ಕನ್ನಡಪ್ರಭ ವಾರ್ತೆ ಮೈಸೂರು
ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯುರ್ವೇದ, ವಾಕ್- ಶ್ರವಣ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಶಿಬಿರದಲ್ಲಿ ಅವರು ಮಾತನಾಡಿದರು.
ಜೀವನ ನಡೆಯುವುದೇ ಪರಸ್ಪರ ನಂಬಿಕೆಯಿಂದ. ನಂಬಿಕೆ ಬೆಳೆಯಲು ಸ್ವಾಧ್ಯ್ಯಾಯ, ತಂದೆ ತಾಯಿಗಳು ಹಾಗೂ ಗುರುಹಿರಿಯರು ಕಾರಣರಾಗುತ್ತಾರೆ. ಭಗವಂತನಲ್ಲಿ ಅಚಲ ನಂಬಿಕೆ ಇಟ್ಟರೆ ಮಾತ್ರ ಫಲ ಸಾಧ್ಯ. ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಫಲಿತಾಂಶದ ಬಗ್ಗೆ ನಕಾರಾತ್ಮಕವಾಗಿ ಆಲೋಚಿಸದೆ, ಸಕಾರಾತ್ಮಕ ನಂಬಿಕೆಯೊಂದಿಗೆ ಮುಂದುವರಿಯಬೇಕು. ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಮುನ್ನಡೆಯಬೇಕು ಎಂದರು.ಕಲಿಕಾ ಸಲಹೆಗಾರರಾದ ಡಾ. ಪಾರ್ವತಿ ವೇಣು ಮಾತನಾಡಿ, ಜೀವನದಲ್ಲಿ ಆತ್ಮ ವಿಶ್ವಾಸದಿಂದ ಏನನ್ನಾದರೂ ಸಾಧಿಸಬಹುದು. ಆಯ್ಕೆಗಳನ್ನು ಮಾಡುವಾಗ ಸ್ಪಷ್ಟತೆ ಇರಬೇಕು. ಭಯದ ಕಾರಣದಿಂದ ನಮ್ಮ ನಿಜವಾದ ಶಕ್ತಿಯ ಅನಾವರಣ ಮಾಡಲು ಸಾಧ್ಯವಿಲ್ಲ. ಶಾಂತಿಯುತವಾಗಿ ಸಂತೋಷದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಬಯಸಿದ್ದನ್ನು ಪಡೆಯಲು ಸಾಧ್ಯವಾಗುತ್ತದೆ. ಬದುಕಿಗೆ ಅವಶ್ಯಕವಾದ ಅನೇಕ ಅಂಶಗಳನ್ನು ಈ ರೀತಿಯ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಪಡೆದುಕೊಳ್ಳಬಹುದು ಎಂದರು.
ಎಳೆಯರ ಮೇಳದಲ್ಲಿ ಪದ್ಮಶ್ರೀ ಕೆ.ಎಸ್.ರಾಜಣ್ಣ ಭಾಗಿ
ಸರಸ್ವತಿಪುರಂನ ಜೆಎಸ್ಎಸ್ ಶಾಲಾ ಸಮುಚ್ಛಯದ ಮಂತ್ರಮಹರ್ಷಿ ಸಭಾಭವನದಲ್ಲಿ ನಡೆಯುತ್ತಿರುವ ಎಳೆಯರ ಮೇಳ-2025ರ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪ್ಯಾರಾ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ನಿವೃತ್ತ ಆಯುಕ್ತ ಪದ್ಮಶ್ರೀ ಡಾ.ಕೆ.ಎಸ್. ರಾಜಣ್ಣ ಪಾಲ್ಗೊಂಡು ಮಕ್ಕಳೊಡನೆ ತಮ್ಮ ಜೀವನಾನುಭವ ಹಂಚಿಕೊಂಡರು.
ಈ ರೀತಿ ಸುಮಾರು 25 ಮಾದರಿಯನ್ನು ಜಪಾನಿನ ಸಂಪೂನ್ಮೂಲ ವ್ಯಕ್ತಿಯಿಂದ 40 ವರ್ಷಗಳ ಹಿಂದೆ ಕಲಿತಿರುವುದನ್ನು ಮರೆಯದೆ ಕಾಪಿಟ್ಟುಕೊಂಡಿದ್ದಾರೆ, ಇವರಿಗೆ ಶಿಬಿರದ ಸಂಚಾಲಕ ಚಂದ್ರಶೇಖರಾಚಾರ್ ಧನ್ಯವಾದ ಅರ್ಪಿಸಿದರು. ಅನೇಕ ಪೋಷಕರು ಕುತೂಹಲದಿಂದ ಪಾಲ್ಗೊಂಡಿದ್ದರು.