ಹಿಮಾಲಯ ಮಡಿಲಲ್ಲಿ ಯೋಗ ದಿನ ಆಚರಿಸಿದ ವಚನಾನಂದ ಶ್ರೀ

KannadaprabhaNewsNetwork |  
Published : Jun 22, 2026, 02:00 AM IST
21 HRR. 01ಭಾರತದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ 2026 ಅನ್ನು ಪಂಚಮಸಾಲಿ ಶ್ರೀ ಪೀಠದ ವಚನಾನಂದ ಶ್ರೀ ಹಿಮಾಲಯದ ಲೇಹ್, ಲಡಾಖ್ ನಲ್ಲಿ ಆಚರಿಸಿದ್ದಾರೆ. | Kannada Prabha

ಸಾರಾಂಶ

“ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಈ ವರ್ಷದ ಧ್ಯೇಯವಾಕ್ಯದೊಂದಿಗೆ ಆರೋಗ್ಯ, ಸಾಮರಸ್ಯ ಹಾಗೂ ಆಂತರಿಕ ಜಾಗೃತಿಯ ಸಂದೇಶವನ್ನು ಸಾರಲಾಗಿದೆ ಎಂದು ಪಂಚಮಸಾಲಿ ಶ್ರೀ ಪೀಠದ ವಚನಾನಂದ ಶ್ರೀ ತಿಳಿಸಿದ್ದಾರೆ.

- ಲೇಹ್, ಲಡಾಖ್‌ನಲ್ಲಿ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ

- ಪ್ರಕೃತಿಯ ದಿವ್ಯಮೌನದ ಮಧ್ಯೆ ಸಾವಿರಾರು ಯೋಗಸಾಧಕರು ಭಾಗಿ

- ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಉಪಸ್ಥಿತಿ

- - -

ಹರಿಹರ: “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಈ ವರ್ಷದ ಧ್ಯೇಯವಾಕ್ಯದೊಂದಿಗೆ ಆರೋಗ್ಯ, ಸಾಮರಸ್ಯ ಹಾಗೂ ಆಂತರಿಕ ಜಾಗೃತಿಯ ಸಂದೇಶವನ್ನು ಸಾರಲಾಗಿದೆ ಎಂದು ಪಂಚಮಸಾಲಿ ಶ್ರೀ ಪೀಠದ ವಚನಾನಂದ ಶ್ರೀ ತಿಳಿಸಿದ್ದಾರೆ.

ಭಾರತದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ 2026 ಅನ್ನು ಹಿಮಾಲಯದ ವೈಭವಮಯ ನೆಲೆಯಾದ ಲೇಹ್, ಲಡಾಖ್‌ನಲ್ಲಿ ಆಚರಿಸಿ, ಇಂಥ ಭಾಗ್ಯ ದೊರೆತದ್ದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನಗೊಳಿಸುವ ಜೀವನದ ಸಮಗ್ರ ವಿಜ್ಞಾನ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ನೆನಪಿಸಿತು ಎಂದು ಯೋಗದ ಮಹತ್ವ ಕೊಂಡಾಡಿದ್ದಾರೆ.

ಹಿಮಾಲಯದ ಶಾಂತ ಪರ್ವತಗಳು, ನಿರ್ಮಲ ಆಕಾಶ, ಮತ್ತು ಪ್ರಕೃತಿಯ ದಿವ್ಯಮೌನದ ಮಧ್ಯೆ ಸಾವಿರಾರು ಯೋಗಸಾಧಕರು ಒಂದಾಗಿ ಸೇರಿ ಯೋಗದ ಜನ್ಮಭೂಮಿಯಾದ ಭಾರತದ ಶಾಶ್ವತ ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವದ ಮುಂದೆ ಮತ್ತೊಮ್ಮೆ ಪ್ರತಿಷ್ಠಾಪಿಸಿತು ಎಂದು ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.

ಈ ಮಹತ್ವದ ಸಂದರ್ಭದಲ್ಲಿ ಭಾರತದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ಭಿಕ್ಕು ಸಂಘಸೇನಾ ಅವರೊಂದಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ಸ್ಮರಣೀಯ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ.

- - -

(ಟಾಪ್‌ ಕೋಟ್‌) ಹಿಮಾಲಯದ ಶಿಖರಗಳ ಮೇಲೆ ಉದಯಿಸಿದ ಸೂರ್ಯನ ಸಾಕ್ಷಿಯಾಗಿ ನಡೆದ ಈ ಯೋಗೋತ್ಸವವು ಶಾಂತಿ, ಆರೋಗ್ಯ, ಏಕತೆ ಮತ್ತು ಉನ್ನತ ಚೈತನ್ಯದ ಸಂದೇಶವನ್ನು ವಿಶ್ವದಾದ್ಯಂತ ಹರಡಲಿ. ಯೋಗದ ಬೆಳಕು ಪ್ರತಿಯೊಂದು ಹೃದಯವನ್ನು ಸ್ಪರ್ಶಿಸಲಿ, ಪ್ರತಿಯೊಂದು ಕುಟುಂಬಕ್ಕೆ ಆರೋಗ್ಯವನ್ನು ನೀಡಲಿ ಮತ್ತು ಸಮಸ್ತ ಮಾನವಕುಲವನ್ನು ಶಾಂತಿ, ಸೌಹಾರ್ದತೆ ಹಾಗೂ ಆತ್ಮಜ್ಞಾನದತ್ತ ಮುನ್ನಡೆಸಲಿ.

- ವಚನಾನಂದ ಶ್ರೀ, ಪಂಚಮಸಾಲಿ ಪೀಠ, ಹರಿಹರ.

- - -

-21HRR.01:

ಭಾರತದ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ- 2026 ಅನ್ನು ಪಂಚಮಸಾಲಿ ಶ್ರೀ ಪೀಠದ ವಚನಾನಂದ ಶ್ರೀ ಹಿಮಾಲಯದ ಲೇಹ್, ಲಡಾಖ್‌ನಲ್ಲಿ ಆಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕಾಡೆಮಿಗಳಿಂದ ಹೊರನಾಡು ಕನ್ನಡಿಗರಿಗೆ ಪ್ರಾಶಸ್ತ್ಯ ಸಿಗಲಿ: ಕನ್ನಡ ಸಂಘಗಳು
ಅವೈಜ್ಞಾನಿಕ ಕಾಮಗಾರಿಗೆ ವಿರೋಧ: ರಸ್ತೆ ತಡೆದು ಪ್ರತಿಭಟನೆ