ಹೊಸದುರ್ಗ: ಬೆಸ್ಕಾಂನ ಶ್ರೀರಾಂಪುರ ಉಪ ವಿಭಾಗದ ಬೆಲಗೂರು ಶಾಖಾ ವ್ಯಾಪ್ತಿಯಲ್ಲಿ ಬರುವ ಗರಗ ಮತ್ತು ಪಂಚನಹಳ್ಳಿ ಮಾರ್ಗ ಮಧ್ಯ ಹೊಸ ಲೈನ್ ಕಾಮಗಾರಿ ನಡೆಸುವ ಉದ್ದೇಶದಿಂದ ಬೆಲಗೂರು ಶಾಖಾ ವ್ಯಾಪ್ತಿಯ ಹಳ್ಳಿಗಳಾದ ಕಬ್ಬಳ, ಕಲ್ಕರೆ, ಬಳ್ಳಾಳಸಮುದ್ರ, ಬೆಲಗೂರು, ಕೋಡಿಹಳ್ಳಿ, ತೋಣಚೇನಹಳ್ಳಿ, ತಂಡಗ ಫೀಡರ್ ವ್ಯಾಪ್ತಿಯಲ್ಲಿ ಜು. 31ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಎಇಇ ನಿರಂಜನಮೂರ್ತಿ ತಿಳಿಸಿದ್ದಾರೆ.