ಅವೈಜ್ಞಾನಿಕ ಕಾಮಗಾರಿ: ನೀರು ನುಗ್ಗಿ ಮುಸುಕಿನ ಜೋಳದ ಫಸಲು ನಷ್ಟ

KannadaprabhaNewsNetwork |  
Published : Nov 16, 2025, 01:30 AM IST
ಕಾವೇರಿ ನೀರಾವರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ | Kannada Prabha

ಸಾರಾಂಶ

ಹನೂರು: ಕಾವೇರಿ ನೀರಾವರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಪೈಪ್‌ಲೈನ್‌ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಫಸಲು ಹಾನಿಯಾಗಿದೆ ಎಂದು ರೈತರು ಅಕ್ರೋಶವನ್ನು ವ್ಯಕ್ತಪಡಿಸಿದರು.

ಹನೂರು: ಕಾವೇರಿ ನೀರಾವರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಪೈಪ್‌ಲೈನ್‌ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಫಸಲು ಹಾನಿಯಾಗಿದೆ ಎಂದು ರೈತರು ಅಕ್ರೋಶವನ್ನು ವ್ಯಕ್ತಪಡಿಸಿದರು.

ತಾಲೂಕಿನ ಕೆ.ಗುಂಡಾಪುರ ಕಾತಳಿ ಬಸವೇಶ್ವರ ದೇವಾಲಯದ ಬಳಿ ಉಡುತೊರೆ ಜಲಾಶಯದಿಂದ ಬಿಡುತ್ತಿರುವುದರಿಂದ ನೀರು ಕೆರೆ ತುಂಬಿ ಹೆಚ್ಚುವರಿ ನೀರು ಸರಾಗವಾಗಿ ಕಾಲುವೆಗೆ ಹೋಗಲಾಗದೆ ಹೆಚ್ಚುವರಿ ನೀರು ರೈತರ ಜಮೀನುಗಳಿಗೆ ನುಗ್ಗಿ ಪ್ರತಿ ವರ್ಷದಂತೆ ಈ ಬಾರಿಯೂ ಮುಸುಕಿನ ಜೋಳದ ಫಸಲು ನೀರು ಪಾಲಾಗಿದೆ ಎಂದು ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಪ್ಪದಲ್ಲಿ ಜೋಳದ ತೆನೆ ಸಂಗ್ರಹ: ಕೆ.ಗುಂಡಾಪುರದ ರೈತ ತಿಪ್ಪುರಪ್ಪ ತಮಗೆ ಸೇರಿರುವ ಸರ್ವೆ ನಂಬರ್ 141/1ರಲ್ಲಿ 4.78 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದು ಕೆರೆಯ ನೀರು ನುಗ್ಗಿ ಪಸಲು ನೀರಿನಲ್ಲಿ ನೆನೆದು ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ. ಕಳೆದ 20 ವರ್ಷಗಳಿಂದಲೂ ಇದು ಸಮಸ್ಯೆಯಾಗಿಯೇ ಕಾಡುತ್ತಿದೆ. ಅಂದಿನಿಂದಲೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸಮಸ್ಯೆಗೆ ಪರಿಹಾರ ನೀಡದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಹೀಗಾಗಿ ಜೀವ ಜಲವನ್ನು ಸಂರಕ್ಷಿಸುವ ಅಧಿಕಾರಿಗಳು ನಿರ್ಲಕ್ಷತನದಿಂದ ಫಸಲಿಗೆ ನಷ್ಟ ಉಂಟಾಗುತ್ತಿದೆ ರೈತರು ಅಳಲು ತೋಡಿಕೊಂಡಿದ್ದಾರೆ.

15ಸಿಎಚ್ಎನ್‌11ಮತ್ತು 12

ಹನೂರು ತಾಲೂಕಿನ ಕೆ ಗುಂಡಾಪುರದ ರೈತ ತಿಪುರಪ್ಪ ಜಮೀನಿಗೆ ಉಡುತೊರೆ ಜಲಾಶಯದ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ತುಂಬಿ ಹರಿಯುವ ನೀರು ಜಮೀನಿಗೆ ನುಗ್ಗಿ ಜೋಳದ ಪಸಲು ಹಾನಿಯಾಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ