ನದಿಯ ದಡದಲ್ಲಿ ರಾಶಿ ರಾಶಿ ಕಸ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನಾದ್ಯಂತ ಹರಿದಿರುವ ಈ ನದಿಯ ಎರಡು ದಡ ನೋಡಿದರೆ ಎಷ್ಟು ಮಲಿನವಾಗಿದೆ ಎಂಬುದು ಗೊತ್ತಾಗುತ್ತದೆ. ಇನ್ನು ತುಂಗಭದ್ರಾ ಜಲಾಶಯದ ನೀರು ನೋಡಿದರಂತೂ ಪಕ್ಕಾ ಆಗುತ್ತದೆ. ಹಸಿರು ಬಣ್ಣ ಹೊಂದಿದ್ದು, ಜಲಾಶಯದ ತೀರಕ್ಕೆ ಹೋದರೆ ಗಬ್ಬುವಾಸನೆ ಬರುತ್ತದೆ. ತುಂಗಭದ್ರಾ ಜಲಾಶಯ ಕೆಳಭಾಗವಂತೂ ನೋಡುವಂತೆಯೇ ಇಲ್ಲ. ನದಿಯ ಎರಡು ದಡದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಕಸ ತುಂಬಿರುತ್ತದೆ.
ಇತ್ತೀಚೆಗಿನ ಸಂಶೋಧನೆಯಿಂದ ನದಿಯ ನೀರಿನಲ್ಲಿ, ಸಮುದ್ರದ ನೀರಿನಲ್ಲಿ ಪ್ಲಾಸ್ಟಿಕ್ ಚೂರು ಹಾಗೂ ಅಂಶ ಇರುವುದು ಪತ್ತೆಯಾಗುತ್ತಿದೆ. ತುಂಗಭದ್ರಾ ನದಿಯ ನೀರನ್ನು ಸಹ ಸಂಶೋಧನೆಗೆ ಒಳಪಡಿಸಿದ್ದೇ ಆದರೆ ಖಂಡಿತವಾಗಿಯೂ ಇದರ ಸತ್ಯಾಸತ್ಯತೆ ಅರಿವಿಗೆ ಬರುತ್ತದೆ.
ತುಂಗಭದ್ರಾ ನದಿಯ ಪಕ್ಕದಲ್ಲಿಯೇ ಹುಲಿಗೆಮ್ಮ ದೇವಸ್ಥಾನ ಇದ್ದು, ದೇವಸ್ಥಾನಕ್ಕೆ ಹುಣ್ಣಿಮೆಯ ದಿವಸ ಲಕ್ಷ ಲಕ್ಷ ಭಕ್ತರು, ನಿತ್ಯವೂ ಹತ್ತಾರು ಸಾವಿರ ಭಕ್ತರು, ಮಂಗಳವಾರ, ಶುಕ್ರವಾರ 20-50 ಸಾವಿರ ಭಕ್ತರು ಆಗಮಿಸುತ್ತಾರೆ. ಇನ್ನು ಜಾತ್ರೆ, ವಿಶೇಷ ಹುಣ್ಣಿಮೆಯ ವೇಳೆಯಲ್ಲಿ ನಾಲ್ಕಾರು ಲಕ್ಷ ಭಕ್ತರು ಆಗಮಿಸುತ್ತಾರೆ. ಹೀಗೆ ಆಗಮಿಸುವ ಭಕ್ತರಲ್ಲಿ ಬಹುತೇಕರು ನದಿಯಲ್ಲಿ ಸ್ನಾನ ಮಾಡುತ್ತಾರೆ ಮತ್ತು ಮನೆಯಲ್ಲಿ ಪೂಜೆ ಮಾಡಿದ ಅನೇಕ ಸಾಮಗ್ರಿಗಳನ್ನು ತಂದು ನದಿಗೆ ಹಾಕುವ ಸಂಪ್ರದಾಯ ಇದೆ. ಹೀಗಾಗಿ, ತುಂಗಭದ್ರಾ ನದಿ ಎನ್ನುವುದು ಭಕ್ತರ ಕಸ ಹಾಕುವ ತೊಟ್ಟಿಯಂತಾಗಿದೆ.
ತುಂಗಭದ್ರಾ ನದಿಯ ದಡದಲ್ಲಿಯೇ ಇರುವ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಸ ನದಿಯಲ್ಲಿ ಹಾಕದಂತೆ ನಿರ್ಬಂಧ ಹೇರಿ ಕೈತೊಳೆದುಕೊಂಡಿದೆ. ಆದರೆ, ವಾಸ್ತವದಲ್ಲಿ ಅಲ್ಲಿಯೇ ಹಾಕುತ್ತಿದ್ದರೂ ಅದನ್ನು ನಿಯಂತ್ರಣ ಮಾಡದೇ ಬೇಜವಾಬ್ದಾರಿ ತೋರಿದೆ.
ಕಸ ವಿಲೇವಾರಿ ಘಟಕ: