ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ಮಾರ್ಕೆಟ್ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ಶನಿವಾರ ನಗರಸಭೆಯಿಂದ ಡಿವೈಡರ್ ನಡುವೆ ಅಲಂಕಾರಿಕಾ ಗಿಡ ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳೀಯರು ಸಹ ಅಗಲೀಕರಣಕ್ಕೆ ಸಹಮತಿ ಸೂಚಿಸಿದ್ದಾರೆ ಎಂದರು.
ಮಾರ್ಕೆಟ್ ರಸ್ತೆ ಸಂಪೂರ್ಣ ಅಗಲೀಕರಣವಾದ ನಂತರ ಶಿವಪ್ಪನಾಯಕ ವೃತ್ತದಿಂದ ದುರ್ಗಾಂಬಾ ವೃತ್ತದವರೆಗೆ ಡಿವೈಡರ್ಗಳ ನಡುವೆ ಸುಂದರ ಗಿಡಗಳನ್ನು ಬೆಳೆಸಲಾಗುತ್ತದೆ. ಆಂದ್ರಪ್ರದೇಶದ ರಾಜಮಂಡ್ರಿಯಿಂದ ಸುಮಾರು ೮ ಲಕ್ಷ ರು. ವೆಚ್ಚದಲ್ಲಿ ಅಲಂಕಾರಿಕಾ ಗಿಡಗಳನ್ನು ಖರೀದಿಸಿ ತರಲಾಗಿದ್ದು, ಅದನ್ನು ಬಿ.ಎಚ್.ರಸ್ತೆಯ ರಾಷ್ಟ್ರೀಯ ಹೆದ್ದಾರಿ ಡಿವೈಡರ್, ಮಾರ್ಕೆಟ್ ರಸ್ತೆ ಡಿವೈಡರ್ಗಳ ನಡುವೆ ಹಾಕಲಾಗುತ್ತದೆ. ಜಾನುವಾರುಗಳು ಇದನ್ನು ತಿನ್ನದೆ ಇರುವುದರಿಂದ ಇದನ್ನು ನಗರಸಭೆಯಿಂದ ನಿರ್ವಹಣೆ ಮಾಡಲು ತಿಳಿಸಲಾಗಿದೆ ಎಂದು ಹೇಳಿದರು.ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಾಂಗ್ರೆಸ್ ಪ್ರಮುಖರಾದ ಮಧುಮಾಲತಿ, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಎಲ್.ಚಂದ್ರಪ್ಪ, ಡಿ.ದಿನೇಶ್, ಸೈಯದ್ ಜಾಕೀರ್, ಸುರೇಶ ಬಾಬು ಇನ್ನಿತರರು ಹಾಜರಿದ್ದರು.