ಉಡುಪಿ: 27ರಂದು ರಂಜನ್ ಕಲ್ಕೂರ ನೇತೃತ್ವದಲ್ಲಿ ಹುಲಿವೇಷ ಸ್ಪರ್ಧೆ

KannadaprabhaNewsNetwork |  
Published : Aug 25, 2024, 02:06 AM ISTUpdated : Aug 25, 2024, 02:07 AM IST
ರಂಜನ್24 | Kannada Prabha

ಸಾರಾಂಶ

3 ದಶಕಗಳ ಕಾಲ ಹುಲಿವೇಷ ತಂಡ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದ ಅಶೋಕ್‍ರಾಜ್ ಕಾಡಬೆಟ್ಟು ಅವರಿಗೆ ‘ತುಳುನಾಡ್ದ ಪೆರ್ಮೆದ ಪಿಲಿ’ ಮರಣೋತ್ತರ ಪ್ರಶಸ್ತಿಯೊಂದಿಗೆ ಅವರ ಕುಟುಂಬ ವರ್ಗದವರನ್ನು ಗೌರವಿಸಲಾಗುವುದು.

ಕನ್ನಡಪ್ರಭ ವಾರ್ತೆ ಉಡುಪಿಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವ ಸಂದರ್ಭದಲ್ಲಿ ಆ.27ರಂದು ಸಂಜೆ 4ರಿಂದ ರಥಬೀದಿಯ ತೊಟ್ಟಿಲು ಸುಬ್ರಾಯ ವೇದಿಕೆಯಲ್ಲಿ ಹುಲಿವೇಷ ನರ್ತನ ಪ್ರದರ್ಶನ ಆಯೋಜಿಸಲಾಗಿದೆ.ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿದ ಕಲ್ಕೂರ ರೆಫ್ರಿಜರೇಶನ್ ಆಡಳಿತ ನಿರ್ದೇಶಕ ರಂಜನ್ ಕಲ್ಕೂರ ಮಾಹಿತಿ ನೀಡಿ, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲ ಹುಲಿವೇಷ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ತಂಡದ ಗುಣಮಟ್ಟ ಗಮನಿಸಿ ಸೂಕ್ತ ಸಂಭಾವನೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ 3 ದಶಕಗಳ ಕಾಲ ಹುಲಿವೇಷ ತಂಡ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದ ಅಶೋಕ್‍ರಾಜ್ ಕಾಡಬೆಟ್ಟು ಅವರಿಗೆ ‘ತುಳುನಾಡ್ದ ಪೆರ್ಮೆದ ಪಿಲಿ’ ಮರಣೋತ್ತರ ಪ್ರಶಸ್ತಿಯೊಂದಿಗೆ ಅವರ ಕುಟುಂಬ ವರ್ಗದವರನ್ನು ಗೌರವಿಸಲಾಗುವುದು. ಎಲ್ಲ ಜಾನಪದ ಕಲಾವಿದರಿಗೆ ಗೌರವ ಸಂಭಾವನೆ ನೀಡಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾಹುಲ್ ಕಲ್ಕೂರ, ರಾಮಚಂದ್ರ ಉಪಾಧ್ಯಾಯ, ಕೆ.ಎನ್. ಚಂದ್ರಕಾಂತ ಮತ್ತು ರಾಜೇಶ ಭಟ್ ಪಣಿಯಾಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!