ಕನ್ನಡಪ್ರಭ ವಾರ್ತೆ ಉಡುಪಿ
ನಂತರ ದಿನವಿಡೀ ವಿಶಿಷ್ಟ ರೀತಿಯ ಯಕ್ಷ ಕವಿಗೋಷ್ಠಿ, ಯಕ್ಷಗಾನ, ದೃಶ್ಯ ಭಾಷೆ ಸಂಸ್ಕೃತಿ ಇದರ ಕುರಿತಾದ ವಿಚಾರಗೋಷ್ಠಿ, ಸಮ್ಮೇಳನ ಅಧ್ಯಕ್ಷ ರೊಂದಿಗೆ ಮಾತುಕತೆ ನಡೆಯಲಿದೆ.ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಅಧ್ಯಕ್ಷತೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಬ್ರಮಣ್ಯ ಜಿ. ಕುರ್ಯ, ಡೊನಾಥ್ ಡಿ.ಅಲ್ಮೇಡಾ, ಮಂಜುನಾಥ್ ಭಟ್ ಮೂಡುಬೆಟ್ಟು, ನಾರಾಯಣ ಸರಳಾಯ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಚಂದ್ರ ಚಿತ್ತ, ಅನಿಲ್ ಶಂಕರ್, ಪ್ರಕಾಶ್ ಕೊಡಂಕೂರು, ಡಾ.ಸುರೇಶ್ ಶೆಣೈ, ಮಂಜುನಾಥ್ ಕಾಮತ್, ಬಾಲಕೃಷ್ಣ ಕೊಡವೂರು, ಬಾಲಕೃಷ್ಣ ಮೆಂಡನ್, ರಮೇಶ್ ಮಂಚಿ, ಪ್ರಶಾಂತ್ ಕಡಿಯಾಳಿ, ವಿದುಷಿ ಶಾಂಭವಿ ಆಚಾರ್ಯ, ಕುಸುಮ ಕಾಮತ್, ವಾಣಿ ಬಾಲಚಂದ್ರ, ಸ್ವರಾಜ್ಯಲಕ್ಷ್ಮಿ, ಅವನಿ, ಮುಕ್ತಾ ಶ್ರೀನಿವಾಸ್, ಅಶ್ವಿನಿ ಶ್ರೀನಿವಾಸ್, ಸುರೇಖಾ ಭಟ್, ಆಶ್ಲೇಷ್ ಆರ್. ಭಟ್, ಮಾನ್ಸಿ ಕೆ. ಕೋಟ್ಯಾನ್, ಮಾನ್ಸಿ ಎಸ್.ಎ. ಅವರನ್ನು ಸನ್ಮಾನಿಸಲಾಗುವುದು.ಸಮಾರೋಪ ಭಾಷಣವನ್ನು ಸಾಹಿತಿ ಡಾ. ನಿಕೇತನ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಯಕ್ಷ ರಂಗಾಯಣ ಕಾರ್ಕಳದಿಂದ ಕುಮಾರವ್ಯಾಸ ಭಾರತದ ಆಯ್ದ ಭಾಗ ‘ಆರೊಡನೆ ಕಾದುವೇನು’ ನಾಟಕ ಪ್ರದರ್ಶನಗೊಳ್ಳಲಿದೆ.ಸುದ್ದಿಗೋಷ್ಠಿಯಲ್ಲಿ ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಹಾಗೂ ರಂಜಿನಿ ವಸಂತ್, ಸ್ವಾಗತ ಸಮಿತಿಯ ಸಾಧು ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಕೊಡವೂರು ಉಪಸ್ಥಿತರಿದ್ದರು.