ಕನ್ನಡಪ್ರಭ ವಾರ್ತೆ ಚಾಮರಾಜನಗರ
ಈ ಕಾರ್ಬೊಫುರಾನ್ ಕೀಟನಾಶಕವು ಪ್ರಾಣಿಗಳು, ಪಕ್ಷಿಗಳು ಮತ್ತು ವನ್ಯಜೀವಿಗಳಿಗೆ ಗಂಭೀರ ದುಷ್ಪರಿಣಾಮವನ್ನುಂಟುಮಾಡುತ್ತದೆ. ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.ಜಿಮ್ ಕಾರ್ಬೆಟ್ ಹುಲಿ ರಕ್ಷಿತಾರಣ್ಯದಲ್ಲೂ ಇದೇ ವಿಷ ಬಳಕೆ: ಈ ಹಿಂದೆ, ಉತ್ತರ ಖಂಡದ ಜಿಮ್ ಕಾರ್ಬೆಟ್ ಹುಲಿ ರಕ್ಷಿತಾರಣ್ಯದ ತೆರಾಯ್ ಪ್ರದೇಶದಲ್ಲಿ ಎರಡು ಹುಲಿಗಳಿಗೆ ವಿಷ ಉಣಿಸಿದ ಪ್ರಕರಣದ ತನಿಖೆಯಲ್ಲಿ ಕಾರ್ಬೋಫುರಾನ್ ಬಳಕೆಯಾಗಿತ್ತು. ಇತರ ರಾಸಾಯನಿಕಗಳಂತೆ ತೀವ್ರವಾದ ವಾಸನೆಯಿಲ್ಲದೇ, ವಾಸನೆ ರಹಿತವಾಗಿರುವುದರಿಂದ ಕಾರ್ಬೊಫುರಾನ್ ವಿಷವನ್ನು ಗುರುತಿಸಲು ವನ್ಯಜೀವಿಗಳಿಗೆ ಕಷ್ಟವಾಗುತ್ತದೆ, ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.ದನದ ಶವದ ಹಿಂಭಾಗದಲ್ಲಿ, ಕೊಬ್ಬಿನಂಶ ಹೆಚ್ಚಿರುವ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಫುರಾನ್ ಸಿಂಪಡಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ತನಿಖಾ ಸಂಸ್ಥೆಯು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಹುಲಿಗಳ ಸಾವಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲಿದೆ.ಜೂನ್ 26 ರಂದು ಮಲೆ ಮಹದೇಶ್ವರ ವನುಜೀವಿ ವಿಭಾಗದ ಹೂಗ್ಯಂ ಪ್ರದೇಶದಲ್ಲಿ ತಾಯಿ ಹುಲಿ ಸೇರಿ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟಿರುವ ಘಟನೆ ನಡೆದಿತ್ತು. ಈ ಘಟನೆಯ ತನಿಖೆಗೆ ತಂಡವನ್ನು ನೇಮಿಸಲಾಗಿತ್ತು. ಈ ತಂಡದಲ್ಲಿ ಹಿರಿಯ ಅರಣ್ಯಾಧಿಕಾರಿಗಳು, ವನ್ಯಜೀವಿ ತಜ್ಞರು, ವನ್ಯಜೀವಿ ಪರಿಪಾಲಕರಿದ್ದಾರೆ.
ಕಾರ್ಬೊಫುರಾನ್ಗೆ ಅಮೆರಿಕಾ, ಯೂರೋಪ್ ನಿಷೇಧ ಭಾರತದಲ್ಲಿ ಅನುಮತಿ:ಕಾರ್ಬೊಫುರಾನ್ ಕೀಟನಾಶಕವಾಗಿದ್ದು, ಇದನ್ನು ಆಲೂಗಡ್ಡೆ, ಜೋಳ, ಭತ್ತ, ಸೋಯಾಬೀನ್ ಮತ್ತು ಹಣ್ಣಿನ ಕೃಷಿಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ಸಸ್ತನಿಗಳಿಗೆ, ಪಕ್ಷಿಗಳಿಗೆ, ಜಲಚರಿಗಳಿಗೆ ಅತ್ಯಂತ ವಿಷಕಾರಿಯಾಗಿದೆ. ಈ ಕೀಟನಾಶಕ ಬಳಕೆಯನ್ನು ಅಮೆರಿಕಾ, ಯೂರೋಪಿಯನ್ ಒಕ್ಕೂಟ, ಕೆನಡಾದಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಕಾರ್ಬೊಫುರಾನ್ನ ಹರಳುಗಳ ಬಳಕೆಗೆ ಅನುಮತಿಯಿದೆ.