ಕನ್ನಡಪ್ರಭ ವಾರ್ತೆ ಉಡುಪಿ
ಶುಕ್ರವಾರ ದೇವಳದ ಸುತ್ತು ಪೌಳಿ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಪಂಚಮ ವರ್ಧಂತಿ ಕಾರ್ಯಕ್ರಮದ ಅಂಗವಾಗಿ, ಸಾನಿಧ್ಯ ಹವನ, ಶ್ರೀ ದೇವರಿಗೆ ದ್ವಾದಶ ಕಲಶ ಅಭಿಷೇಕ, ಬ್ರಹ್ಮಕಲಶಗಳ ಅಭಿಮಂತ್ರಣ ನಡೆಯಿತು
ಶ್ರೀ ಲಕ್ಷ್ಮೀ ವೆಂಕಟೇಶ ದೇವರು, ಪರಿವಾರದ ದೇವರಾದ ಗಣಪತಿ, ಲಕ್ಷ್ಮೀ, ಹನುಮಂತ, ಗರುಡ ದೇವರಿಗೆ ಅಭಿಷೇಕ ನಡೆಯಿತು. ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು. ರಾತ್ರಿ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಈ ಎಲ್ಲಾ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ವೇದಮೂರ್ತಿ ಶ್ರೀಕಾಂತ್ ಭಟ್, ದೇವಳದ ಪ್ರಧಾನ ಅರ್ಚಕ ದಯಘನ್ ಭಟ್, ವಿನಾಯಕ ಭಟ್, ಮೇಘಶ್ಯಾಮ್ ಭಟ್, ದೀಪಕ್ ಭಟ್, ಗಿರೀಶ್ ಭಟ್, ಮೊಕ್ತೇಸರ ಪಿ. ವಿ. ಶೆಣೈ, ವಿಶ್ವನಾಥ್ ಭಟ್, ವಸಂತ್ ಕಿಣಿ, ಗಣೇಶ್ ಕಿಣಿ ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು ಜಿ.ಎಸ್.ಬಿ. ಮಹಿಳಾ ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜ ಬಾಂಧವರು ಹಾಜರಿದ್ದರು.