ಅದ್ಧೂರಿಯಾಗಿ ನೆರವೇರಿದ ಚಾಂಗದೇವ ಮಹಾರಾಜರ ಉರೂಸ್‌

KannadaprabhaNewsNetwork |  
Published : Mar 09, 2026, 02:00 AM IST
ನವಲಗುಂದ ತಾಲೂಕಿನ ಯಮನೂರ ಚಾಂಗದೇವ ಮಹಾರಾಜ ದೇವಸ್ಥಾನದಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಶ್ರೀ ಚಾಂಗದೇವ ಮಹಾರಾಜ ಉರ್ಫ್ ರಾಜಾಬಾಗ ಸವಾರರ ದೇವಸ್ಥಾನದಲ್ಲಿ ಉರೂಸ್‌ ಅಂಗವಾಗಿ ದೇವಸ್ಥಾನದ ಪ್ರಮುಖರಾದ ಶ್ರೇಯಸ್ ಬರ್ಗೆ ಹಾಗೂ ಶುಭಂ ಬರ್ಗೆ ಅವರು ಪೂಜೆ ಸಲ್ಲಿಸಿದರು.

ನವಲಗುಂದ: ತಾಲೂಕಿನ ಯಮನೂರ ಗ್ರಾಮದ ಶ್ರೀ ಚಾಂಗದೇವ ಮಹಾರಾಜ ಉರ್ಫ್ ರಾಜಾಬಾಗ ಸವಾರರ ದೇವಸ್ಥಾನದಲ್ಲಿ ಉರೂಸ್‌ ಅಂಗವಾಗಿ ದೇವಸ್ಥಾನದ ಪ್ರಮುಖರಾದ ಶ್ರೇಯಸ್ ಬರ್ಗೆ ಹಾಗೂ ಶುಭಂ ಬರ್ಗೆ ಅವರು ಪೂಜೆ ಸಲ್ಲಿಸಿದರು.

ಭಾನುವಾರವೂ ಇಷ್ಟಾರ್ಥ ಈಡೇರಿದ ಸಾವಿರಾರು ಭಕ್ತರು ಬೆಣ್ಣಿಹಳ್ಳದಲ್ಲಿ ಸ್ಥಾನ ಮಾಡಿ ಹರಕೆ ತೀರಿಸಲು ಹಳ್ಳದಿಂದ ಗರ್ಭಗುಡಿಯ ವರೆಗೂ ದೀಡ್ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿದರು. ರಸ್ತೆಯುದ್ಧಕ್ಕೂ ಚಾಂಗದೇವ ಮಹಾರಾಜಕೀ ಜಯ ಎಂಬ ಘೋಷಣೆ ಕೂಗುತ್ತ ತಮ್ಮ ಕುಟುಂಬಸ್ಥರಿಗಾಗಿ ಹಳ್ಳದ ನೀರು ತುಂಬಿಕೊಂಡು ತೆರಳುತ್ತಿರುವುದು ಸಾಮಾನ್ಯವಾಗಿ ಕಂಡುಬಂದಿತು.

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಚಾಂಗದೇವರ ದೇವಸ್ಥಾನಕ್ಕೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ಮಾತನಾಡಿದ ಅವರು ​ದೇವಸ್ಥಾನದ ಪವಿತ್ರ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಮನಸ್ಸಿಗೆ ಒಂದು ರೀತಿಯ ಅವರ್ಣನೀಯ ಶಾಂತಿ ಸಿಕ್ಕಿತು. ಭಕ್ತರ ಕಷ್ಟಗಳನ್ನು ನೀಗುವ, ಶ್ರದ್ಧೆ ಮತ್ತು ನಂಬಿಕೆಯ ಪವಿತ್ರ ನೆಲೆಯಲ್ಲಿ ನಿಂತು ಆ ದೈವಕ್ಕೆ ಶಿರಬಾಗಿ ನಮಸ್ಕರಿಸುವಾಗ ಬದುಕಿನ ಎಲ್ಲ ಆತಂಕಗಳೂ ದೂರಾದಂತಾದವು. ​ಜಾತಿ-ಮತಗಳ ಭೇದಲ್ಲದ, ಪ್ರೀತಿ-ಮಾನವೀಯತೆಯೇ ಧರ್ಮವೆಂದು ಸಾರುವ ಈ ನೆಲದ ಶಕ್ತಿ ಅಪಾರ. ​ಶ್ರೀ ಚಾಂಗದೇವರ ಆಶೀರ್ವಾದದ ಹಸ್ತ ಸದಾ ನಮ್ಮೆಲ್ಲರ ಮೇಲಿರಲಿ, ನಾಡಿಗೆ ಸುಖ-ಶಾಂತಿ, ಸಮೃದ್ಧಿ ಸಿಗಲಿ ಎಂದರು.

ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನಾಶೀರ್ವಾದ ಪಡೆದರು. ಚಾಂಗದೇವರ ದರ್ಶನಕ್ಕಾಗಿ ಆಗಮಿಸಿದ ಭಕ್ತ ಸಮೂಹಕ್ಕೆ ಶನಿವಾರ ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಅಭಿಮಾನಿ ಬಳಗದಿಂದ 5 ಕ್ವಿಂಟಲ್ ಪಲಾವ್ ವಿತರಿಸಲಾಯಿತು. ಸಿಪಿಐ ರವಿಕುಮಾರ ಕಪ್ಪನವರ, ಪಿಎಸ್‌ಐ ಜರ್ನಾದನ ಭಟ್ರಳ್ಳಿ ನೇತೃತ್ವದ ಪೊಲೀಸರ ತಂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಗೆ ಹಜ್ ಭವನ ಘೋಷಣೆ: ಸಲೀಂ ಅಹ್ಮದ್‌ಗೆ ಅಭಿನಂದನೆ
ಹಕ್ಕುಪತ್ರ ಪಡೆಯಲು ಮಾರ್ಚ್ ಅಂತ್ಯದೊಳಗೆ ಶುಲ್ಕ ಪಾವತಿಸಿʼ: ಕೆ.ಎಸ್‌.ಆನಂದ್‌.