ತಾಂತ್ರಿಕತೆಯನ್ನು ಅಭಿವೃದ್ಧಿಗೆ ಬಳಸಿ

KannadaprabhaNewsNetwork |  
Published : Dec 10, 2025, 12:30 AM IST
ಫೋಟೋ 9ಪಿವಿಡಿ4.9ಪಿವಿಜಿ4ಮಧುಗಿರಿ ಹಾಗೂ ಪಾವಗಡ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಶಾಮುಕ್ತ ತುಮಕೂರು.ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಿಪಿಐಗಳಾದ ಸುರೇಶ್‌ ಹಾಗೂ ಗಿರೀಶ್‌ ಅವರು ನೆರೆವೇರಿಸಿದರು. | Kannada Prabha

ಸಾರಾಂಶ

ಇಂದಿನ ಯುವಕರು ದೇಶದ ಕಣ್ಣುಗಳು ಇದ್ದ ಹಾಗೆ, ನಾವು ನೋಡುವ ದೃಷ್ಟಿಕೋನ ಸರಿಯಾಗಿದ್ದರೆ ನಾವು ಸಹ ಸರಿಯಾಗಿರುತ್ತೇವೆ. ಆಧುನಿಕ ಯುಗದಲ್ಲಿ ನಮಗೆ ಕೈಯಲ್ಲೆ ಎಲ್ಲಾ ತಾಂತ್ರಿಕತೆ ಲಭಿಸುತ್ತಿದ್ದು, ಇದನ್ನು ಬಳಸಿಕೊಂಡು ನಾವು ಅಭಿವೃದ್ಧಿಯತ್ತ ಸಾಗಬೇಕು. ದುಶ್ಚಟಗಳಿಗೆ ಬಲಿಯಾಗಬಾರದೆಂದು ಪಾವಗಡ ಪೊಲೀಸ್‌ ಠಾಣಾ ವೃತ್ತ ಇನ್ಸಪೆಕ್ಟರ್‌ ಸುರೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಇಂದಿನ ಯುವಕರು ದೇಶದ ಕಣ್ಣುಗಳು ಇದ್ದ ಹಾಗೆ, ನಾವು ನೋಡುವ ದೃಷ್ಟಿಕೋನ ಸರಿಯಾಗಿದ್ದರೆ ನಾವು ಸಹ ಸರಿಯಾಗಿರುತ್ತೇವೆ. ಆಧುನಿಕ ಯುಗದಲ್ಲಿ ನಮಗೆ ಕೈಯಲ್ಲೆ ಎಲ್ಲಾ ತಾಂತ್ರಿಕತೆ ಲಭಿಸುತ್ತಿದ್ದು, ಇದನ್ನು ಬಳಸಿಕೊಂಡು ನಾವು ಅಭಿವೃದ್ಧಿಯತ್ತ ಸಾಗಬೇಕು. ದುಶ್ಚಟಗಳಿಗೆ ಬಲಿಯಾಗಬಾರದೆಂದು ಪಾವಗಡ ಪೊಲೀಸ್‌ ಠಾಣಾ ವೃತ್ತ ಇನ್ಸಪೆಕ್ಟರ್‌ ಸುರೇಶ್‌ ಹೇಳಿದರು.

ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಶಾಮುಕ್ತ ತುಮಕೂರು ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಮದ್ಯಪಾನ, ಡ್ರಗ್ಸ್‌ನಿಂದ ಎಷ್ಟು ಯುವ ಪೀಳಿಗೆ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ವಿದ್ಯಾರ್ಥಿಗಳು ಮುಂದೆ ಬರಬೇಕು. ಅಲ್ಲದೇ ದುಶ್ಚಟ್ಟಗಳಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಗಿಂದ ಮೊಬೈಲ್‌ ಬಳಕೆ ಹೆಚ್ಚು ಅಪಾಯಕಾರಿಯಾಗಿದ್ದು, ಇದರಿಂದ ಸಮಯ ಹಾಳು ಎಂದು ಎಚ್ಚರಿಸಿದರು.

ಗ್ರಾಮಾಂತರ ಸಿಪಿಐ ಗಿರೀಶ್ ಮಾತನಾಡಿ, ದುಶ್ಚಟಗಳನ್ನು ಅಭ್ಯಾಸ ಮಾಡಿಕೊಂಡರೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಪೋಷಕರು ಸಹ ನಿಗಾ ವಹಿಸಿ ತಮ್ಮ ಮಕ್ಕಳ ಚಲನವಲನಗಳ ಕುರಿತು ಹೆಚ್ಚು ಗಮನಿಸಬೇಕು. ಮಾದಕ ವ್ಯಸನದಿಂದ ನಿಮ್ಮ ಬಹುಮುಖ್ಯ ಈ ದೇಶಕ್ಕೆ ಬೇಕಾದರ ಅತ್ಯುತ್ತಮ ಸಾಧನೆಗೆ ಹಿನ್ನಡೆಯಾಗಲಿದೆ ಎಂದ ಅವರು, ವಿವಿಧ ಸಂದರ್ಭದಲ್ಲಿ ಯಾವ ರೀತಿ ವರ್ತಿಸುವ ಮೂಲಕ ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಈ ವೇಳೆ ಬೊಮ್ಮಣ್ಣ , ರಾಮಕೃಷ್ಣಪ್ಪ, ಮನೋಜ್ ಕುಮಾ‌ರ್, ದೊಡ್ಡಯ್ಯ,ಪಳವಳ್ಳಿ ಬೊಮ್ಮಯ್ಯ, ಶಾಂತರಾಜು, ಹರೀಶ್, ಎಸ್‌ಐ ಶಿವಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ