ಜಗಳೂರು ತಾಲೂಕು, ಮಾಯಕೊಂಡದಲ್ಲಿ ಯೂರಿಯಾ ಕೊರತೆ

KannadaprabhaNewsNetwork |  
Published : Jul 23, 2025, 01:46 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುವ ಜಗಳೂರು ತಾಲೂಕು ಹಾಗೂ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಾಗಿದೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಯೂರಿಯಾ ಕೊರತೆಯಾಗಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಪಪಡಿಸಿದೆ.

- ಜಿಲ್ಲೆಯಲ್ಲಿ ಇನ್ಯಾವ ತಾಲೂಕಲ್ಲೂ ಯೂರಿಯಾ ಕೊರತೆಯಾಗಿಲ್ಲ: ಕೃಷಿ ಜಂಟಿ ನಿರ್ದೇಶಕ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುವ ಜಗಳೂರು ತಾಲೂಕು ಹಾಗೂ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಾಗಿದೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಯೂರಿಯಾ ಕೊರತೆಯಾಗಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಪಪಡಿಸಿದೆ.

ಮಳೆಯಾಶ್ರಿತ ಜಗಳೂರು ತಾಲೂಕು ಹಾಗೂ ದಾವಣಗೆರೆ ತಾ. ಮಾಯಕೊಂಡ ಹೋಬಳಿಯಲ್ಲಿ 2 ದಿನಗಳಿಂದ ಯೂರಿಯಾ ಗೊಬ್ಬರ ಕೊರತೆಯಾಗಿದೆ. 3 ದಿನಗಳ ಹಿಂದೆ ಕೊರತೆ ಇರಲಿಲ್ಲ. ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಿರುವ ಭಾಗದಲ್ಲಿ ಯೂರಿಯಾಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ಕೊರತೆ ಆದಂತಾಗಿದೆ ಎಂದು ತಿಳಿಸಿದ್ದಾರೆ.

ಕ್ರಿಪ್ಕೋ ರೇಟ್ ಬಂದಿದ್ದು, ಅದನ್ನು ಕೊಟ್ಟಿದ್ದರಿಂದ ಖಾಲಿಯಾಗಿದೆ. ಯೂರಿಯಾ ದಾಸ್ತಾನು ಇರುವ ಕಡೆ ಕಡೆ ಬೇಡಿಕೆ ಬಂದಿಲ್ಲ. ಒಣಭೂಮಿ ಇರುವ ಕಡೆ ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ. ಭತ್ತ ನಾಟಿ ಮಾಡುವ ಕಡೆ ಬೇಡಿಕೆ ಇಲ್ಲ. ಇನ್ನು 4 ದಿನದಲ್ಲೇ ಸ್ಪಿಕ್‌ ರೇಟ್ ಬರಲಿದೆ. ಇದನ್ನು ಈಗಾಗಲೇ ಕೃಷಿ ಇಲಾಖೆ ಆಯುಕ್ತರ ಗಮನಕ್ಕೂ ತರಲಾಗಿದೆ. ದಾಸ್ತಾನು ಇರುವ ಕಡೆ ವಿತರಕರು ಖರೀದಿಸಿಕೊಂಡಿದ್ದಾರೆ. ಅಗತ್ಯವಿರುವ ಭಾಗದ ವಿತರಕರು ಕೇಳಿದರೆ ದಾಸ್ತಾನು ಇದ್ದಂತಹವರು ನೀಡುತ್ತಾರೆ ಎಂದು ಇಲಾಖೆ ಹೇಳಿದೆ.

ಇಲಾಖೆ ಕಾಪು ದಾಸ್ತಾನು ಖಾಲಿಯಾಗಿದೆ. ಬಫರ್ ಸ್ಟಾಕ್‌ ಸರ್ಕಾರದಿಂದ ಫೆಡರೇಷನ್‌, ಕೆಎಸ್‌ಸಿನಲ್ಲಿ ಇದ್ದುದು ಖಾಲಿಯಾಗಿದೆ. 4 ದಿನದಲ್ಲೇ ಸ್ಪಿಕ್ ರೇಟ್‌ ಬರಲಿದ್ದು, ಬಳಿ ಜಗಳೂರು ತಾಲೂಕು, ಮಾಯಕೊಂಡ ಗ್ರಾಮದಲ್ಲಿ ರಸಗೊಬ್ಬರ ಕೊರತೆ ನಿವಾರಣೆಯಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

- - -

(ಸಾಂದರ್ಭಿಕ ಚಿತ್ರ)

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ