ರೈಲು ಸಂಚಾರ ಭಾಗಶಃ ರದ್ದು

KannadaprabhaNewsNetwork |  
Published : Jan 25, 2024, 02:04 AM IST
ರೈಲು | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯ ಗಿಣಗೇರಾ ರೈಲು ನಿಲ್ದಾಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರೈಲುಗಳನ್ನು ಭಾಗಶಃ, ರದ್ದುಪಡಿಸಲಾಗಿದ್ದರೆ, ಕೆಲ ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ

ಹುಬ್ಬಳ್ಳಿ: ಕೊಪ್ಪಳ ಜಿಲ್ಲೆಯ ಗಿಣಗೇರಾ ರೈಲು ನಿಲ್ದಾಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರೈಲುಗಳನ್ನು ಭಾಗಶಃ, ರದ್ದುಪಡಿಸಲಾಗಿದ್ದರೆ, ಕೆಲ ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ.

ಸೊಲ್ಲಾಪುರ- ಹೊಸಪೇಟೆ (ರೈಲು ಸಂಖ್ಯೆ 11305) ಜ. 25,ಫೆ. 6, ಫೆ. 7ರಂದು ಹೊಸಪೇಟೆ ಹಾಗೂ ಗದಗ ನಿಲ್ದಾಣಗಳ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಹೊಸಪೇಟೆ ಬದಲು ಗದಗ ಕೊನೆಯಾಗಲಿದೆ. ಹೊಸಪೇಟೆ- ಸೊಲ್ಲಾಪುರ (ರೈಲು ಸಂಖ್ಯೆ 11306) ಜ. 25, 26, ಫೆ.7 ಹಾಗೂ 8ರಂದು ಗದಗ- ಹೊಸಪೇಟೆ ಮಧ್ಯೆ ಸಂಚರಿಸುವುದಿಲ್ಲ. ಗದಗ ನಿಲ್ದಾಣದಿಂದ ಪ್ರಯಾಣ ಶುರುವಾಗಲಿದೆ. ವಿಜಯವಾಡ- ಎಸ್‌ಎಸ್‌ಎಸ್‌ (ರೈಲು ಸಂಖ್ಯೆ- 17330) ಹುಬ್ಬಳ್ಳಿ ಮಾರ್ಗ ಮಧ್ಯೆದಲ್ಲಿ ಫೆ. 6ರಂದು 2 ಗಂಟೆ ನಿಯಂತ್ರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರ ಕೊರತೆ: ಪ್ರಯಾಣಿಕರ ಕೊರತೆಯಿಂದಾಗಿ ರೈಲು ಸಂಖ್ಯೆ 17347/17348 ಎಸ್‌ಎಸ್‌ಎಸ್ ಹುಬ್ಬಳ್ಳಿ-ಚಿತ್ರದುರ್ಗ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೆಮು ಎಕ್ಸ್‌ಪ್ರೆಸ್‌ ರೈಲುಗಳನ್ನು ಭಾಗಶಃ ರದ್ದತಿ ವಿಸ್ತರಣೆ ಮಾಡಲಾಗುತ್ತಿದೆ. ರೈಲು ಸಂಖ್ಯೆ (17347) ಹುಬ್ಬಳ್ಳಿ- ಚಿತ್ರದುರ್ಗ ರೈಲನ್ನು ಪ್ರಯಾಣಿಕರ ಕೊರತೆಯಿಂದಾಗಿ ಚಿಕ್ಕಜಾಜೂರ- ಚಿತ್ರದುರ್ಗ ಮಧ್ಯೆ ಜ. 31ರ ವರೆಗೆ ರದ್ದುಪಡಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿರುವ ಕಾರಣ ಮಾ. 31ರ ವರೆಗೆ ಚಿಕ್ಕಜಾಜೂರಲ್ಲಿ ಕೊನೆ ನಿಲುಗಡೆಯಾಗಲಿದೆ. ಅದೇ ರೀತಿ ರೈಲು ಸಂಖ್ಯೆ 17348 ಚಿತ್ರದುರ್ಗ -ಎಸ್‌ಎಸ್‌ಎಸ್‌ ಹುಬ್ಬಳ್ಳಿ ಮಧ್ಯೆ ಸಂಚರಿಸಬೇಕಿದ್ದ ರೈಲು ಚಿಕ್ಕಜಾಜೂರಿನಿಂದ ಹುಬ್ಬಳ್ಳಿವರೆಗೆ ಮಾತ್ರ ಮಾ. 31ರ ವರೆಗೆ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!