ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಆಹಾರ ದವಸ ದಾನ್ಯಗಳ ಪೂರೈಕೆ: ಕೃಷ್ಣಾನದಿಯಲ್ಲಿ ಪ್ರವಾಹ ಮೊದಲೆ ನಡುಗಡ್ಡೆ ಗ್ರಾಮಗಳಾದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಗ್ರಾಮಗಳಿಗೆ ಆಹಾರ ಇಲಾಖೆಯಿಂದ ದವಸ ದಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ. ನಡುಗಡ್ಡೆ ಗ್ರಾಮಗಳಿಗೆ ಹೆಚ್ಚಿನ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗುವುದೆಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ.
33 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 2,00,000 ಕ್ಯುಸೆಕ್ ಒಳ ಹರಿವು ಇದೆ. ಕೃಷ್ಣಾನದಿಗೆ 2,02,625 ಟಿಎಂಸಿ ಹೊರ ಹರಿವು ಇದ್ದು 492.25 ಮೀ. ಎತ್ತರದ ಜಲಾಶಯದಲ್ಲಿ 490.84 ಮೀಟರ್ ನೀರು ಸಂಗ್ರಹವಿದೆ. 27,212 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.ಶೀಲಹಳ್ಳಿ ಸೇತುವೆ ಮುಳಗಡೆ ಆಗಿದ್ದರಿಂದ ನಡುಗಡ್ಡೆ ಜನರಿಗೆ ಹೆಚ್ಚಿನ ಸಾರಿಗೆ ಬಸ್ಗಳ ಓಡಾಟಕ್ಕೆ ಸಾರಿಗೆ ಇಲಾಖೆ ತಿಳಿಸಿದ್ದು ನಾಳೆಯಿಂದ ಬಸ್ ಸಂಚಾರ ನಡೆಯಲಿದೆ. ನಡುಗಡ್ಡೆ ಜನರ ಹೇಳಿಕೆಯಂತೆ 2 ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಗಳ ಸಂಗ್ರಹವಿದೆ. ಅಗತ್ಯ ಬಿದ್ದರೆ ಪೂರೈಕೆ ಮಾಡಲಾಗುವುದು. ದ್ವೀಪದಲ್ಲಿ ಇರುವ ಜನರು ಹೊರಗಡೆ ಬರಲು ಒಪ್ಪಿದರೆ ಕೂಡಲೇ ಹೊರ ತರಲಾಗುವುದು.