ಕಸ ವಿಲೇವಾರಿ ಮಾಡಿ ತುಳಸಿ ಗಿಡ ನೆಟ್ಟ ವಾಣಿ ಜೋಶಿ

KannadaprabhaNewsNetwork |  
Published : Dec 31, 2025, 03:15 AM IST
ಟಿಳಕವಾಡಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 5ರ ಮುಭಾಂಗದಲ್ಲಿ ಉಪಮೇಯರ್‌ ವಾಣಿ ವಿಲಾಸ ಜೋಶಿ ಅವರು ತುಳಸಿ ಸಸಿ ನೆಡುವ ಮೂಲಕ ಸ್ವಚ್ಛತೆಯ ಸಂದೇಶ ನೀಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಭವಿಷ್ಯ ರೂಪಿಸುವ ಟಿಳಕವಾಡಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.5ರ ಮುಂಭಾಗ ಕಸದ ರಾಶಿಯಿಂದ ದುರ್ನಾತ ಬೀರುತ್ತಿದ್ದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಂಕಟವಾಗಿದ್ದ ಈ ದುಸ್ಥಿತಿ ಹಿನ್ನೆಲೆಯಲ್ಲಿ ಮಂಗಳವಾರ ಉಪಮೇಯರ್ ವಾಣಿ ವಿಲಾಸ ಜೋಶಿ ಭೇಟಿ ನೀಡಿ, ಸ್ವಚ್ಛತೆಗೆ ಕ್ರಮ ಕೈಗೊಂಡರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭವಿಷ್ಯ ರೂಪಿಸುವ ಟಿಳಕವಾಡಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.5ರ ಮುಂಭಾಗ ಕಸದ ರಾಶಿಯಿಂದ ದುರ್ನಾತ ಬೀರುತ್ತಿದ್ದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಂಕಟವಾಗಿದ್ದ ಈ ದುಸ್ಥಿತಿ ಹಿನ್ನೆಲೆಯಲ್ಲಿ ಮಂಗಳವಾರ ಉಪಮೇಯರ್ ವಾಣಿ ವಿಲಾಸ ಜೋಶಿ ಭೇಟಿ ನೀಡಿ, ಸ್ವಚ್ಛತೆಗೆ ಕ್ರಮ ಕೈಗೊಂಡರು.

ಸ್ಥಳೀಯರ ಮನವಿಗೆ ಸ್ಪಂದಿಸಿದ ಅವರು, ಬೆಳಿಗ್ಗೆ ಶಾಲೆಯ ಗೇಟ್ ಮುಂದೆ ಬಿದ್ದಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಅಲ್ಲೇ ತುಳಸಿ ಗಿಡ ನೆಡುವ ಮೂಲಕ ಸ್ವಚ್ಛತೆ ಹಾಗೂ ಸಂಸ್ಕಾರದ ಸಂದೇಶ ನೀಡಿದರು.

ಈ ವೇಳೆ ಮಾತನಾಡಿದ ವಾಣಿ ವಿಲಾಸ್ ಜೋಶಿ, ಮಕ್ಕಳು ಓದುವ ಸ್ಥಳ ಕಸದ ಕೊಠಡಿ ಆಗಬಾರದು. ಇದು ಅವರ ಭವಿಷ್ಯ ರೂಪಿಸುವ ಪವಿತ್ರ ಸ್ಥಳ ಎಂದು ಹೇಳಿದರು. ಕಸದಿಂದ ಮುಚ್ಚಿಹೋಗಿದ್ದ ಶಾಲೆಯ ಪ್ರವೇಶ ದ್ವಾರ ಇದೀಗ ಹಸಿರು ತುಳಸಿಯೊಂದಿಗೆ ಹೊಸ ಸ್ಪರ್ಶ ಪಡೆದಿದೆ. ಸ್ಥಳೀಯರು, ಶಿಕ್ಷಕರು ಹಾಗೂ ಪಾಲಕರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಕೇವಲ ಸ್ವಚ್ಛತಾ ಕಾರ್ಯವಲ್ಲ, ಮಕ್ಕಳ ಬದುಕಿನ ಗೌರವ ಎಂದು ಅಭಿಪ್ರಾಯಪಟ್ಟರು. ಟಿಳಕವಾಡಿಯಲ್ಲಿ ನಡೆದ ಈ ಘಟನೆ ಬೆಳಗಾವಿಗೆ ಸ್ವಚ್ಛ ನಗರ – ಸುರಕ್ಷಿತ ಮಕ್ಕಳು ಎಂಬ ದೊಡ್ಡ ಸಂದೇಶ ನೀಡಿದಂತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ