ಬೇಲೂರು: ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಮತ್ತು ಬ್ರಹ್ಮ ರಥೋತ್ಸವದ ಅಂಗವಾಗಿ 12ನೇ ದಿನದ ಸಿಂಹಾರೋಹಣ ಉತ್ಸವ ವಿಜೃಂಭಣೆಯಿಂದ ಜರುಗಿತು.ತಾಲೂಕು ಶಿಕ್ಷಣ ಇಲಾಖೆ, ಸೇವಾರ್ಥದಲ್ಲಿ ನೆರವೇರಿದ ಸಿಂಹಹಾರೋಣೋತ್ಸವ ದೇವಾಲಯದ ಎಂಟು ರಾಜಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಪುಷ್ಪಾಲಂಕಾರಗಳಿಂದ ಶೃಂಗರಿಸಿದ ಭವ್ಯ ಮಂಟಪದಲ್ಲಿ ಮಂಗಳವಾದ್ಯದ ಜೊತೆಗೆ ಸಾಗಿತು. ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಸಾಂಪ್ರದಾಯಿಕ ಸಮವಸ್ತ್ರ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಯೋಗೇಶ್. ವೃತ್ತ ನಿರೀಕ್ಷಕ ರೇವಣ್ಣ, ಮಾಜಿ ಧರ್ಮದರ್ಶಿ ಯುಟಿ ಕೇಶವಮೂರ್ತಿ, ಶಿಕ್ಷಕರದ ಮಂಜುನಾಥ್, ಆನಂದ್, ಗಿರೀಶ್ ಸೇರಿದಂತೆ ಅಡ್ಡಗಾರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.