ದೇಶಕ್ಕೆ ದೊಡ್ಡ ಸವಾಲಾಗಿರುವ ನಿರುದ್ಯೋಗ ಸಮಸ್ಯೆ: ಅರುಣ್ ಚಕ್ರವರ್ತಿ

KannadaprabhaNewsNetwork |  
Published : Feb 22, 2026, 01:30 AM IST
ಸುದ್ದಿ ಚಿತ್ರ ೧    ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಲಿಯೋ ಕ್ಲಬ್ ಆಫ್ ಕಿರಣ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

1993ರಲ್ಲಿ ನಾನು ಐಪಿಎಸ್ ಉತ್ತೀರ್ಣ ಮಾಡಿದೆ. ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿ ಪಡೆದುಕೊಂಡು ಓದಬೇಕೆಂದರು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಿದ್ಯಾವಂತರಿಗೆ ಉದ್ಯೋಗ ಒದಗಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿ ನಿರುದ್ಯೋಗ ಒಂದು ಬೃಹದಾಕಾರ ಸಮಸ್ಯೆಯಾಗಿ ಉಳಿಯುತ್ತಿದೆ ಎಂದು ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜೆ.ಅರುಣ್ ಚಕ್ರವರ್ತಿ ಹೇಳಿದರು.

ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಲಿಯೋ ಕ್ಲಬ್ ಆಫ್ ಕಿರಣ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಅಸಂಖ್ಯಾತ ಪದವೀಧರರು ಪದವಿ ಮುಗಿಸಿ ಹೊರ ಬರುತ್ತಿದ್ದಾರೆ. ಆದರೆ ಎಲ್ಲರಿಗೂ ಉದ್ಯೋಗದ ಭದ್ರತೆ ಸಿಗುತ್ತಿದೆ ಎಂಬುದರ ಪ್ರಶ್ನೆಗೆ ನಾವು ಉತ್ತರ ಹುಡುಕಿ ಕೊಳ್ಳಬೇಕಿದೆ ಎಂದರು.

ಸರ್ಕಾರದ ಇಲಾಖೆಗಳಲ್ಲಿ ಸೀಮಿತವಾದ ಉದ್ಯೋಗ ಅವಕಾಶಗಳು ಇವೆ. ಜೊತೆಗೆ ಯಾವುದೇ ದೇಶದಲ್ಲಿ ಎಲ್ಲರಿಗೂ ಸರ್ಕಾರಗಳು ಉದ್ಯೋಗ ಅವಕಾಶಗಳು ನೀಡಲು ಸಾಧ್ಯವಿಲ್ಲ ಎಂದರು. ಉದ್ಯೋಗ ಮೇಳ ಆಯೋಜಿಸುವುದು ತುಂಬಾ ಕಷ್ಟದ ಕೆಲಸ. ಎಲ್ಲರಿಂದಲೂ ಉದ್ಯೋಗ ಮೇಳ ಆಯೋಜನೆ ಸಾಧ್ಯವಾಗಿಲ್ಲ. ಯಾರಿಗೆ ಸಮಾಜದ ಮೇಲೆ ಕಾಳಜಿ ಇರುತ್ತದೆಯೋ ಅವರು ಮಾತ್ರ ಇಂತಹ ಉದ್ಯೋಗ ಮೇಳಗಳನ್ನು ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಲಿಯೋ ಕ್ಲಬ್ನ ಶ್ರೀಕಾಂತ್ ಉತ್ತಮವಾಗಿ ಯುವ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಿ ಎಂದರು.

ಬಿ.ಪಿ. ಲೋಕೇಶ್ ಕೈಚಳಕದಲ್ಲಿ ಅರಳಿದ ಚಕ್ರವರ್ತಿ: ಕಾರ್ಯಕ್ರಮದ ವೇದಿಕೆಯಲ್ಲಿ ಚಿಕ್ಕಬಳ್ಳಾಪುರದ ಖ್ಯಾತ ಕುಂಚ ಕಲಾವಿದ ಬಿಪಿ ಲೋಕೇಶ್ ಅವರ ಕೈಚಳಕದಲ್ಲಿ ಐಪಿಎಸ್ ಹಿರಿಯ ಅಧಿಕಾರಿ ಅರುಣ್ ಚಕ್ರವರ್ತಿ ಅವರ ಭಾವಚಿತ್ರವನ್ನು ಆಕರ್ಷಕವಾಗಿ ಬಿಡಿಸುವ ಮೂಲಕ ಲೋಕೇಶ್ ಗಮನಸೆಳೆದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ರಾಜಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ತಹಸೀಲ್ದಾರ್ ಗಗನಸಿಂಧು, ಇನ್ ಸೈಟ್ಸ್ ಸಂಸ್ಥಾಪಕ ನಿರ್ದೇಶಕರಾದ ಜಿ.ಬಿ ವಿನಯ್ ಕುಮಾರ್, ಮಂಚೇನಹಳ್ಳಿ ತಹಸೀಲ್ದಾರ್ ವಿ.ಪೂರ್ಣಿಮಾ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಅಧಿಕಾರಿ ಶೀನಪ್ಪ, ಲಿಯೋ ಕ್ಲಬ್ ನ ಅಧ್ಯಕ್ಷರಾದ ಶ್ರೀಕಾಂತ್, ಲಿಯೋ ಕ್ಲಬ್ ನ ಕಿರಣ ಕಾರ್ಯದರ್ಶಿ ಲೋಕೇಶ್ , ಕೇಂದ್ರ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನಿಕಟ ಪೂರ್ವ ಸದಸ್ಯರಾದ ಲೋಕೇಶ್ವರ್ ನಾಯಕ್, ದಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮದ್ ತಮೀಮ್ ಅಸ್ಸಾರಿ , ಲಯನ್ಸ್ ಜಿಲ್ಲೆ ಚೇರ್ ಪರ್ಸನ್ 317 ಎಫ್ ನ ಅಜಯ್ ಕೀರ್ತಿ, ವಾಸವಿ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ರಮೇಶ್ , ಲಿಯೋ ಕ್ಲಬ್ ದುರ್ಗಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು.

-----

ಕನ್ನಡದಲ್ಲೂ ಯುಪಿಎಸ್ ಪರೀಕ್ಷೆ ಬರೆಯಬಹುದು

ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವುದರ ಜೊತೆಗೆ ದೌರ್ಜನ್ಯವೆಸಗಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದರು, ಉನ್ನತ ಹುದ್ದೆಗಳಿಗೆ ಹೋಗಲು ಸಾಕಷ್ಟು ಅವಕಾಶಗಳು ಇವೆ. 1993ರಲ್ಲಿ ನಾನು ಐಪಿಎಸ್ ಉತ್ತೀರ್ಣ ಮಾಡಿದೆ. ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿ ಪಡೆದುಕೊಂಡು ಓದಬೇಕೆಂದರು. ಯುಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಇದೆ. ಆಂಗ್ಲ ಭಾಷಾ ಜ್ಞಾನದ ಕೊರತೆ ಇದೆ ಎಂದು ಕುಗ್ಗುವುದು ಬೇಡ. ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದೆಂದು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಡವಪುರ: ಬೇಬಿ ಬೆಟ್ಟ ಜಾತ್ರೆಯಲ್ಲಿ ಎತ್ತುಗಳ ಆಕರ್ಷಣೆ
ಭಿನ್ನತೆಗಳ ಮರೆತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ