ಕನ್ನಡಪ್ರಭ ವಾರ್ತೆ ಮಣಿಪಾಲತನ್ನ ಸಂಶೋಧನ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಮುಖ ಹೆಜ್ಜೆಯಾಗಿ ಮಾಹೆಯ ಮಣಿಪಾಲ್ ಸೆಂಟರ್ ಫಾರ್ ಬಯೊಥೆರಾಪಿಟಿಕ್ಸ್ ರೀಸರ್ಜ್ನಲ್ಲಿ ಅತ್ಯಾಧುನಿಕ ಏಜಿಲೆಂಟ್ ಬಯೊ-ಎಲ್ಸಿ ಇನ್ಫನೈಟಿ - 2 ವಿಶ್ಲೇಷಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ. ಶರತ್ ಕೆ. ರಾವ್ ಜಂಟಿಯಾಗಿ ಉದ್ಘಾಟಿಸಿದರು.
ಮಣಿಪಾಲ್ ಸೆಂಟರ್ ಫಾರ್ ಬಯೊಥೆರಾಪಿಟಿಕ್ಸ್ ರೀಸರ್ಜ್ನ ಪ್ರಾಧ್ಯಾಪಕ ಮತ್ತು ಸಂಯೋಜಕ ಡಾ. ರವಿರಾಜ ಎನ್. ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನ ಕ್ಷೇತ್ರದಲ್ಲಿ ಮಾಹೆಯು ‘ಸಂಶೋಧನಾ ಶ್ರೇಷ್ಠತೆಯ ವರ್ಷ’ದ ಆಚರಣೆಯನ್ನು ನಡೆಸುತ್ತಿದ್ದು, ಮಾಹೆಯ ವಿಜ್ಞಾನಿಗಳ ಮತ್ತು ಸಂಶೋಧಕರ ಸಮೂಹ ಪ್ರಯತ್ನದಿಂದಾಗಿ ಸಂಶೋಧನ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿದಿದೆ ಎಂದರು.
ಈ ಸೌಲಭ್ಯದ ಸಂಯೋಜಕ ಡಾ. ಸೌವಿಕ್ ಡೇ ಉಪಸ್ಥಿತರಿದ್ದರು. ಮಣಿಪಾಲ್ ಸೆಂಟರ್ ಫಾರ್ ಬಯೊಥೆರಾಪಿಟಿಕ್ಸ್ ರೀಸರ್ಚ್ನ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಉಪಾಧ್ಯ ಧನ್ಯವಾದ ಸಮರ್ಪಿಸಿದರು. ಅದಿತಿ ಖಾಮಮ್ಕರ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.