ದುರ್ಬಲರಿಗೆ, ಅಸಹಾಯಕರಿಗೆ ನೆರವು, ಆಶ್ರಯ ನೀಡುವುದೇ ಧರ್ಮಸ್ಥಳದ ಪರಂಪರೆ

KannadaprabhaNewsNetwork |  
Published : Jan 22, 2025, 12:31 AM IST
53 | Kannada Prabha

ಸಾರಾಂಶ

ಯಾರ ಆಸರೆ ಇಲ್ಲದ ದುಡಿಮೆ ಮಾಡುವುದಕ್ಕೆ ಆಗದ ಜೀವಗಳಿಗೆ ಆಸರೆಯ ಅವಶ್ಯಕತೆ ಇರುತ್ತದೆ

ಕನ್ನಡಪ್ರಭ ವಾರ್ತೆ ಹುಣಸೂರು

ಸಮಾಜದಲ್ಲಿನ ದುರ್ಬಲರಿಗೆ, ಅಸಹಾಯಕರಿಗೆ ನೆರವು, ಆಶ್ರಯ ನೀಡುವುದೇ ಶ್ರೀಕ್ಷೇತ್ರ ಧರ್ಮಸ್ಥಳದ ಪರಂಪರೆಯಾಗಿದೆ ಎಂದು ಬೆಂಗಳೂರಿನ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಕಾರ್ಯ ನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ಅಭಿಪ್ರಾಯಪಟ್ಟರು.

ತಾಲೂಕಿನ ಉಯಿಗೊಂಡನಹಳ್ಳಿಯ ಮಂಗಳವಾರ ನಿವಾಸಿ ಚಲುವಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಿಭಾಗದ ವಾತ್ಸಲ್ಯ ಯೋಜನೆಯಡಿ ನಿರ್ಮಾಣ ಮಾಡಿರುವ ಹಸ್ತಾಂತರ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.

ಯಾರ ಆಸರೆ ಇಲ್ಲದ ದುಡಿಮೆ ಮಾಡುವುದಕ್ಕೆ ಆಗದ ಜೀವಗಳಿಗೆ ಆಸರೆಯ ಅವಶ್ಯಕತೆ ಇರುತ್ತದೆ. ಇಂತಹ ಸದಸ್ಯರಿಗೆ ಅಕ್ಕಪಕ್ಕದವರಾಗಿ ನೀವೂ ಕೂಡ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ನಿಮ್ಮ ಸಹಕಾರದಿಂದ ವಾತ್ಸಲ್ಯ ಸದಸ್ಯರಿಗೆ ಒಂದು ಪುಟ್ಟದಾದ ಮನೆ ಮಾಡಿಕೊಡಲು ಸಾಧ್ಯವಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಸ್ವಂತ ಸೂರಿನಡಿ ಬಾಳಿ ಬದುಕಬೇಕೆನ್ನುವ ಜೀವನದ ಮಹದಾಸೆ ಇರುತ್ತದೆ. ಬಡ ಕುಟುಂಬಗಳಿಗೆ ಇಂತಹ ಆಸೆ ಪೂರೈಸುವ ನಿಟ್ಟಿನಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅಮ್ಮನವರ ಬೆಂಬಲದಿಂದಾಗಿ ನೂರಾರು ವಯೋವೃದ್ಧರು ಮನೆ ಪಡೆದುಕೊಳ್ಳುತ್ತಿದ್ದಾರೆ ಎಂದರು,

ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಮಾತನಾಡಿ, ತಾಲೂಕಿನಲ್ಲಿ ಯಾರೂ ನೋಡಿಕೊಳ್ಳಲು ಇಲ್ಲದ, ವಿಧವೆಯರಾದ ನಿರ್ಗತಿಕ ವಯೋವೃದ್ಧರಾಗಿರುವ 127 ಮಂದಿಯನ್ನು ಗುರುತಿಸಿ ಅಂತಹವರಿಗೆ 1 ರಿಂದ 2 ಸಾವಿರ ರು. ಗಳವರೆಗಿನ ಮಾಸಾಶನ ನೀಡಲಾಗುತ್ತಿದೆ. ಅಂತಹ ಪ್ರಕರಣಗಳಲ್ಲಿ ಮನೆ ದುಸ್ಥಿತಿಯಲ್ಲಿರುವ ಫಲಾನುಭವಿಗಳಿಗೆ ವಾತ್ಸಲ್ಯ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದ್ದು, ತಾಲೂಕಿನಲ್ಲಿ ಈವರೆಗೆ ನಾಲ್ಕು ಮನೆಗಳ ನೀಡಲಾಗುತ್ತಿದ್ದು, ಎರಡು ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ವಾತ್ಸಲ್ಯ ಕಿಟ್ ಯೋಜನೆಯಡಿ ಇಂತಹ ಕುಟುಂಬಗಳಿಗೆ ಅಗತ್ಯ ಪರಿಕರಗಳು ಮತ್ತು ಆಹಾರದ ಕಿಟ್ ಒದಗಿಸಲಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರತ್ನಮ್ಮ ನಿಂಗಯ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ನಿರ್ದೇಶಕರಾದ ಮುರಳೀಧರ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸೋಮಶೇಖರ, ಯೋಜನಾಧಿಕಾರಿಗಳಾದ ಮೂಕಾಂಬಿಕಾ, ಬಿ. ಧನಂಜಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಿಕ್ಕದೇವಮ್ಮ, ಮೇಲ್ವಿಚಾರಕ ಸಂತೋಷ್, ಸೇವಾಪ್ರತಿನಿಧಿ ಪೂರ್ಣಿಮಾ, ಗ್ರಾಮದ ಮುಖಂಡರಾದ ಸುಮತಿ, ರಾಮೇಗೌಡ, ನರಸಿಂಹ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ