ಸಾರಿಗೆ ವಿಭಾಗೀಯ ಕಚೇರಿ ಗ್ರಾಮೀಣರಿಗೆ ವರದಾನ

KannadaprabhaNewsNetwork |  
Published : Apr 09, 2026, 01:15 AM IST
ಮಧುಗಿರಿಯ ನಕುಲ್ ಪಾರ್ಟಿ ಹಾಲ್ನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವತಿಯಿಂದ ವಿಭಾಗೀಯ ಕಚೇರಿ ಮಂಜೂರು ಮಾಡಿಸಿದ ಶಾಸಕ ಕೆ.ಎನ್.ರಾಜಣ್ಣ ರವರನ್ನು ಸಾರಿಗೆ ನೌಕರರ ಸನ್ಮಾನಿಸಿದರು.  | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದಿಂದ ಮಧುಗಿರಿಗೆ ವ್ಯಾಸಂಗ ಮಾಡಲು ವಿವಿಧ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಸಾರಿಗೆ ವಿಭಾಗೀಯ ಕಚೇರಿ ವರದಾನ. ಇದನ್ನು ಅತಿ ಶೀಘ್ರವಾಗಿ ಪ್ರಾರಂಭ ಮಾಡಿಸಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಗ್ರಾಮೀಣ ಪ್ರದೇಶದಿಂದ ಮಧುಗಿರಿಗೆ ವ್ಯಾಸಂಗ ಮಾಡಲು ವಿವಿಧ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಸಾರಿಗೆ ವಿಭಾಗೀಯ ಕಚೇರಿ ವರದಾನ. ಇದನ್ನು ಅತಿ ಶೀಘ್ರವಾಗಿ ಪ್ರಾರಂಭ ಮಾಡಿಸಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ನಕುಲ್ ಪಾರ್ಟಿ ಹಾಲ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವತಿಯಿಂದ ಬುಧವಾರ ನೂತನವಾಗಿ ವಿಭಾಗೀಯ ಕಚೇರಿಯನ್ನು ಮಂಜೂರು ಮಾಡಿಸಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 2013 ರಲ್ಲಿ ನಾನು ಶಾಸಕನಾಗಿದ್ದಾಗ ಸಾರಿಗೆ ಸಂಸ್ಥೆಯ ಡಿಪೋ ಮಂಜೂರು ಮಾಡಿಸುವ ಸಂದರ್ಭದಲ್ಲಿ 2.20 ಎಕರೆ ಜಮೀನನ್ನು ವಿಭಾಗೀಯ ಕಚೇರಿಗಾಗಿ ಮೀಸಲಿಟ್ಟಿದ್ದು, ಇಂದು ಜಾಗದ ಸಮಸ್ಯೆಯೇ ಇಲ್ಲದಂತಾಗಿದೆ ಎಂದರು. ಸಾರಿಗೆ ವಿಭಾಗೀಯ ಕಚೇರಿಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಹಾಗೂ ತಾಲೂಕಿನ ಹಲವು ಗ್ರಾಮಗಳಿಗೆ ಬಸ್ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಈ ಹಿಂದೆ ಬಸ್ ಸೌಕರ್ಯಗಳ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲಾ - ಕಾಲೇಜುಗಳಿಗೆ ಕಳುಹಿಸುತ್ತಿರಲಿಲ್ಲ. ಆದರೆ ಈಗ ಬಸ್ ಸೌಕರ್ಯ ಹಾಗೂ ನೌಕರರ ಸಹಕಾರದಿಂದ ಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ಸಹಕಾರಿಯಾಗಿದೆ ಎಂದರಲ್ಲದೆ ಗ್ರಾಮೀಣ ಜನರು ವ್ಯವಹಾರಕ್ಕಾಗಿ ಓಡಾಡಲು ಹೆಚ್ಚು ಉಪಯುಕ್ತವಾಗಿದೆ. ಮಧುಗಿರಿಯಲ್ಲಿ ಎಲೆಕ್ಟ್ರಿಕ್ ಬಸ್ ಡಿಪೋವನ್ನು ಶೀಘ್ರವಾಗಿ ಮಂಜೂರು ಮಾಡಿಸಲು ಈಗಾಗಲೇ ಚಿಂತನೆ ನಡೆಸಿದ್ದೇನೆ ಹಾಗೂ ಈ ಡಿಪೋಗೂ ಜಾಗವನ್ನು ಮಂಜೂರು ಮಾಡಿಸಲಾಗುವುದು. ಮಧುಗಿರಿಯಲ್ಲಿ ಈಗಿರುವ ಸಾರಿಗೆ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು. ಸಾರಿಗೆ ನಿಗಮದ ನೌಕರರ ಸಮಸ್ಯೆಗಳ ಮನವಿ ಪತ್ರವನ್ನು ನೀಡಿದ್ದು. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಈ ಬಗ್ಗೆ ಸಾರಿಗೆ ಡಿಪೋ ವ್ಯವಸ್ಥಾಪಕರು ಗಮನ ಹರಿಸುವಂತೆ ಶಾಸಕರು ಸೂಚಿಸಿದರು.

ಸಾರಿಗೆ ಬಸ್ ಡಿಪೋ ವ್ಯವಸ್ಥಾಪಕ ಕಾಂತರಾಜು, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ , ಸಾರಿಗೆ ಇಲಾಖೆಯ ಲೆಕ್ಕಪರಿಶೋಧಕ ಅನ್ನಪೂರ್ಣ, ಚಾಲಕರಾದ ನಾಗರಾಜು, ಲೋಕೇಶ್, ಸೋಮಶೇಖರ್, ಜಗದೀಶ್, ಅನಿಲ್, ರಾಜಣ್ಣ , ಗೋವಿಂದರಾಜು, ಮೋಹನ್, ನಾಗರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

700 ಅಹವಾಲು ಸ್ವೀಕರಿಸಿದ ಸಚಿವ ಡಾ: ಜಿ. ಪರಮೇಶ್ವರ
ಜನಪದ ಪೂರ್ವಜನರು ನೀಡಿರುವ ದೊಡ್ಡ ಕೊಡುಗೆ