ಕನ್ನಡಪ್ರಭ ವಾರ್ತೆ ಪಾವಗಡ
ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು, ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಿದ್ದು, ಪ್ರತಿಭಾನ್ವಿತರಾಗಿ ಹೊರಹೊಮ್ಮಬೇಕಿದೆ. ಹೀಗಾಗಿ ಪ್ರತಿಯೊಬ್ಬರೂ ವಿದ್ಯಾವಂತರಾದರೆ ರಾಷ್ಟ್ರದ ಪ್ರಗತಿಗೆ ಸಹಕಾರವಾಗಲಿದೆ. ಜತೆಗೆ ಶಿಸ್ತು, ಸಂಸ್ಕಾರ ಮುಖ್ಯವಾಗಿದ್ದು, ಧಾರ್ಮಿಕ ಶ್ರದ್ಧಾ ಕಾರ್ಯಕ್ರಮ ರೂಪಿಸಬೇಕು. ದೇವರೆಂದರೆ ಕಣ್ಣಿಗೆ ಕಾಣದ ಒಂದು ಅದ್ಭುತ ಶಕ್ತಿ, ಧರ್ಮ ಅನುಸರಣೆ ಹಾಗೂ ಭಗವಂತನ ಪ್ರಾರ್ಥನೆಯಿಂದ ನಾವು ಒಳಿತು ಕಾಣಲು ಸಾಧ್ಯ. ಹೀಗಾಗಿ ಸಮಾಜಕ್ಕೆ ಉಪಯುಕ್ತ ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಆರ್ಯ ವೈಶ್ಯ ಸಮುದಾಯ ಸೇರಿ ಇತರೆ ಸಮುದಾಯಗಳ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಲ್ಲುವೆ ಎಂದು ಹೇಳಿದರು.ನಂತರ ಸಮಾಜದಿಂದ ಸನ್ಮಾನ ಸ್ವೀಕರಿಸಿ, ತಾಲೂಕು ಆರ್ಯ ವೈಶ್ಯ ಸಂಘದ ಅಧ್ಯಕ್ಷ ಜಿ.ಸುದೇಶ್ ಬಾಬು ಹಾಗೂ ಎಸ್ಎಸ್ಕೆ ಸಂಘದ ಅಧ್ಯಕ್ಷ ಜಿ.ಅನಿಲ್ ಕುಮಾರ್, ಮುಖಂಡರಾದ ಕೆ.ವಿ.ಶ್ರೀನಿವಾಸ್, ಖ್ಯಾತ ವೈದ್ಯೆ ಜಯಂತಿ, ಮಂಜುಶ್ರೀ ಮಂಜುನಾಥ್, ಶ್ರೀನಾಥ್, ರಘುನಂದನ್ ಟಿ.ವಿ., ನಾಗೇಶ್, ಕಮಲ್ ಬಾಬು, ಸೇತುರಾಮ್ ಸೇರಿ ಆರ್ಯ ವೈಶ್ಯ ಸಮಾಜದ ಮುಖಂಡರ ಸಮಾಲೋಚನೆ ನಡೆಸಿದರು.
ಬಳಿಕ ತಾಲೂಕಿನ ನಾಗಲಮಡಿಕೆ ಗ್ರಾಮಕ್ಕೆ ತೆರಳಿ ಅಲ್ಲಿನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ಈ ವೇಳೆ ಪ್ರದೇಶ ಕಾಂಗ್ರೆಸ್ ಸಮಿತಿಯ ಎಸ್ಸಿ ಘಟಕದ ಸಂಚಾಲಕ ಕೋರ್ಟ್ ನರಸಪ್ಪ, ಮುಖಂಡರಾದ ಎಂ.ಕೆ.ನಾರಾಯಣಪ್ಪ, ಶಿವಕುಮಾರ್, ಕೆ.ರಾಮಪುರ ಆನಂದ, ಬಿಎಂಟಿಸಿ ನಿವೃತ್ತ ಅಧಿಕಾರಿ ನರಸಪ್ಪ ಇದ್ದರು.