ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಸಾರ್ವಕಾಲಿಕ ವೃದ್ಧಿ ದಾಖಲೆ

KannadaprabhaNewsNetwork |  
Published : Apr 10, 2026, 02:30 AM IST
ಕೆ. ಜೈರಾಜ್‌ ಬಿ. ರೈ  | Kannada Prabha

ಸಾರಾಂಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ ೨೯ ಶಾಖೆಗಳು ಹಾಗೂ ೨ ವಿಸ್ತರಣಾ ಕೌಂಟರ್‌ಗಳೊಂದಿಗೆ ವಿಸ್ತೃತ ಸೇವಾ ಜಾಲವನ್ನು ಹೊಂದಿ ಕಳೆದ ೩೨ ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲಿ ಒಂದಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ೨೦೨೫-೨೬ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಸಾರ್ವಕಾಲಿಕ ದಾಖಲೆಯ ವೃದ್ಧಿಯನ್ನು ಹೊಂದಿದೆ. ೩೧.೦೩.೨೦೨೬ಕ್ಕೆ ಠೇವಣಾತಿ ೬೯೫ ಕೋಟಿ ರು. ಹಾಗೂ ಸಾಲ ೬೧೦ ಕೋಟಿ ರು.ನೊಂದಿಗೆ ಒಟ್ಟು ವ್ಯವಹಾರ ೧೩೦೫ ಕೋಟಿ ರು. ತಲುಪಿ, ೫,೯೦೧ ಕೋಟಿ ರು. ಒಟ್ಟು ವಹಿವಾಟು ದಾಖಲಿಸಿ ತನ್ನ ಎಲ್ಲ ಕಾರ್ಯವಿಭಾಗಗಳಲ್ಲಿ ನಿಗದಿತ ಗುರಿಯನ್ನು ಮೀರಿ ಅಮೋಘ ಸಾಧನೆ ಮಾಡಿದೆ.

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ ೨೯ ಶಾಖೆಗಳು ಹಾಗೂ ೨ ವಿಸ್ತರಣಾ ಕೌಂಟರ್‌ಗಳೊಂದಿಗೆ ವಿಸ್ತೃತ ಸೇವಾ ಜಾಲವನ್ನು ಹೊಂದಿ ಕಳೆದ ೩೨ ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲಿ ಒಂದಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ೨೦೨೫-೨೬ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಸಾರ್ವಕಾಲಿಕ ದಾಖಲೆಯ ವೃದ್ಧಿಯನ್ನು ಹೊಂದಿದೆ. ೩೧.೦೩.೨೦೨೬ಕ್ಕೆ ಠೇವಣಾತಿ ೬೯೫ ಕೋಟಿ ರು. ಹಾಗೂ ಸಾಲ ೬೧೦ ಕೋಟಿ ರು.ನೊಂದಿಗೆ ಒಟ್ಟು ವ್ಯವಹಾರ ೧೩೦೫ ಕೋಟಿ ರು. ತಲುಪಿ, ೫,೯೦೧ ಕೋಟಿ ರು. ಒಟ್ಟು ವಹಿವಾಟು ದಾಖಲಿಸಿ ತನ್ನ ಎಲ್ಲ ಕಾರ್ಯವಿಭಾಗಗಳಲ್ಲಿ ನಿಗದಿತ ಗುರಿಯನ್ನು ಮೀರಿ ಅಮೋಘ ಸಾಧನೆ ಮಾಡಿದೆ.

ಹಿಂದಿನ ಸಾಲಿಗೆ ಹೋಲಿಸಿದಾಗ ಪ್ರಸ್ತುತ ಸಾಲಿನಲ್ಲಿ ಠೇವಣಾತಿಯಲ್ಲಿ ೧೦೬ ಕೋಟಿ ರು. ಹೆಚ್ಚಳ, ಶೇ.೧೮ ವೃದ್ಧಿಸಿದ್ದು ಹಾಗೂ ಸಾಲದಲ್ಲಿ ೧೦೫ ಕೋಟಿ ರು. ಹೆಚ್ಚಳ, ಶೇ.೨೧ ವೃದ್ಧಿಸಿದ್ದು, ಒಟ್ಟು ವ್ಯವಹಾರದಲ್ಲಿ ೨೧೧ ಕೋಟಿ ರು. ಸಾರ್ವಕಾಲಿಕ ದಾಖಲೆಯ ಹೆಚ್ಚಳದೊಂದಿಗೆ ಶೇ.೧೯ ವಾರ್ಷಿಕ ವೃದ್ಧಿಯೊಂದಿಗೆ ಒಟ್ಟು ವ್ಯವಹಾರ ೧,೩೦೫ ಕೋಟಿ ರು. ತಲುಪಿದೆ. ಸಂಘದ ವಿಷನ್ ೨೦೩೦ರ ೨,೦೦೦ ಕೋಟಿ ರು. ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವತ್ತ ದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದೆ.25 ಕೋಟಿ ರು. ನಿವ್ವಳ ಲಾಭ ಗುರಿ:

೩೧.೦೩.೨೦೨೬ಕ್ಕೆ ಸಂಘ ೧೯.೩೫ ಕೋಟಿ ರು. ಗುರಿ ಮೀರಿದ ನಿವ್ವಳ ಲಾಭವನ್ನು ಗಳಿಸಿದ್ದು ಇದು ಕಳೆದ ಸಾಲಿಗಿಂತ ೩ ಕೋಟಿ ರು. ಹೆಚ್ಚಳದೊಂದಿಗೆ ಶೇ.೧೯ ವೃದ್ಧಿಯಾಗಿದೆ. ಸಂಘ ಕಳೆದ ೭ ವರ್ಷಗಳಿಂದ ಸತತವಾಗಿ ಶೇ.೨೫ ಡಿವಿಡೆ೦ಡ್‌ನ್ನು ಸದಸ್ಯರಿಗೆ ನೀಡುತ್ತಾ ಬಂದಿದೆ. ೨೦೩೦ಕ್ಕೆ ೨೫ ಕೋಟಿ ರು. ನಿವ್ವಳ ಲಾಭ ಗಳಿಸುವ ಗುರಿಯನ್ನು ಹೊಂದಿದೆ.

ಸಂಘದಲ್ಲಿ ೩೧.೦೩.೨೦೨೬ಕ್ಕೆ ೨೨ ಲಕ್ಷ ರು.ಗಳಷ್ಟು ಮಾತ್ರ ಅನುತ್ಪಾದಕ ಆಸ್ತಿ ಇದ್ದು, ಇದು ಹೊರಬಾಕಿ ಸಾಲದ ಶೇ.೦.೦೪ಕ್ಕೆ ಸೀಮಿತವಾಗಿರುವುದಲ್ಲದೆ ಸಂಘ ಕೆಟ್ಟ ಮತ್ತು ಅನುತ್ಪಾದಕ ಸಾಲಕ್ಕೆ ಈಗಾಗಲೇ ೫ ಕೋಟಿ ರು.ಗಳಷ್ಟು ನಿಧಿಯನ್ನು ಅನುವು ಮಾಡಿಕೊಂಡಿದ್ದು ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ ೧೯ ವರ್ಷದಿಂದ ಶೂನ್ಯ ಪ್ರಮಾಣದಲ್ಲಿದೆ.40 ಶಾಖೆಗಳಿಗೆ ವಿಸ್ತರಣೆ: ೨೦೨೫-೨೬ನೇ ಸಾಲಿನಲ್ಲಿ ಸಂಘ ೪ ಹೊಸ ಶಾಖೆಗಳು ಮತ್ತು ೨ ವಿಸ್ತರಣಾ ಕೌಂಟರ್‌ಗಳನ್ನು ಆರಂಭಿಸಿ ತನ್ನ ಶಾಖಾ ಸೇವಾ ಜಾಲವನ್ನು ೩೧ ಕೇಂದ್ರಗಳಿಗೆ ವಿಸ್ತರಿಸಿದೆ. ಮುಂದಿನ ಸಾಲುಗಳಲ್ಲಿ ಪ್ರತಿ ವರ್ಷ ೨ ಹೊಸ ಶಾಖೆಗಳೊಂದಿಗೆ ೨೦೩೦ಕ್ಕೆ ಒಟ್ಟು ೪೦ ಶಾಖೆಯನ್ನು ಹೊಂದುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಘದ ಕೇಂದ್ರ ಕಚೇರಿಗೆ ೩೭,೦೦೦ ಚದರ ಅಡಿ ಸುಸಜ್ಜಿತ ಆಧುನಿಕ ಸೌಕರ್ಯವುಳ್ಳ ಸುಸಜ್ಜಿತ ಕಟ್ಟಡದ ಕಾಮಗಾರಿ ಕೊನೆಯ ಹಂತದಲ್ಲಿದ್ದು ಅದನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲು ಉದ್ದೇಶಿಸಿದೆ.

ಹಲವು ಪ್ರಶಸ್ತಿಗಳ ಗೌರವ: ೨೦೨೪ನೇ ಸಾಲಿನಲ್ಲಿ ಮೊದಲ ಬಾರಿಗೆ ಅನುಷ್ಟಾನಿಸಲಾದ ಅವಿಭಜಿತ ದ.ಕ ಜಿಲ್ಲೆಯಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿದ ಅತ್ಯುತ್ತಮ ಕ್ರೆಡಿಟ್ ಸಹಕಾರ ಸಂಘಕ್ಕೆ ನೀಡಲಾಗುವ ‘ಸಹಕಾರ ಮಾಣಿಕ್ಯ ಪ್ರಶಸ್ತಿ’ ಹಾಗೂ ೧,೦೦೦ ಕೋಟಿ ರು. ಒಟ್ಟು ವ್ಯವಹಾರವನ್ನು ದಾಖಲಿಸಿದ ಸಾಧನೆಗಾಗಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಮಹಾಸಭೆಯಲ್ಲಿ ‘ವಿಶೇಷ ಗೌರವ’ ಪ್ರಶಸ್ತಿ ಸೇರಿದಂತೆ ಸಹಕಾರ ಇಲಾಖೆಯಿಂದ ಒಟ್ಟು ೭ ಬಾರಿ ರಾಜ್ಯ ಮಟ್ಟದ ಹಾಗೂ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನಿಂದ ಒಟ್ಟು ೧೪ ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಕ್ರೆಡಿಟ್ ಕೋ-ಓಪರೇಟಿವ್ ಸಂಘ ಪ್ರಶಸ್ತಿ ದೊರೆತಿದೆ.

ಸಂಘವು ತನ್ನ ಕಾರ್ಯವ್ಯಾಪ್ತಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ೧ ಲಕ್ಷಕ್ಕೂ ಅಧಿಕ ಸಂತೃಪ್ತ ಠೇವಣಿದಾರ, ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕತೆ, ಕಾರ್ಯದಕ್ಷತೆಯಿಂದ ತನ್ನ ಎಲ್ಲ ಕಾರ್ಯಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದೆ.

-ಕೆ.ಜೈರಾಜ್ ಬಿ. ರೈ, ಅಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳಿಗೆ ವಿಟಿಯು ಆದ್ಯತೆ
ಮಸ್ಟ್ 3ನೇ ಪುಟಕ್ಕೆ.... ನೀರಿನ ಹೊಂಡಕ್ಕೆ ಬಿದ್ದು ಯುವಕ ಸಾವು