ಕೊಟ್ಟೂರು: ಲಿಂ.ಜ. ಸಿದ್ದಲಿಂಗ ಶಿವಾಚಾರ್ಯರು ಬುಕ್ಕಾಂಬುದಿ ಗವಿಯಲ್ಲಿ ತಪೋನುಷ್ಠಾನಗೈದು ನೂರು ವರ್ಷಗಳು ಸಂದ ಕಾರಣಕ್ಕೆ ಉಜ್ಜಯನಿ ಸದ್ಧರ್ಮ ಪೀಠದಿಂದ ಬುಕ್ಕಾಂಬುದಿಗೆ 176 ಕಿ.ಮೀ. ದೂರದವರೆಗೆ ಡಿ.19ರಿಂದ ಪಾದಯಾತ್ರೆ ಆರಂಭಿಸುವುದಾಗಿ ಉಜ್ಜಯನಿ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.ಗುರುವಾರ ಸಂಜೆ ಇಲ್ಲಿನ ಚಾನುಕೋಟಿ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಾದಯಾತ್ರೆ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಶಿಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಆಶೀರ್ವದಿಸಿ ಮಾತನಾಡಿ, ಉಜ್ಜಯನಿ ಜಗದ್ಗುರು ಬುಕ್ಕಾಂಬುದಿಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವತ್ತ ಮುಂದಾಗಿದ್ದಾರೆ. ಪಾದಯಾತ್ರೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಪಪಂ ಮಾಜಿ ಉಪಾಧ್ಯಕ್ಷ ಎಚ್.ಗುರುಬಸವರಾಜ, ವರ್ತಕ ಕಾರ್ತಿಕ, ರಾಂಪುರ ವಿವೇಕಾನಂದ, ಬಿ.ಪಂಪಾಪತಿ, ಬಿ.ಎಂ. ಗಿರೀಶ್, ಅಟವಾಳಿಗೆ ಅಮರೇಶ, ಭೋಜರಾಜ್, ಅಜ್ಜನಗೌಡ, ಚನ್ನವೀರಸ್ವಾಮಿ, ಉಜ್ಜಯನಿ ಲೋಕೇಶ್, ನಟರಾಜ್, ನಾಗರಾಜ ಗೌಡ ಭಾಗವಹಿಸಿದ್ದರು.