟ್, ಜೆಪ್ಪು ಮಾರ್ಕೆಟ್, ಕಾಶಿಯ ಜಂಕ್ಷನ್, ಎಮ್ಮೆಕೆರೆ ಕ್ರಾಸ್ ರಸ್ತೆ, ರಾಮಕೃಷ್ಣ ಆಶ್ರಮ ರಸ್ತೆ, ಪಾಂಡೇಶ್ವರ ಹಾಗೂ ಮೊರ್ಗನ್ಸ್ ಗೇಟ್, ಜೆಪ್ಪು ಮಾರ್ಕೆಟ್, ಬೋಳಾರ, ಹೊಯ್ಗೆ ಬಜಾರ್, ರೊಸಾರಿಯೋ ರಸ್ತೆ ಸೇರಿವೆ. ಈ ಮಾರ್ಗಗಳನ್ನು ಪರ್ಯಾಯವಾಗಿ ಬಳಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲು ಹಾಗೂ ನಿರ್ವಹಣೆ ಸುಲಭವಾಗಲು ಸಹಕಾರಿಯಾಗುತ್ತದೆ ಎಂದು ಡಿಸಿಪಿ ರವಿಶಂಕರ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ
ತಂದೆಯಂತೆ ಜನಸೇವೆ ಮಾಡುವ ಕನಸು ನನ್ನದು: ವಿನಯ ತಿಮ್ಮಾಪುರ