ಕಿರಿದಾದ ರಸ್ತೆ ಬದಿಯಲ್ಲೇ ಸರಕು ಇಟ್ಟು ಮಾರಾಟ । ನಿಲುಗಡೆಗೆ ಸ್ಥಳ ಇಲ್ಲದೆ ದಟ್ಟಣೆ । ಸಾರ್ವಜನಿಕರ ಆಕ್ರೋಶ
ಗೌರಿ ಹಬ್ಬದ ದಿನವಾದ ಶುಕ್ರವಾರ ಪಟ್ಟಣದ ಜನನಿಬಿಡ ರಸ್ತೆಯಾದ ಕಿತ್ತೂರು ರಾಣಿ ಚೆನ್ನಮ್ಮ (ಕೆಆರ್ಸಿ) ಜನಸಂದಣಿಯ ಜತೆಗೆ ಬೈಕ್, ಆಟೋ, ಕಾರು, ಸೈಕಲ್ ಸವಾರರ ಸಂಚಾರ ಹೆಚ್ಚಾದ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಿ ವಾಹನಗಳ ಸವಾರರು, ಪಾದಚಾರಿಗಳು ಸಂಚರಿಸಲು ಪರದಾಡಿದರು.
ಮೊದಲೇ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಕಿರುದಾಗಿದೆ. ಅಲ್ಲದೆ ಬಹುತೇಕ ಅಂಗಡಿ ಮುಂಗಟ್ಟುಗಳ ಮುಂದೆ ಸರಕು ಇಟ್ಟುಕೊಂಡ ಕಾರಣ ರಸ್ತೆ ಮತ್ತಷ್ಟು ಕಿರಿದಾಗಿದೆ. ಇದು ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.ಗೌರಿ, ಗಣೇಶ ಹಬ್ಬದ ಕಾರಣ ಪಟ್ಟಣದಲ್ಲಿ ಜನರ ಸಂಚಾರ ಹೆಚ್ಚಿದೆ. ಅಲ್ಲದೆ ಹಬ್ಬದ ಸರಕು, ಸಾಮಾಗ್ರಿ, ಬಟ್ಟೆ ಖರೀದಿಸಲು ಜನರು ಬಂದ ಕಾರಣ ಸಂಚಾರಕ್ಕೆ ಈ ರಸ್ತೆಯಲ್ಲಿ ಕಿರಿ ಕಿರಿ ಉಂಟಾಗಿ ಜನರು ಬೇಸತ್ತರು. ರಸ್ತೆ ಬಿಟ್ಟು ಹೋದ್ರೆ ಸಾಕು ಎಂದು ಅಣ್ಣೂರು ಕೇರಿಯ ಮಹಿಳೆಯೊಬ್ಬರು ರಸ್ತೆಯಲ್ಲಿ ಗೊಣಗುತ್ತ ತೆರಳಿದರು.
ಆಕ್ರೋಶ:
ಕೆಆರ್ಸಿ ರಸ್ತೆಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಬೈಕ್, ಕಾರು, ಆಟೋಗಳು ಇದೇ ರಸ್ತೆಯಲ್ಲಿ ಸರಕು, ಸಾಮಾಗ್ರಿ ಖರೀದಿಗೆ ರಸ್ತೆ ಬದಿ ನಿಲ್ಲಿಸುತ್ತಿದ್ದ ಕಾರಣ ಟ್ರಾಫಿಕ್ ಜಾಂ ಆಗಿತ್ತು. ರಸ್ತೆಯಲ್ಲಿ ಗಸ್ತು ನಡೆಸಿ ಟ್ರಾಫಿಕ್ ಕಿರಿ ಕಿರಿ ತಪ್ಪಿಸುವ ಕೆಲಸ ಪೊಲೀಸರು ಮಾಡಿದ್ದಾರೆ.