ಗ್ರಾಪಂ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮೊದಲು

KannadaprabhaNewsNetwork |  
Published : May 18, 2024, 12:41 AM IST
ಈಶ್ವರಕುಮಾರ ಕಾಂದೂ | Kannada Prabha

ಸಾರಾಂಶ

ಗ್ರಾಪಂಗಳು ವಿಧಿಸುವ ತೆರಿಗೆ ಸಂಗ್ರಹಣೆ ೧೨ ತಾಲೂಕುಗಳ ೨೨೯ ಗ್ರಾಪಂಗಳಿಂದ ₹೧೩೫೦.೧೧ ಲಕ್ಷ ನಮ್ಮ ಜಿಲ್ಲೆಯಲ್ಲಿ ಆಗಿದ್ದು, ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ.

ಜಿ.ಡಿ. ಹೆಗಡೆ

ಕಾರವಾರ: ಗ್ರಾಪಂಗಳು ಸಾರ್ವಜನಿಕರಿಗೆ ವಿಧಿಸುವ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಕಳೆದ ೨೦೨೩- ೨೪ನೇ ಸಾಲಿನಲ್ಲಿ ಒಟ್ಟೂ ೨೨೯ ಗ್ರಾಪಂಗಳಿಂದ ₹೧೩೫೦.೧೧ ಲಕ್ಷ (₹೧೩೫ ಕೋಟಿ) ತೆರಿಗೆ ಸಂಗ್ರಹವಾಗಿದೆ.

ಅಂಕೋಲಾ ೨೧ ಗ್ರಾಪಂಗಳಿಂದ ₹೧೧೫.೭೨ ಲಕ್ಷದಲ್ಲಿ ₹ ೧೦೦.೩೪ ಲಕ್ಷ, ಭಟ್ಕಳ ೧೬ ಗ್ರಾಪಂಗಳಿಂದ ₹೧೮೫.೯೭ ಲಕ್ಷದಲ್ಲಿ ೧೪೮.೮೮ ಲಕ್ಷ, ದಾಂಡೇಲಿ ೪ ಗ್ರಾಪಂಗಳಿಂದ ₹೩೯.೩೩ ಲಕ್ಷದಲ್ಲಿ ₹೨೮.೩೮ ಲಕ್ಷ, ಹಳಿಯಾಳ ೨೦ ಗ್ರಾಪಂನಿಂದ ₹೨೦೪.೮೧ ಲಕ್ಷದಲ್ಲಿ ₹೧೩೪.೭೪ ಲಕ್ಷ, ಹೊನ್ನಾವರ ೨೬ ಗ್ರಾಪಂನಿಂದ ₹೧೬೬.೦೦ ಲಕ್ಷದಲ್ಲಿ ₹೧೨೯.೫೪ ಲಕ್ಷ, ಕಾರವಾರ ೧೮ ಗ್ರಾಪಂಗಳಿಂದ ₹೨೧೯.೮೬ ಲಕ್ಷದಲ್ಲಿ ₹೧೧೦.೨ ಲಕ್ಷ, ಕುಮಟಾ ೨೨ ಗ್ರಾಪಂಗಳಿಂದ ₹೨೭೬.೧೮ ಲಕ್ಷದಲ್ಲಿ ₹೧೬೬.೦ ಲಕ್ಷ, ಮುಂಡಗೋಡ ೧೬ ಗ್ರಾಪಂಗಳಿಂದ ₹೧೪೦.೨೯ ಲಕ್ಷದಲ್ಲಿ ₹೮೦.೩೬ ಲಕ್ಷ, ಸಿದ್ದಾಪುರ ೨೩ ಗ್ರಾಪಂಗಳಿಂದ ₹೧೩೫.೧೨ ಲಕ್ಷದಲ್ಲಿ ₹೧೧೧.೨೯ ಲಕ್ಷ, ಶಿರಸಿ ೩೨ ಗ್ರಾಪಂಗಳಿಂದ ₹೨೪೩.೮೭ ಲಕ್ಷದಲ್ಲಿ ₹೧೭೦.೦೦ ಲಕ್ಷ, ಜೋಯಿಡಾ ೧೬ ಗ್ರಾಪಂಗಳಿಂದ ₹೧೦೭.೧೬ ಲಕ್ಷದಲ್ಲಿ ₹೮೫.೦೫ ಲಕ್ಷ, ಯಲ್ಲಾಪುರ ೧೫ ಗ್ರಾಪಂಗಳಿಂದ ₹೧೧೮.೧೩ ಲಕ್ಷದಲ್ಲಿ ₹೮೪.೫೦ ಲಕ್ಷದಷ್ಟು ತೆರಿಗೆ ಸಂಗ್ರಹಣೆಯಾಗಿದೆ.

ಗ್ರಾಪಂಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿದೀಪಗಳ ನಿರ್ವಹಣೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ. ಹೀಗಾಗಿ ಗ್ರಾಪಂಗಳಿಗೆ ತೆರಿಗೆ ಸಂಗ್ರಹಣೆ ಮುಖ್ಯವಾಗಿದೆ. ಅಭಿನಂದನೀಯ: ಗ್ರಾಪಂಗಳು ವಿಧಿಸುವ ತೆರಿಗೆ ಸಂಗ್ರಹಣೆ ೧೨ ತಾಲೂಕುಗಳ ೨೨೯ ಗ್ರಾಪಂಗಳಿಂದ ₹೧೩೫೦.೧೧ ಲಕ್ಷ ನಮ್ಮ ಜಿಲ್ಲೆಯಲ್ಲಿ ಆಗಿದ್ದು, ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಹೆಚ್ಚಿನ ಗ್ರಾಪಂಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ತೆರಿಗೆ ಬಾಕಿ ಇಟ್ಟುಕೊಳ್ಳದೇ ಪಾವತಿ ಮಾಡಿದ್ದು, ಅಭಿನಂದನೀಯವಾಗಿದೆ ಎಂದು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರಿ, ಮೇಕೆ ಸಾಕಾಣಿಕೆ ಲಾಭದಾಯಕ ಉದ್ಯಮವಾಗಿ ಪರಿವರ್ತನೆ: ಡಾ. ಸಿದ್ದಲಿಂಗಯ್ಯ
ಶಿಕ್ಷಣಕ್ಕಿದೆ ಜಗತ್ತು ಬದಲಿಸುವ ಶಕ್ತಿ: ರಾಜಕುಮಾರ ಅಗಡಿ