ಡಂಬಳ: ಬಿಜೆಪಿ ಶಿಸ್ತಿಗೆ ಮಹತ್ವ ನೀಡುವ ಪಕ್ಷವಾಗಿದ್ದು, ಕಾರ್ಯಕರ್ತರಿಗೆ ಮೊದಲ ಪಾಠವಾಗಿ ಶಿಸ್ತಿನ ಕುರಿತೇ ತಿಳಿಸಲಾಗುತ್ತದೆ ಎಂದು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಗಿಡ್ಡಪ್ಪ ಹಾರೂಗೇರಿ ಮಾತನಾಡಿ, ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶಸೇವೆಯೇ ಜನಾರ್ದನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಪಕ್ಷ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೇ ಪಕ್ಷದ ದೊಡ್ಡ ಶಕ್ತಿ ಎಂದು ಹೇಳಿದರು.
ನಾಗರಾಜ ಕುಲಕರ್ಣಿ, ಫಕ್ಕನಗೌಡ ರಡ್ಡೆರ, ವೆಂಕನಗೌಡ ಪಾಟೀಲ, ಮುದ್ಲಿಂಗಪ್ಪ ಕೊರ್ಲಹಳ್ಳಿ, ನಾಗಪ್ಪ ಚಿಕ್ಕರಡ್ಡಿ, ಶ್ರೀದೇವಿ ಶೇಖಪ್ಪ ಯಾವಗಲ್, ರತ್ನಮ್ಮ ತೋಟಪ್ಪನವರ, ಸೋಮಶೇಖರ ಹಿರೇಮಠ, ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೊರ, ರೇಣುಕಾ ಚಿಕ್ಕರಡ್ಡಿ, ಚನ್ನವೀರಪ್ಪ ಚಿನ್ನೂರ, ರಾಜೇಶ ಅರಕಾಲ, ಬರಮಪ್ಪ ನಾಗನೂರ, ಬರಮಪ್ಪ ತಿಮ್ಮಾಪುರ, ಸೋಮಶೇಖರಯ್ಯ ಹಿರೇಮಠ, ಕಾರ್ಯದರ್ಶಿ ಪಂಚಾಕ್ಷರಯ್ಯ ಹರ್ಲಾಪುರಮಠ, ಪ್ರಭು ಕೊರ್ಲಹಳ್ಳಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ಕೃಷ್ಣ ಬಂಡಿ, ಶಿವಾನಂದ ಬಂಡಿ, ಮುತ್ತು ಚಿನ್ನಪ್ಪಗೌಡ್ರ, ಶಂಕ್ರಪ್ಪ ಮುಗಳಿ, ನಾಗಪ್ಪ ಚಿನ್ನಪ್ಪಗೌಡ್ರ, ರಮೇಶ ಸಿಗ್ಗಾವಿ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.