ಅಲ್ಲಮಪ್ರಭು ವಚನಗಳಲ್ಲಿ ವಿಶ್ವಮಾನವತೆ ಅಡಗಿದೆ: ಹೊಸಮನಿ

KannadaprabhaNewsNetwork |  
Published : May 28, 2024, 01:08 AM IST
ಅಮೀನಗಡ ಪಟ್ಟಣದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ವಿಜಯಪುರದ ಪ್ರಶಾಂತ ದೇವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಅಮೀನಗಡ ಅಲ್ಲಮಪ್ರಭುವಿನ ವಚನಗಳಲ್ಲಿ ವಿಶ್ವಕುಟುಂಬದ ಪರಿಕಲ್ಪನೆಗಳಿವೆ ಎಂಧು ಪಟ್ಟಣದ ಸಂಗಮೇಶ್ವರ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕ ಶ್ರೀಕಾಂತ.ಎಚ್. ಹೊಸಮನಿ ಹೇಳಿದರು

ಕನ್ನಡಪ್ರಭವಾರ್ತೆ

ಅಮೀನಗಡ

ಅಲ್ಲಮಪ್ರಭುವಿನ ವಚನಗಳಲ್ಲಿ ವಿಶ್ವಕುಟುಂಬದ ಪರಿಕಲ್ಪನೆಗಳಿವೆ ಎಂಧು ಪಟ್ಟಣದ ಸಂಗಮೇಶ್ವರ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕ ಶ್ರೀಕಾಂತ.ಎಚ್. ಹೊಸಮನಿ ಹೇಳಿದರು.ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮತ್ತು ಶಿವಾನುಭವ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುವಿನ ಚಿಂತನೆಗಳು ವಿಷಯ ಕುರಿತು ಮಾತನಾಡಿ,, ಮಾನವೀಯ ಮೌಲ್ಯಗಳೊಂದಿಗೆ, ಸಮಾನತೆ, ಮಾನವೀಯತೆಯ ಅರಿವು ವಚನಗಳಲ್ಲಿ ಎದ್ದು ಕಾಣುತ್ತದೆ. ವಚನವನ್ನು ಪಚನ ಮಾಡಿಕೊಂಡಾಗ ಸಾರ್ಥಕತೆ ದೊರೆಯುತ್ತದೆ ಎಂದರು.ಸಾನ್ನಿಧ್ಯ ವಹಿಸಿ ಮಾತನಾಡಿದ ವಿಜಯಪುರದ ಪ್ರಶಾಂತ ದೇವರು, ಮಹಾಜ್ಞಾನಿ ಅಲ್ಲಮಪ್ರಭುವಿನ ವಚನಗಳಲ್ಲಿ ಬುದ್ಧನ ಅಹಿಂಸಾ ತತ್ವ ಎದ್ದು ಕಾಣುತ್ತದೆ. ಅವರ ವಿಚಾರಧಾರೆಯಲ್ಲಿ ಜಗತ್ತಿನ ಜ್ಞಾನವೇ ಅಡಗಿದ್ದು, ನಾವು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.

ಸಂಗಮೇಶ್ವರ ಪಪೂ ಕಾಲೇಜಿನ ವಿಶ್ರಾಂತ ಉಪ ಪ್ರಾಚಾರ್ಯ ವಿ.ಎಂ. ವಸ್ತ್ರದ, ಉಪ ಪ್ರಾಚಾರ್ಯ ಆರ್.ಜಿ. ಸನ್ನಿ, ಕಾಲೇಜಿನ ಪ್ರಾಚಾರ್ಯ ಎಂ.ಎನ್. ವಂದಾಲ, ವಿಶ್ರಾಂತ ಮುಖ್ಯಶಿಕ್ಷಕ ಎಚ್.ಜಿ. ರಾಜೂರ, ಕಮತಗಿ ಸೇವಾಲಾಲ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎ.ಹುಲ್ಲೀಕೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ