ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಲು ಒತ್ತಾಯ

KannadaprabhaNewsNetwork |  
Published : Jun 16, 2024, 01:48 AM IST
14ಕೆಪಿಎಸ್ಎನ್ಡಿ1: | Kannada Prabha

ಸಾರಾಂಶ

ಯಾವುದೇ ವಿದ್ಯಾಸಂಸ್ಥೆಗೆ ಸೇರಿಸಬೇಕಾದರೆ ಸುಮಾರು ರು.30 ರಿಂದ ರು.1 ಲಕ್ಷವರೆಗೆ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುತ್ತಿವೆ. ಇದರ ಜೊತೆಗೆ ನಗರದಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಕೂಡ ವಿಪರೀತವಾಗಿ ತಲೆದೂರಿವೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ಖಾಸಗಿ ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ಅತಿಯಾದ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕ ಪಡೆಯುತ್ತಿರುವುದು ಮತ್ತು ಅನಧಿಕೃತ ವಸತಿ ನಿಲಯಗಳನ್ನು ನಿರ್ವಹಣೆ ಮಾಡುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿತು.

ಪಾಲಕರು ಮಕ್ಕಳನ್ನು ಯಾವುದೇ ವಿದ್ಯಾಸಂಸ್ಥೆಗೆ ಸೇರಿಸಬೇಕಾದರೆ ಸುಮಾರು ರು.30 ರಿಂದ ರು.1 ಲಕ್ಷವರೆಗೆ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುತ್ತಿವೆ. ಇದರ ಜೊತೆಗೆ ನಗರದಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಕೂಡ ವಿಪರೀತವಾಗಿ ತಲೆದೂರಿವೆ ಎಂದು ಆರೋಪಿಸಿದರು.

ಕೆಲವು ಖಾಸಗಿ ಶಾಲೆಗಳಲ್ಲಿ ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ಅನಧಿಕೃತವಾಗಿ ವಸತಿ ನಿಲಯವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಪಟ್ಟಿ ಬಿಡುಗಡೆ ಮಾಡಬೇಕು.

ನಗರದಲ್ಲಿರುವ ಎಲ್ಲಾ ಖಾಸಗಿ ಶಾಲೆಗಳಿಗೆ ಹಾಗೂ ಕೋಚಿಂಗ್ ಸೆಂಟರ್‌ಗಳಿಗೆ ಸ್ಥಾನಿಕ ಭೇಟಿ ನೀಡಿ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕದ ವಿವರವನ್ನು ಬಹಿರಂಗಪಡಿಸಬೇಕು. ವಿದ್ಯಾರ್ಥಿಗಳ ಮೂಲಸೌಕರ್ಯಗಳ ಬಗ್ಗೆ ವರದಿ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಿ ಹಾಗೂ ತಪ್ಪಿತಸ್ಥ ಕೋಚಿಂಗ್ ಸೆಂಟರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ನಮ್ಮ ಸಮಿತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಘಟಕದ ಸಂಚಾಲಕ ಮೌನೇಶ ಜಾಲವಾಡಗಿ, ಸದಸ್ಯರಾದ ವಿರೂಪಾಕ್ಷಿ ಸಾಸಲಮರಿ, ಆಲಂಭಾಷಾ ಬೂದಿಹಾಳ, ದೊಡ್ಡಬಸವ ಬೂದಿಹಾಳ, ನರಸಪ್ಪ ಅಮರಾಪುರ, ಪ್ರವೀಣ್ ಕುಮಾರ್, ಸಂತೋಷ, ಮುದುಕಪ್ಪ, ಧಾವಿದ್, ಶಾಮ್ ಮಕಂದರ್, ತಿಮ್ಮಪ್ಪ, ಹುಚ್ಚ ರೆಡ್ಡಿ ಬಳಗಾನೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಶಕಗಳಲ್ಲೇ ಅಪರೂಪದ ಘಟನೆ ಸ್ಪೀಕರ್‌ ಖಾದರ್‌ ಎದ್ದು ಹೋದರ್‌!
2 ಸಾವಿರ ಬೋಧಕ ಹುದ್ದೆಗಳ ನೇರ ನೇಮಕಾತಿ : ಸುಧಾಕರ್‌