ದಾಬಸ್ಪೇಟೆ: ಸೋಂಪುರ ಹೋಬಳಿಯ ಮಾಕೇನಹಳ್ಳಿ ಕ್ರಷರ್ನಲ್ಲಿ ಕಳೆದ ಐದಾರು ದಿನಗಳಿಂದ ದರ ಏರಿಕೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕ್ರಷರ್ ಮಾಲೀಕರು ಮತ್ತು ಲಾರಿ ಚಾಲಕರ ನಡುವಿನ ಹಗ್ಗಜಗ್ಗಾಟ ಕೊನೆಗೆ ಸುಖಾಂತ್ಯ ಕಾಣದ ಹಿನ್ನೆಲೆಯಲ್ಲಿ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಯಲಚಗೆರೆ ನಟರಾಜು ಹಾಗೂ ಲಾರಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಮುಖಂಡರು ಇಬ್ಬರನ್ನು ಸಮಾಧಾನಪಡಿಸಿ ಸಭೆ ಮುಂದೂಡಿದರು.
ಮುಖಂಡ ಭಾರತೀಪುರ ಮೋಹನ್ ಕುಮಾರ್ ಮಾತನಾಡಿ, ಮಾಕೇನಹಳ್ಳಿ ಬಳಿ ಸುಮಾರು 6ಕ್ಕೂ ಅಧಿಕ ಕ್ರಷರ್ ಗಳಲ್ಲಿ ಸ್ಥಳೀಯ ಲಾರಿಗಳಿಗೆ, ಎಂ.ಸ್ಯಾಡ್ ಮತ್ತು ಫ್ರೀ ಸ್ಯಾಡ್ ಇತ್ಯಾದಿ ದಾಸ್ತೂನುಗಳಿಗೆ ಸರ್ಕಾರಿ ಆದೇಶ ವಿಲ್ಲದಿದ್ದರೂ ಟನ್ ಗೆ 150 ರೂಪಾಯಿ ಏರಿಕೆ ಮಾಡಿದ್ದಾರೆ ಮತ್ತು ಸ್ಥಳೀಯ ಲಾರಿಗಳಿಗೆ ದಾಸ್ತೂನು ನೀಡದೆ, ದೂರದ ಮಾದಾಪಟ್ಟಣದ ಭಾಗಕ್ಕೆ ಮಾರಾಟ ಮಾಡುತ್ತಿದ್ದರೇ, ಸ್ಥಳೀಯರಿಗೆ ಮೊದಲು ಆದ್ಯತೆ ನೀಡಿ ನಂತರ ಎಲ್ಲಿಗೆ ಬೇಕಾದರೂ ಎಂ.ಸ್ಯಾಡ್ ನೀಡಲಿ, ಮೊದಲ ಆದ್ಯತೆ ಸ್ಥಳೀಯರಿಗೆ ನೀಡಬೇಕು ಎಂದು ನಮ್ಮ ಆಗ್ರಹವಿದೆ ಎಂದರು.
ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜು ನೇತೃತ್ವದಲ್ಲಿ ಸಭೆ ಮಂಗಳವಾರಕ್ಕೆ ಮುಂದೂಡಿಕೆಯಾಗಿತ್ತು. ಇಂದು ಸಹ ರಾಜ್ಯ ಗಣಿ ಮಾಲೀಕರ ಸಂಘದ ಸಭೆ ಇದೇ ಶುಕ್ರವಾರ ನಡೆದ ನಂತರ ದರ ಕಡಿತ, ಇತ್ಯಾದಿ ಸಮಸ್ಯೆ ಇತ್ಯರ್ಥಪಡಿಸುತ್ತೇವೆ ಎಂದರು.ಭಾರಿ ವಾಗ್ವಾದ : ಈಗಾಗಲೇ ಕಳೆದ ವಾರ ಸಾಂಕೇತಿಕವಾಗಿ ಸ್ಥಳೀಯ ಮುಖಂಡರು ಪ್ರತಿಭಟನೆ ನಡೆಸಿ, ನಿನ್ನೇ ಸೋಮವಾರದವರೆಗೆ ಸಮಸ್ಯೆ ಬಗೆಹರಿಸಲು ಗಡುವು ನೀಡಿದ್ದರು, ಜುಲೈ 28 ಮಂಗಳವಾರ ಸಭೆ ಆರಂಭವಾಗುತ್ತಿದ್ದಂತೆ, ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜು ಮತ್ತು ಲಾರಿ ಚಾಲಕರ ಸಂಘದ ಉಮೇಶ್, ವಿವೇಕ್ ನಡುವೆ ಬಾರಿ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಲಾರಿ ಮಾಲೀಕರುಗಳಾದ ಪೆಮ್ಮನಹಳ್ಳಿ ದೇವರಾಜು, ಹೆಚ್.ಪಿ.ಸುರೇಶ್, ಕರವೇ ಮಂಜುನಾಥ್, ಅಲ್ಪಯ್ಯನಪಾಳ್ಯ ವೆಂಕಟೇಶ್, ಪೆಮ್ಮನಹಳ್ಳಿ ಮಂಜುನಾಥ್, ನಾಗರಾಜು, ಉಮೇಶ್, ವಿವೇಕ್, ಅನಿಲ್ ಕುಮಾರ್, ಐಸಾಮಿಪಾಳ್ಯ ಶ್ರೀಧರ್, ಶ್ರೀಪತಿಹಳ್ಳಿ ಮಂಜುನಾಥ್, ಹಲವಾರು ಲಾರಿ ಮಾಲೀಕರು ಉಪಸ್ಥಿತರಿದ್ದರು.